ತವರಿಗೆ ಮರಳಿದ ಮಾಜಿ ಸೈನಿಕನಿಗೆ ಅದ್ಧೂರಿ ಸ್ವಾಗತ

KannadaprabhaNewsNetwork |  
Published : Aug 02, 2024, 12:46 AM IST
1ಡಿಡಬ್ಲೂಡಿ1ಮದ್ರಾಸ್‌ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಮರಳಿದ ಮಹಾಂತೇಶ ಅವರಿಗೆ ಧಾರವಾಡದ ರೈಲು ನಿಲ್ದಾಣದಲ್ಲಿ ಸ್ವಾಗತ ಮಾಡಲಾಯಿತು.  | Kannada Prabha

ಸಾರಾಂಶ

ಕುಟುಂಬ ತೊರೆದು ಹಲವು ವರ್ಷ ದೇಶ ಸೇವೆ ಸಲ್ಲಿಸಿ ನಿವೃತ್ತರಾಗಿ ಮರಳಿ ತವರೂರಿಗೆ ಬರುವಾಗ ಸೈನಿಕನಿಗೆ ಈ ರೀತಿಯಲ್ಲಿ ಸಿಗುವ ಗೌರವ, ಸ್ವಾಗತವು ಆತನಿಗೆ ಹೊಸ ಜೀವನ, ವೃತ್ತಿ ನಡೆಸಲು ಪ್ರೇರಣಾದಾಯಕ ಆಗಲಿದೆ.

ಧಾರವಾಡ:

ಬರೋಬ್ಬರಿ 24 ವರ್ಷ ಮಿಲಿಟರಿ ಸೇವೆ ಸಲ್ಲಿಸಿ ನಿವೃತ್ತರಾಗಿ ತವರೂರಿಗೆ ಮರಳಿದ ಸೈನಿಕರೊಬ್ಬರಿಗೆ ಇಲ್ಲಿಯ ರೈಲು ನಿಲ್ದಾಣದಲ್ಲಿ ಅವರ ಸ್ನೇಹಿತ ಬಳಗದ ವತಿಯಿಂದ ಆತ್ಮೀಯವಾಗಿ ಸ್ವಾಗತಿಸುವ ಮೂಲಕ ಬರಮಾಡಿಕೊಳ್ಳಲಾಯಿತು.

ಬೆಳಗಾವಿ ಜಿಲ್ಲೆ ಕಿತ್ತೂರಿನ ಹುಲಿಕಟ್ಟಿಯ ಮಹಾಂತೇಶ ದೂರಪ್ಪನವರ 17-ಮದ್ರಾಸ್‌ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಿ ಗುರುವಾರ ಬೆಳಗ್ಗೆ ರೈಲು ಮೂಲಕ ಧಾರವಾಡ ತಲುಪಿದರು. ಮಹಾಂತೇಶ ಜತೆಗೆ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಬಸನಗೌಡ ಪಾಟೀಲ, ಅಜಯ ಒಡೆಯರ, ಅಶೋಕ ಶಿವಳ್ಳಿ, ಮೃತ್ತುಜಾ, ರವಿ ಗರಗದ, ಸಚಿನ ಕೆ., ಶಿವಲಿಂಗಯ್ಯ ಸೇರಿದಂತೆ ಹಲವರು ರೈಲ್ವೆ ನಿಲ್ದಾಣದಲ್ಲಿ ಮಹಾಂತೇಶ ಅವರಿಗೆ ಆರತಿ ಎತ್ತಿ, ಶಾಲು ಹೊದಿಸಿ, ಹೂವಿನ ಹಾರ ಹಾಕಿ ದೇಶಭಕ್ತಿ ಘೋಷಣೆ ಕೂಗುವ ಮೂಲಕ ವಿಶೇಷವಾಗಿ ಸ್ವಾಗತಿಸಿದರು.

ಕುಟುಂಬ ತೊರೆದು ಹಲವು ವರ್ಷ ದೇಶ ಸೇವೆ ಸಲ್ಲಿಸಿ ನಿವೃತ್ತರಾಗಿ ಮರಳಿ ತವರೂರಿಗೆ ಬರುವಾಗ ಸೈನಿಕನಿಗೆ ಈ ರೀತಿಯಲ್ಲಿ ಸಿಗುವ ಗೌರವ, ಸ್ವಾಗತವು ಆತನಿಗೆ ಹೊಸ ಜೀವನ, ವೃತ್ತಿ ನಡೆಸಲು ಪ್ರೇರಣಾದಾಯಕ ಆಗಲಿದೆ. ಸೇನಾ ವೃತ್ತಿ ಮುಗಿಸಿ ನಾಗರಿಕ ಪ್ರಪಂಚಕ್ಕೆ ಬರುವ ಮಾಜಿ ಸೈನಿಕರು ಸಮಾಜದ ಜತೆಗೆ ಸಂಪರ್ಕ ಬೆಳೆಸಲು ಇಂತಹ ಸನ್ಮಾನ, ಗೌರವಗಳು ಅಗತ್ಯವಾಗಿ ಬೇಕು ಎಂದು ಮಾಜಿ ಸೈನಿಕ ಬಸನಗೌಡ ಪಾಟೀಲ ಹೇಳಿದರು.

ಸ್ನೇಹಿತರ ಗೌರವ ಸ್ವೀಕರಿಸಿದ ಮಹಾಂತೇಶ ಇನ್ಮುಂದೆ ನಮ್ಮದು ಹೊಸ ಜೀವನ ಶುರುವಾಗಲಿದೆ. ಪಾಲಕರ, ಸ್ನೇಹಿತರ ಮಾರ್ಗದರ್ಶನದಲ್ಲಿ ಸಮಾಜಕ್ಕೆ ಮಾದರಿ ಆಗುವಂತೆ ಬದುಕುವ ಆಶಯ ಹೊಂದಿದ್ದೇನೆ ಎಂದರು. ಮಹಾಂತೇಶ ಅವರ ಕುಟುಂಬದ ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!