ಅನಾದಿಕಾಲದಿಂದ ಬಂದ ಬಹು ದೊಡ್ಡ ಸಾಮಾಜಿಕ ಆಸ್ತಿ ಜಾನಪದ: ಜಿ.ಎನ್. ವಿಜಯಕುಮಾರ್

KannadaprabhaNewsNetwork |  
Published : Dec 29, 2025, 01:45 AM IST
28ಕೆಕೆಡಿಯು3. | Kannada Prabha

ಸಾರಾಂಶ

ಕಡೂರುಜಾನಪದ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ನಮ್ಮ ಜನಪದರಿಂದ ಅನಾದಿಕಾಲದಿಂದ ಬಂದ ಬಹು ದೊಡ್ಡ ಸಾಮಾಜಿಕ ಆಸ್ತಿಯಾಗಿದೆ ಎಂದು ಮಾಜಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಜಿ.ಎನ್. ವಿಜಯಕುಮಾರ್ ಹೇಳಿದರು.

ಜಾನಪದ ಕಲಾ ವೈಭವ, ಜಾನಪದ ಕಲೆಗಳ ತರಬೇತಿ ಶಿಬಿರ, ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಕಡೂರು

ಜಾನಪದ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ನಮ್ಮ ಜನಪದರಿಂದ ಅನಾದಿಕಾಲದಿಂದ ಬಂದ ಬಹು ದೊಡ್ಡ ಸಾಮಾಜಿಕ ಆಸ್ತಿಯಾಗಿದೆ ಎಂದು ಮಾಜಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಜಿ.ಎನ್. ವಿಜಯಕುಮಾರ್ ಹೇಳಿದರು.

ತಾಲೂಕಿನ ದೇವನೂರಿನ ಶ್ರೀಲಕ್ಷ್ಮೀಶ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಸಖರಾಯಪಟ್ಟಣ ಹೋಬಳಿ, ಕಡೂರು ತಾಲೂಕು ಹಾಗು ಚಿಕ್ಕಮಗಳೂರು ಜಿಲ್ಲಾ ಘಟಕದಿಂದ ಜಾನಪದ ಕಲಾ ವೈಭವ, ಜಾನಪದ ಕಲೆಗಳ ತರಬೇತಿ ಶಿಬಿರ, ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಾನಪದ ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ಸಹನೆ, ಪ್ರೀತಿ ಜಾತ್ಯಾತೀತ ಮನೋಭಾವನೆ ಮೂಡಿಸುವಲ್ಲಿ ಸಹಕಾರಿ ಯಾಗಿದೆ, ಸ್ವಾಸ್ಥ ಸದೃಢ ಸಮಾಜ ಕಟ್ಟಿ ಮುಂದಿನ ಜನಾಂಗಕ್ಕೆ ಕೊಂಡೊಯ್ಯಲು ದೊಡ್ಡ ಸೇತುವೆಯಾಗಿದೆ ಎಂದು ಅಭಿಪ್ರಾಯ ಪಟ್ಟರು.ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಜಿ. ಬಿ. ಸುರೇಶ್ ಮಾತನಾಡಿ, ಜಾನಪದ ಭಾರತೀಯ ಸಂಸ್ಕೃತಿ ತಾಯಿ ಬೇರಾಗಿದೆ, ಜಾನಪದ ಭಾರತೀಯರ ಆಹಾರ ಪದ್ಧತಿ, ವೇಷ ಭೂಷಣ, ಉಡುಗೆ, ತೊಡುಗೆ, ಸಾಹಿತ್ಯ ,ಕಲೆ, ಸಂಗೀತ, ಕೃಷಿ, ರಾಜಕೀಯ, ಕೈಗಾರಿಕೆ ವಾಣಿಜ್ಯ ವ್ಯಾಪಾರ ಸೇರಿದಂತೆ ಎಲ್ಲ ಕ್ಷೇತ್ರಗಳ ಭದ್ರ ಬುನಾದಿ. ಈ ಎಲ್ಲ ಕ್ಷೇತ್ರಗಳ ಸಾಧಕ ಬಾಧಕಗಳನ್ನು ಅನಾದಿ ಕಾಲದಿಂದಲೇ ನಮ್ಮ ಜನಪದರು ನಮಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಅಲ್ಲದೆ ಜಾನಪದ ಎಲ್ಲ ಜನಾಂಗದವರ ಭಾಷೆ, ಸಾಹಿತ್ಯ, ಸಂಗೀತ ಕಲೆಗಳ ತಾಯಿ ಬೇರು. ಆದ್ದರಿಂದ ಇಂದಿನ ಯುವಕ ಯುವತಿಯರು, ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಜಾನಪದ ಕಲೆ, ಸಾಹಿತ್ಯ, ಸಂಗೀತಕ್ಕೆ ಹೆಚ್ಚು ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು.

ರಂಗಕರ್ಮಿ ಮತ್ತು ಸಾಹಿತಿ ಮಂಜುನಾಥ ಸ್ವಾಮಿ ಮಾತನಾಡಿ, ಜಾನಪದವೆಂದರೆ ಅದೊಂದು ಜ್ಞಾನಪದ. ಅದೊಂದು ಬೃಹತ್ ಗ್ರಂಥ ಭಂಡಾರ, ಇಡೀ ಸಮಾಜವೇ ಒಂದು ದೊಡ್ಡ ವಿಶ್ವವಿದ್ಯಾನಿಲಯವಾಗಿದೆ. ಜಾನಪದ ನಮ್ಮ ಮಣ್ಣಿನಲ್ಲಿ ಮತ್ತು ಪರಿಸರದಲ್ಲಿ ಬೆರೆತುಹೋಗಿದೆ. ಜಾನಪದವಿಲ್ಲದ ಸಮಾಜವೇ ಇಲ್ಲ. ನಮ್ಮ ನಾಡಿನ ಅನೇಕ ಕವಿಗಳು, ಜನಪದರು, ಶರಣರು ನಮ್ಮ ನಾಡಿನ ಮತ್ತು ಗ್ರಾಮೀಣ ಭಾರತದ ಜಾನಪದ ಸಂಸ್ಕೃತಿಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.

ಸಖರಾಯಪಟ್ಟಣ ಹೋಬಳಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಮಲ್ಲಿಕಾರ್ಜುನಪ್ಪ ಕಾಮೇನ ಹಳ್ಳಿ ಮಾತನಾಡಿ, ನಮ್ಮ ಹೋಬಳಿಯಲ್ಲಿ ಹುಟ್ಟಿ ಬೆಳೆದ ಯಾವುದೇ ಜಾನಪದ ಕಲೆ ನಶಿಸಿ ಹೋಗದಂತೆ ಕ್ರಿಯಾಶೀಲವಾಗಿ ಕ್ರಮ ವಹಿಸುತ್ತೇನೆ ಎಂದರು.

ಚಿಕ್ಕಮಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಾವಿನಕೆರೆ ದಯಾನಂದ, ಸಾಹಿತಿ ಬಿ.ರಾಜಪ್ಪ ಚಿಕ್ಕನ ಲ್ಲೂರು ಮತ್ತು ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಅಧ್ಯಕ್ಷ ಜಗದೀಶ್ವರ ಆಚಾರ್ ಮಾತನಾಡಿದರು. ದೇವನೂರು ಗ್ರಾ.ಪಂ. ಅಧ್ಯಕ್ಷೆ ದೀಪಾ ದಕ್ಷಿಣಾಮೂರ್ತಿ ಅಧ್ಯಕ್ಷತೆ ವಹಿಸಿದ್ದರು.

ಚಿಕ್ಕನಲ್ಲೂರು ಜಯಣ್ಣ, ಗಾಯತ್ರಮ್ಮ, ವಸಂತ, ಶೈಲಜಾ, ಶಂಕರಪ್ಪ, ಷಣ್ಮುಖಪ್ಪ, ದಕ್ಷಿಣ ಮೂರ್ತಿ, ಪ್ರಾಂಶುಪಾಲರಾದ ಪುಟ್ಟಸ್ವಾಮಿ ನಾಯಕ್, ಮುಖ್ಯ ಶಿಕ್ಷಕ ಎನ್‌ಸಿ ಗುರುಮೂರ್ತಿ, ಸಾಹಿತಿ ಬಿಳಿಗಿರಿ ವಿಜಯಕುಮಾರ್, ತಿಪ್ಪೇಶ್,ಗ್ರಾ.ಪಂ. ಉಪಾಧ್ಯಕ್ಷರು, ಸದಸ್ಯರು ನಾಗರಾಳು, ದೇವನೂರು, ಚಿಕ್ಕದೇವನೂರು ಗ್ರಾಮಸ್ಥರು ಉಪಸ್ಥಿತರಿದ್ದರು. 28ಕೆಕೆಡಿಯು3.

ಕಡೂರು ತಾಲೂಕಿನ ದೇವನೂರಿನ ಶ್ರೀಲಕ್ಷ್ಮೀಶ ಪದವಿಪೂರ್ವಕಾಲೇಜಿನ ಆವರಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಸಖರಾಯಪಟ್ಟಣ ಹೋಬಳಿ, ಕಡೂರು ತಾಲೂಕು ಹಾಗು ಚಿಕ್ಕಮಗಳೂರು ಜಿಲ್ಲಾ ಘಟಕದಿಂದ ಜಾನಪದ ಕಲಾ ವೈಭವ, ಜಾನಪದ ಕಲೆಗಳ ತರಬೇತಿ ಶಿಬಿರ, ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟನೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆ ಮರು ಡಾಂಬರೀಕರಣಕ್ಕೆ ಶಾಸಕರಿಂದ ಗುದ್ದಲಿ ಪೂಜೆ
ಸಕಲೇಶಪುರ ಪ್ರೆಸ್‌ಕ್ಲಬ್‌ ಅಧ್ಯಕ್ಷರಾಗಿ ಕಾಂತರಾಜ್‌ ಹೊನ್ನೇಕೋಡಿ ಆಯ್ಕೆ