ಚನ್ನಗಿರಿ ತುಮ್ಕೋಸ್‌: ಎಚ್.ಎಸ್.ಶಿವಕುಮಾರ್ ತಂಡಕ್ಕೆ ಭರ್ಜರಿ ಗೆಲವು

KannadaprabhaNewsNetwork |  
Published : Mar 11, 2025, 12:47 AM IST
ತುಮ್ ಕೋಸ್ ನ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಜಯಗಳಿಸಿದ ಸಂಸ್ಥೆಯ ಮಾಜಿ ಅಧ್ಯಕ್ಷ ಹೆಚ್.ಎಸ್.ಶಿವಕುಮಾರ್ ಇವರ ತಂಡ ಜಯಗಳಿಸಿದ್ದು ಇವರಿಗೆ ಹೂ ಗುಚ್ಚ ನೀಡುವ ಮೂಲಕ ಅಭಿನಂಧಿಸಿದ ಚುನಾವಣಾಧಿಕಾರಿ ಎಸ್.ಮಂಜುಳಾ | Kannada Prabha

ಸಾರಾಂಶ

ಪಟ್ಟಣದ ತೋಟ ಉತ್ಪನ್ನ ಮಾರಾಟ ಸಹಕಾರ ಸಂಘ (ತುಮ್ಕೋಸ್‌) ಸಂಸ್ಥೆ ಆಡಳಿತ ಮಂಡಳಿ ಚುನಾವಣೆ ಫಲಿತಾಂಶವನ್ನು ಸೋಮವಾರ ಚುನಾವಣಾಧಿಕಾರಿ ಎಸ್.ಮಂಜುಳಾ ಘೋಷಣೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಚನ್ನಗಿರಿ

ಪಟ್ಟಣದ ತೋಟ ಉತ್ಪನ್ನ ಮಾರಾಟ ಸಹಕಾರ ಸಂಘ (ತುಮ್ಕೋಸ್‌) ಸಂಸ್ಥೆ ಆಡಳಿತ ಮಂಡಳಿ ಚುನಾವಣೆ ಫಲಿತಾಂಶವನ್ನು ಸೋಮವಾರ ಚುನಾವಣಾಧಿಕಾರಿ ಎಸ್.ಮಂಜುಳಾ ಘೋಷಣೆ ಮಾಡಿದರು.

ತುಮ್ಕೋಸ್‌ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಫೆಬ್ರವರಿ 9ರಂದು ನಡೆದು, ಅದೇ ದಿನ ಸಂಜೆ ಯಿಂದ ಮತಗಳ ಏಣಿಕೆ ಕಾರ್ಯ ನಡೆದಿತ್ತು. ಆದರೆ ನ್ಯಾಯಾಲಯ ಆದೇಶದಂತೆ ಫಲಿತಾಂಶ ಘೋಷಣೆ ಮಾಡಿರಲಿಲ್ಲ.

ಈಗ ಫಲಿತಾಂಶ ಘೋಷಣೆ ಮಾಡುವಂತೆ ನ್ಯಾಯಾಲಯ ಆದೇಶ ಬಂದಿದೆ. ಆದಕಾರಣ ಸೋಮವಾರ ಚುನಾವಣಾಧಿಕಾರಿ ಎಸ್.ಮಂಜುಳಾ ಸಂಸ್ಥೆ ಸಭಾಂಗಣದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಸದಸ್ಯರ ಸಮ್ಮುಖ ಫಲಿತಾಂಶ ಘೋಷಣೆ ಮಾಡಿದರು.

ಸಹಾಯಕ ಚುನಾವಣಾಧಿಕಾರಿ ಜಗದೀಶ್, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮಧು ಸೇರಿದಂತೆ ಸಂಸ್ಥೆ ಎಲ್ಲ ನೂತನ ನಿರ್ದೇಶಕರು, ಕಚೇರಿ ಸಿಬ್ಬಂದಿ ಹಾಜರಿದ್ದರು.

- - -

ಬಾಕ್ಸ್‌ ತುಮ್ಕೋಸ್‌ ಸಂಸ್ಥೆ ಆಡಳಿತ ಮಂಡಳಿಯಲ್ಲಿ 15 ನಿರ್ದೇಶಕರ ಸ್ಥಾನಗಳಿಗೆ ಫೆ.9ರಂದು ನಡೆದ ಚುನಾವಣೆಯಲ್ಲಿ ಸಂಸ್ಥೆ ಮಾಜಿ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ನೇತೃತ್ವದ ತಂಡದಿಂದ ಸ್ಪರ್ಧಿಸಿದ್ದ 15 ಸ್ಥಾನಗಳಲ್ಲಿ 15 ಸ್ಥಾನಗಳಲ್ಲಿಯೂ ಜಯ ಗಳಿಸುವ ಮೂಲಕ ತುಮ್ಕೋಸ್‌ ಸಂಸ್ಥೆ ಅಧಿಕಾರ ಹಿಡಿದಿದ್ದಾರೆ.

ತಂಡದ ನಾಯಕ ಎಚ್.ಎಸ್. ಶಿವಕುಮಾರ್ 7508 ಮತಗಳನ್ನು ಪಡೆದರೆ, ಜಿ.ಆರ್. ಶಿವಕುಮಾರ್ 6669, ವಿಜಯಕುಮಾರ್ 6965, ಟಿ.ವಿ.ರಾಜು 6905, ಎಂ.ಮಂಜುನಾಥ್ 6699, ಎಚ್.ಎಸ್. ಮಂಜುನಾಥ ಹುಗ್ಗಿ 6792, ಬಿ.ಎಸ್. ಬಸವರಾಜ್ 6201, ಕೆ.ಎನ್. ಪ್ರಭುಲಿಂಗಪ್ಪ 6669, ಬಿ.ಚನ್ನಬಸಪ್ಪ 6501, ಎಂ.ಎನ್. ಗಂಗಾಧರಪ್ಪ 7362, ಕೆ.ಜಿ.ಓಂಕಾರಮೂರ್ತಿ 6973, ಎಂ.ಈ. ಮೀನಾಕ್ಷಿ 6557, ರಘು ಎಸ್. ನಾಯ್ಕ್ 5864, ಎನ್.ಲೋಕೇಶ್ವರ ಮಾಡಾಳು 6186, ಎಲ್.ವಿ. ಶೋಭಾ 6361 ಮತಗಳನ್ನು ಪಡೆದು ಪ್ರತಿ ಸ್ಪರ್ಧಿ ತಂಡದ ಅಭ್ಯರ್ಥಿಗಳಿಗಿಂತ ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.

ತುಮ್ಕೋಸ್‌ ಆರಂಭಗೊಂಡು 41 ವರ್ಷಗಳ ಇತಿಹಾಸದಲ್ಲಿಯೇ ಒಂದೇ ಗುಂಪಿನ 15 ಆಡಳಿತ ಮಂಡಳಿ ನಿರ್ದೇಶಕರು ಗೆಲುವು ಸಾಧಿಸುವುದು ಪ್ರಥಮವಾಗಿದೆ.

- - - -10ಕೆಸಿಎನ್‌ಜಿ1.ಜೆಪಿಜಿ:

ತುಮ್ಕೋಸ್‌ ಆಡಳಿತ ಮಂಡಳಿ ಚುನಾವಣೆಯಲ್ಲಿ ಜಯಗಳಿಸಿದ ಸಂಸ್ಥೆ ಮಾಜಿ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ಅವರ ತಂಡ ಜಯಗಳಿಸಿದ್ದು, ಚುನಾವಣಾಧಿಕಾರಿ ಎಸ್.ಮಂಜುಳಾ ಹೂ ಗುಚ್ಚ ನೀಡಿ ಅಭಿನಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊಸ ವರ್ಷ: ದೇವಾಲಯಗಳಿಗೆ ಭಕ್ತರ ದಾಂಗುಡಿ
ಜಿ ರಾಮ್‌ ಜಿ, ಅನುದಾನ ಕಡಿತ ವಿರುದ್ಧ ಇಂದು ರಾಜ್ಯ ಸಂಪುಟದಲ್ಲಿ ನಿರ್ಣಯ?