ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಕಲ್ಲಹಳ್ಳಿಯ ಶ್ರೀ ಶಿವಗಂಗಾ ಯೋಗ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ವ್ಯಾಸ ಪೂರ್ಣಿಮೆ, ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿ, ಗುರುಹಿರಿಯರನ್ನು ನಾವೆಲ್ಲರೂ ಗೌರವಿಸಬೇಕು. ಪ್ರತಿಯೊಂದು ಹಂತದಲ್ಲೂ ಕ್ಷೇತ್ರದಲ್ಲೂ ಗುರುವಿನ ಮಾರ್ಗದರ್ಶನ ಬೇಕೇ ಬೇಕು. ಶಿಕ್ಷಣದ ಜೊತೆಗೆ ಯಾವುದೇ ಸಂದರ್ಭದಲ್ಲಿ ಸಣ್ಣಪುಟ್ಟ ಸಹಾಯವನ್ನು ಮಾಡಿದವನು ಸಹ ಗುರುವಾಗುತ್ತಾನೆ ಎಂದು ತಿಳಿಸಿದರು.
ಮನೆಯ ಯಜಮಾನ ಕುಟುಂಬವನ್ನು ರಕ್ಷಿಸಿದರೆ ಒಬ್ಬ ಗುರು ಸಮಾಜವನ್ನು ರಕ್ಷಿಸುತ್ತಾನೆ. ಗುರುವಿಗೆ ಸಹಿಸಿಕೊಳ್ಳುವ ಶಕ್ತಿಯೊಂದಿಗೆ ಸಮಾಜವನ್ನು ತಿದ್ದುವ ಭಾರವಾದ ಶಕ್ತಿಯನ್ನು ಗುರು ಹೊಂದಿರುತ್ತಾನೆ ಎಂದರು.ಶ್ರೀ ಶಿವಗಂಗಾ ಯೋಗ ಕೇಂದ್ರ ರಾಜ್ಯದಲ್ಲಿ ಮಾದರಿಯಾಗಿದೆ. ಬೆಳಗ್ಗೆ ಸಾವಿರಾರು ಜನ ಯೋಗ ಶಿಬಿರಾರ್ಥಿಗಳು ಬಂದು ಸೇರುವುದು ಸಣ್ಣ ಮಾತಲ್ಲ. ಈ ಸ್ಥಳಕ್ಕೆ ಅಂತ ದಿವ್ಯವಾದ ಶಕ್ತಿ ಇದೆ. ಪ್ರಾತಃಕಾಲದಲ್ಲಿ ಯೋಗ ಮಾಡುವವರು ಸದಾ ಹಸನ್ಮುಖಿಗಳಾಗಿ ಇರುವ ಜತೆಯಲ್ಲಿ ದೀರ್ಘಾಯುಷ್ಯ ಹೊಂದಿರುವವರಾಗಿರುತ್ತಾರೆ ಎಂದು ಹೇಳಿದರು.
ಶ್ರೀ ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷ ಎಸ್.ರುದ್ರೇಗೌಡ ಎಲ್ಲರನ್ನೂ ಸನ್ಮಾನಿಸಿದರು. ಉರಗತಜ್ಞ ಪ್ರಭಾಕರ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ಜನಶಿಕ್ಷಣ ಸಂಸ್ಥೆ ನಿರ್ದೇಶಕಿ ಎಸ್.ವೈ.ಅರುಣಾದೇವಿ, ಹೊಸತೋಟ ಸೂರ್ಯನಾರಾಯಣ, ಮೋಹನ್ ಬಾಳೇಕಾಯಿ, ಕಾಟನ್ ಜಗದೀಶ್, ಕೆ.ವಿ.ವಸಂತಕುಮಾರ್, ಹಾಲಪ್ಪ, ಕಲಗೋಡು ರತ್ನಾಕರ್, ಕಿರಣ್, ಎಂ.ಪಿ. ಆನಂದಮೂರ್ತಿ, ಜಿ.ಎಸ್. ಓಂಕಾರ್, ಜಿ.ವಿಜಯಕುಮಾರ್, ದೇವೇಂದ್ರ ಹಾಗೂ ಟ್ರಸ್ಟಿಗಳು, ಪೋಷಕರು. ಶಿಕ್ಷಕರು. ಉಪಸ್ಥಿತರಿದ್ದರು.