- ₹120 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಉದ್ಘಾಟಿಸಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಕೆಎಸ್ಆರ್ಟಿಸಿ ನೂತನ ಹೈಟೆಕ್ ಬಸ್ ನಿಲ್ದಾಣದಲ್ಲಿ ನೂತನ ಬಸ್ ಮಾರ್ಗಗಳು ಹಾಗೂ ನಿಲ್ದಾಣದಿಂದ ಬಸ್ಗಳ ಕಾರ್ಯಾಚರಣೆಗೆ ಹಸಿರು ನಿಶಾನೆ ತೋರುವ ಮೂಲಕ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಚಾಲನೆ ನೀಡಿದರು. ಬಳಿಕ ನಿಗಮದ ನೌಕರರ ಬಳಗ, ಅಭಿಮಾನಿಗಳು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸುವ ಮೂಲಕ ಜನ್ಮದಿನ ಆಚರಿಸಿಕೊಂಡರು.
ಸಚಿವರು ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಯಿಂದ ಶೇ.70 ಅನುದಾನ ಹಾಗೂ ಕೆಎಸ್ಆರ್ಟಿಸಿ ವತಿಯಿಂದ ಶೇ.25 ಅನುದಾನ ಸೇರಿದಂತೆ ಒಟ್ಟು ₹120 ಕೋಟಿ ವೆಚ್ಚದಲ್ಲಿ ದಾವಣಗೆರೆಯಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣವಾಗಿದೆ. ಅಭಿವೃದ್ಧಿ ಹೊಂದುತ್ತಿರುವ ಮಹಾನಗರಕ್ಕೆ ಇಂತಹದ್ದೊಂದು ಹೈಟೆಕ್ ಬಸ್ ನಿಲ್ದಾಣದ ಅಗತ್ಯತೆ ಇದ್ದುದನ್ನು ಈಗ ಪೂರೈಸಲಾಗಿದೆ. ನೂತನ ಹೈಟೆಕ್ ಬಸ್ ನಿಲ್ದಾಣದಲ್ಲಿ 3 ಮಲ್ಟಿಪ್ಲೆಕ್ಸ್, ಹಲವಾರು ಅಂಗಡಿಗಳು, ಬಟ್ಟೆ ಅಂಗಡಿಗಳು, ಹೋಟೆಲ್ಗಳು, ಬೇಕರಿಗಳು ಹೀಗೆ ಪ್ರಯಾಣಿಕರಿಗೆ ಅನುಕೂಲಕರವಾಗಿದೆ ಎಂದರು.ಪುಣ್ಯಾತ್ಮರು ಹೈಟೆಕ್ ಬಸ್ ನಿಲ್ದಾಣದ ಟೆಂಡರ್ ಅಲ್ಲಿಂದಲೇ ಕರೆದಿದ್ದರಿಂದ ಇಲ್ಲಿ ಗುಣಮಟ್ಟದ ನಿಲ್ದಾಣದ ಕೆಲಸವಾಗಿದೆ. ಒಳ್ಳೆಯ ಕೆಲಸ ಇಲ್ಲಿ ಆಗಿದೆ. ಕೆಎಸ್ಆರ್ಟಿಸಿ ಅಧಿಕಾರಿ-ನೌಕರರು ಸಹ ಪ್ರಯಾಣಿಕರಿಗೆ ಗುಣಮಟ್ಟದ ಸೇವೆ ಒದಗಿಸಬೇಕು. ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡಲು ಒತ್ತು ನೀಡಬೇಕು. ದಾವಣಗೆರೆ ಸುಂದರ ನಗರನ್ನಾಗಿಸಲು ಜನರ ಸಹಕಾರವೂ ಬೇಕು. ನಗರ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ, ಮೂಲ ಸೌಕರ್ಯ, ನೀರಾವರಿ, ಸಾರಿಗೆ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಲಾಗುವುದು. ನಗರ, ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಉಚಿತ ಬಸ್ಸು ಪ್ರಯಾಣ ಕಲ್ಪಿಸಿರುವುದು ಸಾಕಷ್ಟು ಅನುಕೂಲವಾಗಿದೆ. ಹೊಟ್ಟೆಗೆ ಹಿಟ್ಟು, ತಲೆಗೊಂದು ಸೂರು, ತೊಡಲು ಬಟ್ಟೆ ಪ್ರತಿಯೊಬ್ಬರಿಗೂ ಅತ್ಯವಶ್ಯಕ. ಶಿಕ್ಷಣ, ಆರೋಗ್ಯಕ್ಕೂ ಆದ್ಯತೆ ನೀಡುತ್ತೇವೆ ಎಂದು ಸಚಿವರು ಭರವಸೆ ನೀಡಿದರು.
ಇದೇ ವೇಳೆ ಬಡವರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವ ಉದ್ದೇಶದಿಂದ 2 ರಾಜಹಂಸ, 2 ವೇಗದೂತ ಬಸ್ಗಳ ಸೇವೆಗೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಚಾಲನೆ ನೀಡಿದರು.
ಬಾಕ್ಸ್-1 * ಪಂಪಾಪತಿ ಕೊಡುಗೆ ಸ್ಮರಣೆ ದಾವಣಗೆರೆಯ ಹಳೇ ಬಸ್ ನಿಲ್ದಾಣದಲ್ಲೇ ಕೆಎಸ್ಆರ್ಟಿಸಿ ಬಸ್ಗಳು ನಿಲುಗಡೆ ಮಾಡಬೇಕಾದ ಸ್ಥಿತಿ 1985ಕ್ಕೂ ಮುಂಚೆ ಇತ್ತು. ಆಗಿನ ಶಾಸಕ, ಕಾರ್ಮಿಕ ಮುಖಂಡ ಪಂಪಾಪತಿ ಹೋರಾಟ ನಡೆಸಿದ ಪರಿಣಾಮ ಇದೇ ಜಾಗದಲ್ಲಿ ಸರ್ಕಾರಿ ಬಸ್ಗಳಿಗಾಗಿ ಹೊಸ ಬಸ್ ನಿಲ್ದಾಣ ನಿರ್ಮಿಸಲಾಗಿತ್ತು. ಈಗ ಅದೇ ಜಾಗದಲ್ಲಿ ಹೈಟೆಕ್ ಬಸ್ ನಿಲ್ದಾಣ ₹120 ಕೋಟಿಗೂ ಅಧಿಕ ವೆಚ್ಚದಲ್ಲಿ ತಲೆಯೆತ್ತಿದೆ. ಹೀಗೆ ಕೆಲಸ ಮಾಡಿದವರನ್ನು ನೆನಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ಎಸ್ಎಂ ಹೇಳಿದರು.
- - -
- - - -(ಫೋಟೋ ಬರಲಿವೆ):