ಹುಬ್ಬಳ್ಳಿ: ತ್ತರ ಕರ್ನಾಟಕ ಪ್ರಮುಖ ಆರಾಧ್ಯ ದೈವವೆನಿಸಿರುವ ಸಿದ್ಧಾರೂಢ ಸ್ವಾಮೀಜಿ 96ನೆಯ ಪುಣ್ಯಾರಾಧನೆ ಅಂಗವಾಗಿ ಶ್ರೀಮಠದ ಆವರಣದಲ್ಲಿನ ಕಲ್ಯಾಣಿ (ಪುಷ್ಕರಣಿ)ಯಲ್ಲಿ ಶ್ರಾವಣ ಭಾನುವಾರ ಸಂಜೆ ಸಹಸ್ರಾರು ಭಕ್ತರ ಜಯಘೋಷಗಳ ಮಧ್ಯೆ ಶ್ರೀ ಸಿದ್ಧಾರೂಢರ ಜಲ ರಥೋತ್ಸವ ಅದ್ಧೂರಿಯಾಗಿ ಜರುಗಿತು.
ಕಲ್ಯಾಣಿ ಸುತ್ತಲೂ ನಿಂತಿದ್ದ ಭಕ್ತರ ದಂಡು, ಜಲರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ಶ್ರೀ ಸಿದ್ಧಾರೂಢ ಮಹಾರಾಜ ಕೀ ಜೈ, ಶ್ರೀ ಗುರುನಾಥಾರೂಢ ಮಹಾರಾಜ ಕೀ ಜೈ, ಓಂ ನಮಃ ಶಿವಾಯ, ಹರಹರ ಮಹಾದೇವ... ಎಂಬ ಜಯಘೋಷ ಮೊಳಗಿಸಿ ಸಂಭ್ರಮಿಸಿದರು. ತೆಪ್ಪೋತ್ಸವಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿಭಾವ ಮೆರೆದರು.
ಸಿದ್ಧಾರೂಢರ ಶ್ರೀಮಠದ ಟ್ರಸ್ಟ್ ಕಮಿಟಿ ಚೇರ್ಮನ್ ಚನ್ನವೀರ ಮುಂಗರವಾಡಿ, ರಮೇಶ ಎಸ್. ಬೆಳಗಾವಿ, ಧರ್ಮದರ್ಶಿ ಗೋವಿಂದ ಮಣ್ಣೂರ, ಉದಯಕುಮಾರ ನಾಯ್ಕರ, ಸರ್ವಮಂಗಳಾ ಪಾಠಕ, ರಂಗಾ ಬದ್ದಿ, ಎಸ್.ಐ. ಕೊಳಕೂರ, ಡಿ.ಡಿ. ಮಳಗಿ, ಮಠದ ಮ್ಯಾನೇಜರ್ ಈರಣ್ಣ ತುಪ್ಪದ ಸೇರಿದಂತೆ ಹಲವರಿದ್ದರು.