ಬಾಲಕಿ ಸೇರಿ ನಾಲ್ವರಿಗೆ ಕಚ್ಚಿದ್ದ ಹುಚ್ಚುನಾಯಿ ಹತ್ಯೆ..!

KannadaprabhaNewsNetwork |  
Published : May 28, 2025, 12:09 AM IST
27ಕೆಎಂಎನ್ ಡಿ17 | Kannada Prabha

ಸಾರಾಂಶ

ಮದ್ದೂರು ತಾಲೂಕಿನ ಗೊರವನಹಳ್ಳಿಯಲ್ಲಿ ಸೋಮವಾರ ಬಾಲಕಿ ಸೇರಿದಂತೆ ನಾಲ್ವರನ್ನು ಕಚ್ಚಿ ಗಾಯಗೊಳಿಸಿದ್ದ ಹುಚ್ಚುನಾಯಿಯನ್ನು ಗ್ರಾಮಸ್ಥರೇ ಹಿಡಿದು ಹತ್ಯೆ ಮಾಡಿರುವ ಘಟನೆ ಜರುಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಗೊರವನಹಳ್ಳಿಯಲ್ಲಿ ಸೋಮವಾರ ಬಾಲಕಿ ಸೇರಿದಂತೆ ನಾಲ್ವರನ್ನು ಕಚ್ಚಿ ಗಾಯಗೊಳಿಸಿದ್ದ ಹುಚ್ಚುನಾಯಿಯನ್ನು ಗ್ರಾಮಸ್ಥರೇ ಹಿಡಿದು ಹತ್ಯೆ ಮಾಡಿರುವ ಘಟನೆ ಜರುಗಿದೆ.

ಗ್ರಾಪಂ ಅಧ್ಯಕ್ಷೆ ಗೌರಮ್ಮ, ಚನ್ನಸಂದ್ರ ಗ್ರಾಮದ ಪ್ರತಾಪ, ಸಚ್ಚಿನ, ಅಶೋಕ ಎಂಬುವವರುಗಳಿಗೆ ನಾಯಿ ಕಚ್ಚಿ ಗಾಯಗೊಳಿಸಿದ್ದು, ಎಲ್ಲರೂ ಮದ್ದೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದ ನಂತರ ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ.

ಬಾಲಕಿ ಹೃತೀಕ್ಷಾ ಮೇಲೆ ಹುಚ್ಚುನಾಯಿ ದಾಳಿ ನಡೆಸುವ ಮುನ್ನ ಚನ್ನಸಂದ್ರ ಗ್ರಾಮದಲ್ಲಿ ಗ್ರಾಪಂ ಅಧ್ಯಕ್ಷ ಗೌರಮ್ಮಳನ್ನು ಮೇಲೆ ದಾಳಿ ನಡೆಸಿ ಆಕೆ ಬಲಗೈಯನ್ನು ಕಚ್ಚಿ ಗಾಯಗೊಳಿಸಿದೆ. ಈ ವೇಳೆ ಗೌರಮ್ಮಳ ಕೂಗಾಟ ಕೇಳಿ ಆಕೆ ರಕ್ಷಣೆಗೆ ಧಾವಿಸಿದ ಪ್ರತಾಪ, ಸಚ್ಚಿನ ಮತ್ತು ಅಶೋಕ್ ಮೇಲೆ ದಾಳಿ ಮಾಡಿದ ಹುಚ್ಚುನಾಯಿ ಗೊರವನಹಳ್ಳಿ ಗ್ರಾಮಕ್ಕೆ ಬಂದು ತಮ್ಮ ಮನೆ ಬಳಿ ಆಟವಾಡುತ್ತಿದ್ದ ಹೃತೀಕ್ಷಾ ಮೇಲೆ ಭೀಕರ ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿದೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಹುಚ್ಚುನಾಯಿ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುದುರೆಗಳಲ್ಲಿ ಗ್ಲ್ಯಾಂಡರ್ಸ್ ರೋಗ ಪತ್ತೆ: ಟರ್ಫ್ ಕ್ಲಬ್‌ ಸುತ್ತ ಪ್ರಾಣಿ ಸಂಚಾರ ನಿರ್ಬಂಧ
ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ