ಕನ್ನಡಪ್ರಭ ವಾರ್ತೆ ಕುಕನೂರು
ವೀರ ವನಿತೆ ಓಬವ್ವನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.
ಉಪತಹಸೀಲ್ದಾರ ಮುರುಳೀಧರ ಕುಲಕರ್ಣಿ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಪ್ರಶಾಂತ ಆರಬೆರಳಿನ್, ಪಪಂ ಸದಸ್ಯ ರಾಮಣ್ಣ ಬಂಕದಮನಿ, ಪ್ರಮುಖರಾದ ಶರಣಪ್ಪ ಕಾಳಿ, ಮುತ್ತಣ್ಣ ಕಲ್ಮನಿ, ನಿಂಗಪ್ಪ ಗೊರಲೆಕೊಪ್ಪ, ಪರಶುರಾಮ ಸಕ್ರಣ್ಣನವರ್, ಹನುಮಂತಪ್ಪ ಚಲವಾದಿ, ಲಕ್ಷ್ಮಣ ಕಾಳಿ ,ಪಕ್ಕಪ್ಪ ಸಾಲಮನಿ, ಯಲ್ಲಪ್ಪ ಚಲವಾದಿ, ಯಲ್ಲಪ್ಪ ಕಲ್ಮನಿ, ಈರಪ್ಪ ಬಂಕದಮನಿ, ಹನುಮಂತಪ್ಪ ಘಾಟಿ, ಲಕ್ಷ್ಮಣ ಘಾಟಿ, ಮಂಜುನಾಥ ಮಾದರ, ಹೆಗ್ಗಪ್ಪ ಸಾಲಮನಿ, ಮುತ್ತಣ್ಣ ತಳಕಲ್, ಯಲ್ಲಪ್ಪ ಕಾಳಿ ಇತರರಿದ್ದರು.ಓಬವ್ವನ ಧೈರ್ಯ, ಸಾಹಸ ಹೆಣ್ಣು ಮಕ್ಕಳಿಗೆ ಸ್ಫೂರ್ತಿ:
ಕುಷ್ಟಗಿ ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ವೀರ ವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಎದುರಾಳಿ ಸೈನಿಕರು ಕೋಟೆಯನ್ನು ಮುತ್ತಿದಾಗ ಒನಕೆಯನ್ನೇ ಆಯುಧವಾಗಿ ಬಳಸಿ ನೂರಾರು ಸೈನಿಕರ ರುಂಡಗಳನ್ನು ಚಂಡಾಡಿ, ಕೋಟೆಯನ್ನು ರಕ್ಷಿಸಿದ ಮಹಾಮಾತೆ ನಮ್ಮ ಓಬವ್ವ. ಇಂತಹವರ ಚರಿತ್ರೆಯನ್ನು ನಾಡಿನಾಚೆಗೂ ಪಸರಿಸುವಂತಹ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದರುಈ ಸಂದರ್ಭ ಗ್ರೇಡ್ 2 ತಹಸೀಲ್ದಾರ ಮುರುಳೀಧರ ಮುಕ್ತೇದಾರ, ಶರಣಪ್ಪ ಚಲವಾದಿ, ಕೆ.ಬಿ. ಸ್ಥಾವರಮಠ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿ ಅನೇಕರು ಇದ್ದರು.
ಪ್ರಥಮ ದರ್ಜೆ ಕಾಲೇಜು:ಕುಷ್ಟಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಓನಕೆ ಓಬವ್ವ ಜಯಂತಿಯ ಅಂಗವಾಗಿ ಒನಕೆ ಓಬವ್ವ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು ಈ ಸಂದರ್ಭ ಪ್ರಾಂಶುಪಾಲ ಡಾ. ಎಸ್. ವಿ. ಡಾಣಿ ಸೇರಿದಂತೆ ಉಪನ್ಯಾಸಕರು ವಿದ್ಯಾರ್ಥಿಗಳು ಇದ್ದರು.ಕೇಸೂರು ಗ್ರಾಪಂ:
ಕುಷ್ಟಗಿ ತಾಲೂಕಿನ ಕೇಸೂರು ಗ್ರಾಮ ಪಂಚಾಯಿತಿಯ ಕಾರ್ಯಾಲಯದಲ್ಲಿ ಒನಕೆ ಓಬವ್ವ ಜಯಂತಿ ಆಚರಿಸಲಾಯಿತು. ಈ ಸಂದರ್ಭ ಬಸವರಾಜ ಜಲಕಮಲದಿನ್ನಿ, ವೀರಯ್ಯ ಮಳಿಮಠ, ಮಲಕಾಜಗೌಡ ಕಡೇಕೊಪ್ಪ, ಸೇರಿದಂತೆ ಗ್ರಾಪಂ ಸಿಬ್ಬಂದಿ ಇದ್ದರು.