ಕನ್ನಡಪ್ರಭ ವಾರ್ತೆ ಮಣಿಪಾಲ
ಮೃತರನ್ನು ಮೆಲ್ರಾಯ್ (55) ಎಂದು ಗುರುತಿಸಲಾಗಿದೆ. ಅವರ ಮನೆಯ ತಾರಸಿಯ ಮೇಲ್ಛಾವಣಿಯ ಕಬ್ಬಿಣದ ಪಟ್ಟಿಗೆ ಹಗ್ಗ ಕಟ್ಟಿ ಅದನ್ನು ಕುತ್ತಿಗೆ ಬಿಗಿದು, ಆತ್ಮಹತ್ಯೆ ಮಾಡಿಕೊಳ್ಳಲು ತಾರಸಿಯಂದ ಕೆಳಗೆ ಜಿಗಿದ್ದರು. ಅವರ ದೇಹದ ಭಾರಕ್ಕೆ ಹಗ್ಗ ತುಂಡಾಗಿ ಹೊರಗೆ ಸುಮಾರು 20 ಅಡಿ ಕೆಳಗೆ ಅಂಗಳಕ್ಕೆ ಬಿದ್ದರು. ಪರಿಣಾಮ ತಲೆಗೆ ತೀವ್ರತರ ಗಾಯಗೊಂಡು ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಅವರು ವಾಣಿಜ್ಯ ಹಡಗಿನಲ್ಲಿ ಉದ್ಯೋಗಿಯಾಗಿದ್ದು, ಇಲ್ಲಿ ಬಾಡಿಗೆ ಮನೆಯಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದರು. ಘಟನೆಯ ನಡೆಯುವ ಸಂದರ್ಭ ಪತ್ನಿ ಮೈಸೂರಿಗೆ ತೆರಳಿದ್ದು, ಒಂಟಿಯಾಗಿದ್ದ ಮೆಲ್ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟನ್ನು ಬರೆದಿಟ್ಟಿದ್ದು, ಅದರಲ್ಲಿ ತಮ್ಮ ಅಂಗಾಂಗಗಳನ್ನು ದಾನ ಮಾಡುವಂತೆ ಬರೆದಿದ್ದಾರೆ. ಆದರೆ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.ಅಲ್ಲದೇ ಡೆತ್ ನೋಟ್ ಜೊತೆ ಅವರು 2018ರಲ್ಲಿಯೇ ದೆಹಲಿಯ ಸಪ್ದರ್ಜಂಗ್ ಆಸ್ಪತ್ರೆಯ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆಗೆ ಮರಣಾನಂತರ ಅಂಗಾಂಗ ದಾನ ಮಾಡಿದ ದಾಖಲೆಗಳು ಪತ್ತೆಯಾಗಿದೆ.
ಮಣಿಪಾಲ ಠಾಣಾ ಎಸ್ಐ ಅನಿಲ್ ಕುಮಾರ್, ಎಎಸ್ಐ ನಾಗೇಶ್ ನಾಯ್ಕ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಮಣಿಪಾಲ ಆಸ್ಪತ್ರೆಯ ವೈದಕೀಯ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು ಇಲಾಖೆಗೆ ನೆರವಾದರು.