ಮಗುವಿನ ವ್ಯಕ್ತಿತ್ವ ನಿರ್ಮಾಣದಲ್ಲಿ ತಾಯಿ ಪಾತ್ರ ಪ್ರಮುಖ

KannadaprabhaNewsNetwork |  
Published : Jul 21, 2024, 01:16 AM IST
ತಾಲೂಕಿನ ಚಿಕ್ಕಯಗಟಿಯ  ಜ್ಞಾನ ಜ್ಯೋತಿ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಗುರುಪೂರ್ಣಿಮೆ ಕಾರ್ಯಕ್ರನದಲ್ಲಿ ಬಿಇ ಓ ಸಯ್ಯದ್ ಮೋಸಿನ್ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಚಿಕ್ಕಯಗಟಿ ಜ್ಞಾನ ಜ್ಯೋತಿ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಬಿಇಒ ಸಯ್ಯದ್ ಮೋಸಿನ್‌ರನ್ನು ಸನ್ಮಾನಿಸಲಾಯಿತು.

ಹೊಸದುರ್ಗ: ಮಗುವಿನ ವ್ಯಕ್ತಿತ್ವ ಮತ್ತು ಚಾರಿತ್ರ್ಯ ನಿರ್ಮಾಣದಲ್ಲಿ ತಾಯಿ ಪಾತ್ರ ಅತ್ಯಂತ ಪ್ರಮುಖವಾದುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಯ್ಯದ್ ಮೋಸಿನ್ ಹೇಳಿದರು.

ತಾಲೂಕಿನ ಚಿಕ್ಕಯಗಟಿ ಜ್ಞಾನ ಜ್ಯೋತಿ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಗುರುಪೂರ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಂದು ಮಗುವನ್ನು ನಿರ್ಲಕ್ಷಿಸದೆ ಒಂದು ಉತ್ತಮ ಸಮಾಜ ನಿರ್ಮಿಸುವ ಜವಾಬ್ದಾರಿ ನೀಡಬೇಕು ಎಂದು ನೆರೆದಿದ್ದ ಪೋಷಕರಿಗೆ ಮಾರ್ಗದರ್ಶನ ನೀಡಿದರು.

ಶಾಲೆ ಕಾರ್ಯದರ್ಶಿ ಎಚ್‌.ಎನ್ ಶೇಖರಪ್ಪ ಮಾತನಾಡಿ, ಅಕ್ಷರಾಭ್ಯಾಸ ಬರೀ ಒಂದು ದಿನದ ಕಾರ್ಯಕ್ರಮವಾಗದೆ ಪ್ರತಿದಿನದ ಕಾರ್ಯಕ್ರಮವಾಗಬೇಕು ಎಂದರು. ಪ್ರಾಂಶುಪಾಲ ಮಂಜುನಾಥ್. ಡಿ ಮಾತನಾಡಿ, ಇಂದಿನ ಆಧುನಿಕ ಜಗತ್ತಿಗೆ ಶಿಕ್ಷಣದ ಅಗತ್ಯತೆ ಕುರಿತು ತಿಳಿಸಿದರು. ತರೀಕೆರೆ ಲ್ಯಾಬ್ ಟೆಕ್ನಿಷಿಯನ್ ಅಧಿಕಾರಿ ಓಂಕಾರ ಮೂರ್ತಿ ಹದಿಹರೆಯದ ಮನಸು ವಿಚಾರ ಕುರಿತು ಉಪನ್ಯಾಸ ನೀಡಿದರು,

ಸಂಸ್ಥೆ ಖಜಾಂಚಿ ಬಸವರಾಜ್, ಧರ್ಮದರ್ಶಿ ಮಹಾಲಿಂಗಪ್ಪ, ಆಗ್ರೋ ಧನಂಜಯ್, ಮುಖ್ಯಶಿಕ್ಷಕ ಗಿರೀಶ್ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಇದ್ದರು.

ಕಾರ್ಯಕ್ರಮದಲ್ಲಿ ಮಕ್ಕಳಿಗೆ ಅಕ್ಷರಭ್ಯಾಸ, ಎಲ್‌ಕೆಜಿ, ಯುಕೆಜಿ ಮಕ್ಕಳಿಗಾಗಿ ಕ್ರೀಡೋ ಲ್ಯಾಬ್ ಪ್ರಯೋಗಾತ್ಮಕ ಕಲಿಕೆ ಪರಿಚಯ, ಸಂಪನ್ಮೂಲ ವ್ಯಕ್ತಿಗಳಿಂದ ಆರ್ಟ್ ಆ್ಯಂಡ್ ಕ್ರಾಫ್ಟ್ ಮಾಹಿತಿ, ಹದಿಹರಿಯದ ಮನಸುಗಳು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತ್ಯಾಗ, ಬಲಿದಾನ, ಆದರ್ಶಗಳ ಮೇಲೆ ಹುಟ್ಟಿದ ಕಾಂಗ್ರೆಸ್: ಎಸ್.ಆರ್. ಪಾಟೀಲ
ರೈತ ಸೃಷ್ಟಿಯ ಮೊದಲ ವಿಜ್ಞಾನಿ, ಜಮೀನು ಪ್ರಯೋಗಾಲಯ: ಮಾಜಿ ಸಚಿವ ನಿರಾಣಿ