ಕನ್ನಡಪ್ರಭ ವಾರ್ತೆ ಮೈಸೂರು
ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರಲ್ಲಿ ಚಾಮರಾಜನಗರದ ರಂಗವಾಹಿನಿ, ನೆಲೆ ಹಿನ್ನೆಲೆ ಹಾಗೂ ರಾಮ ಮನೋಹ ಲೋಹಿಯಾ ಟ್ರಸ್ಟ್ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ 12ನೇ ವರ್ಷದ ರಾಜ್ಯ ಮಟ್ಟದ ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜಶೇಖರ ಕೋಟಿ ನೆನಪು ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಕವಿ ಕಾವ್ಯ ಬರೆಯೋದು ತನ್ನ ಕಾರಣಕ್ಕಾಗಿ ಅಲ್ಲ. ಲೇಖಕ ತನಗಾಗಿ ಬರೆಯೋದಿಲ್ಲ. ಪ್ರಜಾಪ್ರಭುತ್ವದಲ್ಲಿ ರಾಜಕಾರಣಿಗೆ ಮತ ಕೊಟ್ಟು ಆಯ್ಕೆ ಮಾಡುತ್ತೇವೆ. ಲೇಖಕ ಸಮಾಜಕ್ಕೆ ಒದಗಿ ಬರುವುದು ತನ್ನ ಕಾರಣಕ್ಕಾಗಿ ಅಲ್ಲ. ಭಾಷೆ, ಸಾಮಾಜಿಕ, ರಾಜಕೀಯ ಅನಿವಾರ್ಯತೆಯಿಂದ ಒದಗಿ ಬರುತ್ತಾನೆ ಎಂದು ಅವರು ಹೇಳಿದರು.ಮುಳ್ಳೂರು ನಾಗರಾಜ್ ಕಾವ್ಯ ಪ್ರಶಸ್ತಿಗೆ ಆಯ್ಕೆಯಾಗುವ ಮುನ್ನ ಜವರಾಜ್ ಹೆಸರು ಕೇಳಿರಲಿಲ್ಲ. ಇದು ಏನನ್ನು ಸೂಚಿಸುತ್ತದೆ ಎಂದರೆ ಮತ್ತೊಬ್ಬ ಲೇಖಕನ ಬರಹ ಓದುವ ಉತ್ಸಾಹ ಇಲ್ಲವಾಗಿದೆ. ಇದು ಕನ್ನಡದ ಮಟ್ಟಿಗೆ ದೊಡ್ಡ ಕೊರತೆ ಅನಿಸುತ್ತದೆ ಎಂದರು.
ಅಪ್ಪಟ ಹೋರಾಟಗಾರ:
ದಸಂಸ ಮೂಲ ಹೋರಾಟಗಾರರು ಹೋರಾಟ ಮಾಡಿದ್ದರಿಂದ ವಿದ್ಯೆ, ಉದ್ಯೋಗ ಪಡೆದ ಹಲವು ಜನರಬದುಕು ಸುಧಾರಣೆ ಆಗಿದೆ. ಉದ್ಯೋಗ ಸಿಕ್ಕಿದೆ. ಆದರೆ, ವ್ಯವಸ್ಥೆ ದಿನದಿಂದದಿನವೂ ಕ್ರೂರವಾಗುತ್ತಿದೆ. ದೌರ್ಜನ್ಯದ ಪರಮಾವಧಿ ತಲುಪಿದೆ ಎಂದರು.
ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಡಾ.ಆರ್. ರಾಜು ಅಧ್ಯಕ್ಷತೆ ವಹಿಸಿದ್ದರು. ಒಡನಾಡಿ ಸ್ಟ್ಯಾನ್ಲಿ ಅವರು ರಾಜಶೇಖರ ಕೋಟಿ ಕುರಿತು ಮಾತನಾಡಿದರು. ಆಂದೋಲನ ದಿನಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ರಶ್ಮಿ ಕೋಟಿ, ನೆಲೆ ಹಿನ್ನೆಲೆ ಕೆ.ಆರ್. ಗೋಪಾಲಕೃಷ್ಣ ಇದ್ದರು. ರಂಗವಾಹಿನಿ ಸಂಸ್ಥೆ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ ಸ್ವಾಗತಿಸಿದರು. ಮುಳ್ಳೂರು ರಾಜು ನಿರೂಪಿಸಿದರು. ಗಾನಸುಮಾ ಪಟ್ಟಸೋಮನಹಳ್ಳಿ ಸಾಮರಸ್ಯ ಗೀತೆ ಹಾಡಿದರು. ಹುರುಗಲವಾಡಿ ರಾಮಯ್ಯ ಕ್ರಾಂತಿಗೀತೆ ಹಾಡಿದರು.