ಸಮ್ಮೇಳನಕ್ಕೆವಿಶೇಷ ಮೆರಗು ತಂದ ಮೆರವಣಿಗೆ

KannadaprabhaNewsNetwork |  
Published : Mar 18, 2026, 01:15 AM IST
ಸಮ್ಮೇಳನಕ್ಕೆವಿಶೇಷ  ಮೆರಗು ತಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಮತ್ತು ಕಲಾ ತಂಡಗಳು | Kannada Prabha

ಸಾರಾಂಶ

ತರೀಕೆರೆತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪಟ್ಟಣದಲ್ಲಿ ನಡೆದ 19ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಮತ್ತು ಕಲಾ ತಂಡಗಳು ವಿಶೇಷ ಮೆರಗು ತಂದುಕೊಟ್ಟಿತು.

ಕನ್ನಡಪ್ರಭ ವಾರ್ತೆ, ತರೀಕೆರೆ

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪಟ್ಟಣದಲ್ಲಿ ನಡೆದ 19ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಮತ್ತು ಕಲಾ ತಂಡಗಳು ವಿಶೇಷ ಮೆರಗು ತಂದುಕೊಟ್ಟಿತು.

ಪ್ರವಾಸಿ ಮಂದಿರದ ಆವರಣದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಮತ್ತು ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಪ್ರತಿಮೆಗೆ ಸಮ್ಮೇಳನಾಧ್ಯಕ್ಷ ಡಾ.ಎ.ಎಸ್.ಶಂಕರನಾರಾಯಣ, ಮಾಲಾರ್ಪಣೆ ನೆರವೇರಿಸಿದರು, ನಂತರ ಮಾಜಿ ಪುರಸಭಾಧ್ಯಕ್ಷ ಎಂ.ನರೇಂದ್ರ ಮೆರವಣಿಗೆ ಉದ್ಘಾಟಿಸಿ ಶುಭ ಕೋರಿದರು. ಕಸಾಪ ಅಧ್ಯಕ್ಷ ರವಿ ದಳವಾಯಿ, ಕನ್ನಡಶ್ರೀ ಬಿ.ಎಸ್.ಭಗವಾನ್, ಕಸಾಪ ಪದಾಧಿಕಾರಿಗಳು ಇದ್ದರು.

ಸಮ್ಮೇಳನಾಧ್ಯಕ್ಷ ಡಾ.ಎ.ಎಸ್.ಶಂಕರನಾರಾಯಣ ದಂಪತಿ ಇದ್ದ ಅಲಂಕೃತ ವಾಹನಕ್ಕೆ ಸ.ನೌ.ಸಂಘದ ಅಧ್ಯಕ್ಷ ಸಿ.ಆರ್.ಅನಂತಪ್ಪ ಚಾಲನೆ ನೀಡಿದರು.

ಪೂರ್ಣಕುಂಬ, ಮಂಗಳವಾದ್ಯ, ಡೊಳ್ಳು ಕುಣಿತದಂತಹ ಅನೇಕ ಕಲಾ ತಂಡಗಳು ಮತ್ತು ಭಜನಾ ಮಂಡಳಿಯ ಸದಸ್ಯೆಯರು ಭಾಗವಹಿಸಿದ್ದು ವಿಶೇಷ ಮೆರಗು ತಂದು ಕೊಟ್ಟಿತು.

17ಕೆಟಿಆರ್.ಕೆ.2ಃ ತರೀಕೆರೆಯಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಮತ್ತು ಕಲಾ ತಂಡಗಳು ಸಮ್ಮೇಳನಕ್ಕೆ ವಿಶೇಷ ಮೆರಗು ತಂದುಕೊಟ್ಟಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

1,000 ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ
ಬೀದರ್ ಟೂ ಬೆಂಗಳೂರುವರೆಗೆ ಪಾದಯಾತ್ರೆ: ಕೆ.ಪಿ.ನಂಜುಂಡಿ