ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಶಿಕ್ಷಕ ಮಹಾದೇವ ಮಾತನಾಡಿ, ಬಸವೇಶ್ವರ ಆಶಯಗಳಂತೆ ನಡೆದರೆ ಬದುಕಿನ ಉದ್ದಕ್ಕೂ ಯಾವುದೇ ಗೊಂದಲವಿಲ್ಲದೆ ಸಾರ್ಥಕತೆಯಿಂದ ಜೀವನ ಸಾಗಿಸಬಹುದು. ಬಸವಣ್ಣನವರು ತಮ್ಮ ಜೀವನದ ಉದ್ದಕ್ಕೂ ಸಾಮಾಜಿಕ ಚಟುವಟಿಕೆಗಳ ಜೊತೆಗೆ ಕಾಯಕ ದಾಸೋಹ ಪದ್ಧತಿಯನ್ನು ಸಮಾಜಕ್ಕೆ ತೋರಿಸಿಕೊಟ್ಟರು. ಅವರ ಹಾದಿಯನ್ನು ಎಲ್ಲರೂ ಅನುಸರಿಸಿದರೆ ನೆಮ್ಮದಿ ಬದುಕಿನ ಜೊತೆ, ಹೊಸ ಸಮಾಜ ಕಟ್ಟಬಹುದು ಎಂದರು.
ಇದಕ್ಕೂ ಮುನ್ನ ಮೌಢ್ಯ ಹಿನ್ನೆಲೆಯಲ್ಲಿ ಎಕ್ಕ ಗಿಡಕ್ಕೆ ಕಾಸು, ಮಡಿಕೆ ಕಟ್ಟಿರುವುದನ್ನ ಕಿತ್ತು ಹಾಕುವ ಮೂಲಕ ಮೌಢ್ಯಾಚರಣೆ ಪದ್ಧತಿ ತೊಡೆದು ಹಾಕಿ ನಾಶಪಡಿಸಲಾಯಿತು. ಕಾರ್ಯಕ್ರಮದಲ್ಲಿ ರುದ್ರಮ್ಮ ನಾಗರಾಜು, ದೇವರಾಜು, ದಿವಾಕರ್, ಮಧುಸೂದನ್, ನಿಂಗರಾಜು ಮಾನವ ಹಕ್ಕುಗಳ ಹೋರಾಟಗಾರ ಪ್ರಸನ್ನ ಸರಸ್ವತಿ ಮುಂತಾದವರು ಇದ್ದರು.ಸಾಮಾಜಿಕ ಸುಧಾರಣೆಯ ಶರಣರು ಬಸವಣ್ಣ: ಬಿ.ಎಸ್.ವಿಜಯ್
ಸಾಮಾಜಿಕ ಸುಧಾರಣೆಯ ಶರಣರಾಗಿ ಬಸವೇಶ್ವರರು ವಚನಸಾರದಲ್ಲಿ ಲೋಕದ ಡೊಂಕು ತಿದ್ದಿದ ಮಹಾನ್ ಪುರುಷರು ಎಂದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಬಿ.ಎಸ್.ವಿಜಯ್ ಹೇಳಿದರು.
ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಇತಿಹಾಸದ ಕ್ರಾಂತಿಕಾರಿ ಬೆಳಕಾದ ಬಸವಣ್ಣನವರ ವಚನ, ಬದುಕು ಮೊದಲು ಮಕ್ಕಳಿಗೆ, ಯುವಕರಿಗೆ ಸರಳವಾಗಿ ತಿಳಿಸಲು ಜಾಗೃತಿ ಮೂಡಿಸಬೇಕಿದೆ ಎಂದರು.