ನೂತನ ಕ್ಡ್ಯಾಂ ನಿರ್ಮಾಣ, ಮೂರು ಶಾಲಾ ಕೊಠಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ತಾಲೂಕಿನ ಚಿಕ್ಕಂದವಾಡಿ ಗ್ರಾಮದ ಹತ್ತಿರ ಹರಿಯುವ ಹಳ್ಳಕ್ಕೆ 80 ಲಕ್ಷ ರು. ವೆಚ್ಚದಲ್ಲಿ ನೂತನ ಕ್ಡ್ಯಾಂ ನಿರ್ಮಾಣ ಹಾಗೂ ಮೂರು ಶಾಲಾ ಕೊಠಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.
ಅಪ್ಪರಸನಹಳ್ಳಿ ಬಳಿ ಹಳ್ಳಕ್ಕೆ ಎತ್ತರವಾದ ಡ್ಯಾಂ ಕಟ್ಟಿ ಕೆರೆಗೆ ನೀರು ಹರಿಯುವಂತೆ ಮಾಡಿದ್ದೇನೆ. ಯಾರಿಂದಲೂ ಈ ಕೆಲಸ ಆಗುತ್ತಿರಲಿಲ್ಲ. 16 ಕೋಟಿ ರು. ವೆಚ್ಚದಲ್ಲಿ ವಿದ್ಯುತ್ ಪವರ್ ಸ್ಟೇಷನ್ ಕಟ್ಟಿಸಿದ್ದೇನೆ. ಪ್ರತಿ ನಿತ್ಯವೂ ವಿದ್ಯುತ್ ಅಭಾವವಿದೆ ಎಂದು ರೈತರು ನನಗೆ ಫೋನ್ ಮಾಡಿ ಕಷ್ಟ ಹೇಳಿಕೊಳ್ಳುತ್ತಿದ್ದರು. ಚಿಕ್ಕಜಾಜೂರಿನ ಕೋಟೆಹಾಳ್ ಸಮೀಪ 500 ಕೋಟಿ ರು. ವೆಚ್ಚದಲ್ಲಿ ವಿದ್ಯುತ್ ಪವರ್ ಸ್ಟೇಷನ್ ನಿರ್ಮಾಣವಾಗುತ್ತಿದ್ದು, ಜೋಗ್ಫಾಲ್ಸ್ನಿಂದ ನೇರವಾಗಿ ವಿದ್ಯುತ್ ಪೂರೈಕೆಯಾಗಲಿದೆ ಎಂದು ತಿಳಿಸಿದರು.ಚಿಕ್ಕಜಾಜೂರಿನಿಂದ ಚಿತ್ರಹಳ್ಳಿವರೆಗೆ ರಸ್ತೆಗೆ 13 ಕೋಟಿ ರು. ನೀಡಿದ್ದೇನೆ. ಕೇಶವಾಪುರಕ್ಕೆ ಹೋಗುವ ರಸ್ತೆಗೂ ಹಣ ನೀಡಿದ್ದೇನೆ.
ಹಿರಿಯೂರಿನ ವಾಣಿವಿಲಾಸಸಾಗರದಿಂದ ನೀರು ತಂದು ಪ್ರತಿ ಮನೆ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು. ಇದರಿಂದ ಇನ್ನೂ 30 ವರ್ಷಗಳ ಕಾಲ ನೀರಿಗೆ ಅಭಾವವಿರುವುದಿಲ್ಲ. ರಾಜಕಾರಣಿಯಾದವನು ಸಾರ್ವಜನಿಕರ ಬದುಕನ್ನು ಸ್ವಂತ ಬದುಕೆಂದು ಅರ್ಥಮಾಡಿಕೊಂಡು ಕೆಲಸ ಮಾಡಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ಡಿ.ಸಿ.ಮೋಹನ್, ಕರಿಸಿದ್ದಯ್ಯ, ಮೂರ್ತಿ, ಈಶ್ವರಪ್ಪ, ಷಣ್ಮುಖಪ್ಪ, ಆನಂದಪ್ಪ, ರಾಜಪ್ಪ, ಗುರುಸ್ವಾಮಿ, ಜಗದೀಶ್, ತಿಪ್ಪೇಸ್ವಾಮಿ, ಅನಿಲ್, ಗ್ರಾಪಂ ಸದಸ್ಯರಾದ ರುದ್ರಮ್ಮ, ಶಿವಮೂರ್ತಿ, ಪವಿತ್ರ ಅಜ್ಜಯ್ಯ, ಸಾವಿತ್ರಮ್ಮ, ಹೊಳಲ್ಕೆರೆ ಬಿಜೆಪಿ ಮಂಡಲ ಕಾರ್ಯದರ್ಶಿ ಸಿ.ವಿ.ಶಶಿಧರ್, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಊರಿನ ಮುಖಂಡರು ಇದ್ದರು.