ಕನ್ನಡಪ್ರಭ ವಾರ್ತೆ ಚೇಳೂರು
ದುಡುಕಿ ನಿರ್ಧಾರ ಬೇಡ
ಇತ್ತೀಚೆಗೆ ಸಣ್ಣಪುಟ್ಟ ವಿಷಯಗಳಿಗೆಲ್ಲ ಮಕ್ಕಳಾಗಿರಬಹುದು, ಯುವಕರಾಗಿರಬಹುದು ದುಡಿಕಿ ನಿರ್ಧಾರಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಕೆಲವು ದಶಕಗಳ ಹಿಂದೆ ಎಂತಹ ಸಮಸ್ಯೆಯನ್ನಾಗಲಿ ಎದುರಿಸುತ್ತಿದ್ದರು. ಸಮಸ್ಯೆ ಪರಿಹಾರವಾಗಲಿ ಅಥವಾ ಆಗದಿರಲಿ ದೃಢ ಮನಸ್ಸಿನಿಂದ ಸ್ವೀಕರಿಸುತ್ತಿದ್ದರು. ಆದರೆ ಈಗಿನ ಪರಿಸ್ಥಿತಿ ಭಿನ್ನವಾಗಿದ್ದು, ಆತ್ಮಹತ್ಯೆಯಂತಹ ನರ್ಧಾರಗಳನ್ನು ಪಡೆಯುತ್ತಿದ್ದಾರೆ. ಇಂತಹ ದುರ್ಬಲ ಮನಸ್ಸುಗಳನ್ನು ಬದಲಾಯಿಸುವಂತಹ ಕೆಲಸ ಈಗಿನ ಶಿಕ್ಷಕರು ಮಾಡಬೇಕಿದೆ ಎಂದು ಸ್ವಾಮೀಜಿಯವರು ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನರ್ದೇಶಕ ಶೇಷಾದ್ರಿಯವರು ಮಾತನಾಡಿ ಗಡಿಭಾಗದಲ್ಲಿ ಗೂಳೂರು ನಿಡುಮಾಮಿಡಿ ಮಹಾಸಂಸ್ಥಾನ ಮಠದ ವತಿಯಿಂದ ಶೈಕ್ಷಣಿಕ ಪ್ರಗತಿಗೆ ಅಪಾರ ಕೊಡುಗೆ ನೀಡಿದ್ದಾರೆ.ಶಾಲೆಗಳ ಸ್ಥಾಪನೆಯಿಂದ ಶಿಕ್ಷಣ ವಂಚಿತರಿಗೂ ಶಿಕ್ಷಣ ಸೌಲಭ್ಯ ದೊರೆಯುವಂತಾಯಿತು ಎಂದರು.ಶಿಕ್ಷಕ ಕಲಿಕಾರ್ಥಿಯಾಗಿರಬೇಕು:ಸಾಹಿತಿ ವಲ್ಲೀಬಾಷಾರವರು ಮಾತನಾಡಿ, ಶಿಕ್ಷಕ ವೃತ್ತಿ ಆಯ್ಕೆ ಮಾಡಿಕೊಂಡವರು ನಿರಂತರವಾಗಿ ಚಟುವಟಿಕೆಯಿಂದ ಕೂಡಿರಬೇಕು. ಮಕ್ಕಳಲ್ಲಿನ ಭಿನ್ನತೆಗಳನ್ನು ಗುರ್ತಿಸಿ ಸೃಜನಶೀಲರನ್ನಾಗಿಸಲು ಅವಕಾಶಗಳನ್ನು ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಕನಾದವನು ಸದಾ ಕಲಿಕರ್ಥಿಯಾಗಿ ಜ್ಞಾನದಾಹವನ್ನು ಹೊಂದಿರಬೇಕು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಬಿಜಿಎಸ್ ಶಾಲೆಯ ಮುಖ್ಯ ಶಿಕ್ಷಕ ಮುನಿರಾಜು, ನಿವೃತ್ತ ಶಿಕ್ಷಕ ರಾಮಕೃಷ್ಣಾರೆಡ್ಡಿ, ಜಾನಪದ ಕಲಾವಿದ ಗೋಪಿನಾಯಕ್, ಪ್ರಾಂಶುಪಾಲ ಬಸವರಾಜ ಸಿ ಕೊರಳ್ಳಿ, ಉಪಪ್ರಾಂಶುಪಾಲ ಕೆ.ಎಂ ಲಕ್ಷ್ಮೀನಾರಾಯಣ, ಸಹಾಯಕ ಪ್ರಾಧ್ಯಾಪಕರಾದ ಚನ್ನಕೃಷ್ಣ, ಹಾಲೇಷಪ್ಪ, ರವಿಶಂಕರ್, ಅಧೀಕ್ಷಕ ತಿಪ್ಪಣ್ಣ ಸಮಾಜ ಕಲ್ಯಾಣ ಇಲಾಖೆಯ ಅಧೀಕ್ಷಕ ನಾಗರಾಜ ಮತ್ತಿತರರು ಇದ್ದರು.