ಹನೂರಿನಲ್ಲಿ ಭಾರಿ ಮಳೆಗೆ ರಸ್ತೆಗೆ ಮರ ಬಿದ್ದು ಸಂಚಾರ ಅಸ್ತವ್ಯಸ್ತ

KannadaprabhaNewsNetwork |  
Published : Jul 29, 2024, 12:53 AM IST
ಕನ್ನಡಪ್ರಭ ವಾರ್ತೆ ಹನೂರು ಒಣಗಿದ ಬಾರಿ ಮರ ಒಂದು ರಸ್ತೆಗೆ ಅಡ್ಡಲಾಗಿ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಬೂದಿ ಪಡಗ ಆಂಡಿಪಾಳ್ಯ ಗ್ರಾಮದ ಬಳಿ ಬೆಳಗಿನ ಜಾವ ಜರುಗಿದೆ... ಹನೂರು ತಾಲೂಕಿನ ಕೊಳ್ಳೇಗಾಲ  ಒಡೆಯರ್ ಪಾಳ್ಯ ಮುಖ್ಯ ರಸ್ತೆಯ ಬೂದಿಪಡಗ ಗ್ರಾಮದ ಬಳಿ ಬರುವ ಆಂಡಿಪಾಳ್ಯ ಗ್ರಾಮದ ಮುಖ್ಯರಸ್ತೆಯಲ್ಲಿ ಬೆಳಗಿನ ಜಾವ ಬಾರಿ ಗಾತ್ರದ ಒಣಗಿದ ಮರ ಒಂದು ರಸ್ತೆಗೆ ಅಡ್ಡಲಾಗಿ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಪರದಾಡುವಂಥ ಸ್ಥಿತಿ ನಿರ್ಮಾಣವಾಗಿತ್ತು...ಮರ ತೆರವು : ಬಾರಿ ಗಾತ್ರದ ಒಣಮರ ರಸ್ತೆಗೆ ಅಡ್ಡಲಾಗಿ ಬಿದ್ದು ಬೆಳಗಿನ ಜಾವ ನಾಲ್ಕು ಗಂಟೆಯಿಂದ ಏಳು ಗಂಟೆಯವರೆಗೆ ಈ ಭಾಗದಲ್ಲಿ ಸಂಚರಿಸುವ ಹೋಗಲು ಬರುವ ವಾಹನಗಳು ಸ್ಥಳಾವಕಾಶವಿಲ್ಲದೆ ಸತತವಾಗಿ ನಾಲ್ಕು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಹಾಗೂ ಇತರೆ ಕೆಲಸ ಕಾರ್ಯಗಳಿಗೆ ತೆರಳುವವರು ಪರದಾಡುವಂತೆ ಆಗಿತ್ತು ವಿಚಾರವನ್ನು ಸಾರ್ವಜನಿಕರು ಹನೂರು ಪೊಲೀಸರಿಗೆ ತಿಳಿಸಿ ಅವರಿಂದ ಅರಣ್ಯ ಇಲಾಖೆಯವರಿಗೆ ಸುದ್ದಿ ಮುಟ್ಟಿಸಿದ ನಂತರ ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಬಂದು ಒಣ ಮರವನ್ನು ತೆರವುಗೊಳಿಸಿ ಪ್ರಯಾಣಿಕರಿಗೆ ಅನುವು ಮಾಡಿಕೊಟ್ಟರು.....ಅನಾಹುತ ಸಂಭವಿಸುವ ಮುನ್ನ ಒಣಮರಗಳನ್ನು ತೆರವುಗೊಳಿಸಿ : ಮುಖ್ಯರಸ್ತೆಯಲ್ಲಿ ವಿವಿಧ ಗ್ರಾಮಗಳು ಸೇರಿದಂತೆ ತಮಿಳುನಾಡಿನ ಸಂಪರ್ಕ ರಸ್ತೆಯಾಗಿರುವ ಈ ರಸ್ತೆಯಲ್ಲಿ 20ಕ್ಕೂ ಹೆಚ್ಚು ಒಣ ಮರಗಳು ಒಣಗಿ ರಸ್ತೆಗೆ ಬಾಗಿದೆ, ಬಾರಿ ಬಿರುಗಾಳಿಗೆ ಮರಗಳು ಉರುಳಿ ರಸ್ತೆಗೆ ಅಡ್ಡಲಾಗಿ ಬೀಳುತ್ತಿದೆ ಕಳೆದ ನಾಲ್ಕು ದಿನಗಳ ಹಿಂದೆ ಸಹ ಭಾರಿ ಮರ ರಸ್ತೆಗೆ ಬಿದ್ದು ಸಂಚಾರ ಹಸ್ತವ್ಯಸ್ತಗೊಂಡಿತ್ತು ಆದುದರಿಂದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಪ್ರಯಾಣಿಕರ ಮೇಲೆ ಬಿದ್ದು ಅನಾಹುತ ಸಂಭವಿಸುವ ಮುನ್ನ ಒಣಗಿ ಬಾಗಿರುವ ಮರಗಳನ್ನು ತೆರವುಗೊಳಿಸುವಂತೆ ಬಿಎಸ್ ದೊಡ್ಡಿ ಗ್ರಾಮದ ಹಿರಿಯ ಮುಖಂಡ ಬಸವರಾಜ್ ಅರಣ್ಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.....Hnr,4news,2  ಹನೂರು ತಾಲೂಕಿನ ಬೂದಿಪಡದ ಆಂಡಿಪಾಳ್ಯ ಗ್ರಾಮದ ಬಳಿ ಮುಖ್ಯರಸ್ತೆಗೆ ಬಾರಿ ಗಾತ್ರದ  ಮರ ಬಿದ್ದು ಸಂಚಾರಸ್ತವ್ಯಸ್ತಗೊಂಡು ವಾಹನಗಳು ಸಾಲುಗಟ್ಟಿ ನಿಂತಿರುವುದು...Hnr,5news,2  ಹನೂರುತಾಲೂಕಿನ ಬೂದಿಪಡಗಂಡಿಪಾಳ್ಯ ಗ್ರಾಮದ ಬಳಿ ಭಾರಿ ಗಾತ್ರದ ಒಣಮರ ರಸ್ತೆಗೆ ಅಡ್ಡಲಾಗಿ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತ್ತು... | Kannada Prabha

ಸಾರಾಂಶ

ಒಣಗಿದ ಬಾರಿ ಮರ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಹನೂರಿನ ಬೂದಿ ಪಡಗ ಆಂಡಿಪಾಳ್ಯ ಗ್ರಾಮದ ಬಳಿ ಬೆಳಗಿನ ಜಾವ ಜರುಗಿತು.

ಬೂದಿ ಪಡಗ ಗ್ರಾಮದಲ್ಲಿ ಘಟನೆ । ಒಣ ಮರ ತೆರವಿಗೆ ಆಗ್ರಹ

ಹನೂರು: ಒಣಗಿದ ಬಾರಿ ಮರ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಬೂದಿ ಪಡಗ ಆಂಡಿಪಾಳ್ಯ ಗ್ರಾಮದ ಬಳಿ ಬೆಳಗಿನ ಜಾವ ಜರುಗಿತು.

ಹನೂರು ತಾಲೂಕಿನ ಕೊಳ್ಳೇಗಾಲ ಒಡೆಯರ್ ಪಾಳ್ಯ ಮುಖ್ಯ ರಸ್ತೆಯ ಬೂದಿಪಡಗ ಗ್ರಾಮದ ಬಳಿ ಬರುವ ಆಂಡಿಪಾಳ್ಯ ಗ್ರಾಮದ ಮುಖ್ಯ ರಸ್ತೆಯಲ್ಲಿ ಬೆಳಗಿನ ಜಾವ ಭಾರಿ ಗಾತ್ರದ ಒಣಗಿದ ಮರ ಒಂದು ರಸ್ತೆಗೆ ಅಡ್ಡಲಾಗಿ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಪರದಾಡುವಂಥ ಸ್ಥಿತಿ ನಿರ್ಮಾಣವಾಗಿತ್ತು.

ಬೆಳಗಿನ ಜಾವ ನಾಲ್ಕು ಗಂಟೆಯಿಂದ ಏಳು ಗಂಟೆಯವರೆಗೆ ಈ ಭಾಗದಲ್ಲಿ ಸಂಚರಿಸುವ ವಾಹನಗಳು ಸ್ಥಳಾವಕಾಶವಿಲ್ಲದೆ ಸತತವಾಗಿ ನಾಲ್ಕು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಹಾಗೂ ಇತರೆ ಕೆಲಸ ಕಾರ್ಯಗಳಿಗೆ ತೆರಳುವವರು ಪರದಾಡಿದರು.

ಅರಣ್ಯ ಇಲಾಖೆ ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಬಂದು ಒಣ ಮರವನ್ನು ತೆರವುಗೊಳಿಸಿ ಪ್ರಯಾಣಿಕರಿಗೆ ಅನುವು ಮಾಡಿಕೊಟ್ಟರು.

ಒಣಮರಗಳನ್ನು ತೆರವುಗೊಳಿಸಿ:

ತಮಿಳುನಾಡಿನ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ 20ಕ್ಕೂ ಹೆಚ್ಚು ಒಣ ಮರಗಳು ಒಣಗಿ ರಸ್ತೆಗೆ ಬಾಗಿದೆ. ಭಾರಿ ಬಿರುಗಾಳಿಗೆ ಮರಗಳು ಉರುಳಿ ರಸ್ತೆಗೆ ಅಡ್ಡಲಾಗಿ ಬೀಳುತ್ತಿದೆ. ಕಳೆದ ನಾಲ್ಕು ದಿನಗಳ ಹಿಂದೆ ಸಹ ಭಾರಿ ಮರ ರಸ್ತೆಗೆ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತ್ತು .ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಒಣಗಿರುವ ಮರಗಳನ್ನು ತೆರವುಗೊಳಿಸಲಿ ಎಂದು ಬಿಎಸ್‌ ದೊಡ್ಡಿ ಗ್ರಾಮದ ಬಸವರಾಜ್‌ ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ನಶಿಸುತ್ತಿರುವ ಚಿತ್ರಕಲೆ ಉಳಿಸಿ ಬೆಳೆಸಿ