ಭೀಮಣ್ಣ ಖಂಡ್ರೆಯವರಿಗೆ ನುಡಿ ನಮನ

KannadaprabhaNewsNetwork |  
Published : Jan 19, 2026, 12:15 AM IST
ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಟಾನ ವತಿಯಿಂದ ಶತಯುಷಿ ಭೀಮಣ್ಣ ಖಂಡ್ರೆ ರವರಿಗೆ ನುಡಿ ನಮನ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಚಿಕ್ಕಮಗಳೂರು: ಶರಣ ಚಿಂತನೆ, ಮಾನವೀಯತೆ ಮತ್ತು ಮೌಲ್ಯ ಧಾರಿತ ರಾಜಕಾರಣದ ಪ್ರತೀಕವಾಗಿದ್ದ ಭೀಮಣ್ಣ ಖoಡ್ರೆ ಅವರ ಸೇವೆಗಳು ಚಿರಸ್ಮರಣಿಯ ಎಂದು ಜಿಲ್ಲಾ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಮೋಹನ್ ರಾಜಣ್ಣ ಹೇಳಿದರು.

ಚಿಕ್ಕಮಗಳೂರು: ಶರಣ ಚಿಂತನೆ, ಮಾನವೀಯತೆ ಮತ್ತು ಮೌಲ್ಯ ಧಾರಿತ ರಾಜಕಾರಣದ ಪ್ರತೀಕವಾಗಿದ್ದ ಭೀಮಣ್ಣ ಖoಡ್ರೆ ಅವರ ಸೇವೆಗಳು ಚಿರಸ್ಮರಣಿಯ ಎಂದು ಜಿಲ್ಲಾ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಮೋಹನ್ ರಾಜಣ್ಣ ಹೇಳಿದರು.

ಮೂಡಿಗೆರೆ ತಾಲೂಕಿನ ಗೋಣಿಬೀಡು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಟಾನದಿಂದ ಏರ್ಪಡಿಸಿದ್ದ ಶತಯುಷಿ ಭೀಮಣ್ಣ ಖಂಡ್ರೆ ಅವರಿಗೆ ನುಡಿ ನಮನ ಹಾಗೂ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.ಸ್ವಾತಂತ್ರ ಹೋರಾಟ, ಹೈದರಾಬಾದ್ ಕರ್ನಾಟಕ ವಿಮೋಚನೆ. ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಮುಂಚೂಣಿಯಲ್ಲಿ ನಿಂತು ಬೀದರ್ ಜಿಲ್ಲೆಯನ್ನು ಕರ್ನಾಟಕದಲ್ಲೇ ಉಳಿಸಿಕೊಳ್ಳಲು ಹೋರಾಡಿದ ನಾಯಕತ್ವ ಅವರನ್ನು ಜನಮಾನದ ನಾಯಕರ ನ್ನಗಿಸಿತು ಎಂದು ಸ್ಮರಿಸಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರತಿಷ್ಟಾನದ ಮ್ಯಾನೇಜಿಂಗ್ ಟ್ರಸ್ಟಿ ಉಮಾ ಮೋಹನ್ ಅವರು, ಭೀಮಣ್ಣ ಖಂಡ್ರೆ ಅವರು ಸಮಾಜ ಸೇವೆಗೆ ಬದುಕನ್ನೇ ಸಮರ್ಪಿಸಿದ ಲೋಕ ನಾಯಕರು, ಅವರ ಅಗಲಿಕೆ ನಾಡಿಗೆ ತುಂಬಾಲಾರದ ನಷ್ಟವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಮುಖಂಡರಾದ ಸಿ.ರಾಜಣ್ಣ, ಬಾಂದವ್ಯ, ಡಿಂಪಲ್, ಗಂಗಾಧರ್, ಅಶ್ವಿನಿ, ಪ್ರಸನ್ನ, ಗೌರಮ್ಮ ಇದ್ದರು. 18 ಕೆಸಿಕೆಎಂ 2ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಟಾನದಿಂದ ಶತಯುಷಿ ಭೀಮಣ್ಣ ಖಂಡ್ರೆಅವರಿಗೆ ನುಡಿ ನಮನ ಸಲ್ಲಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಚನ ಸಾಹಿತ್ಯ ಮಾನವತೆ, ಪ್ರೀತಿ, ಅಂತಃಕರಣಗಳ ಪ್ರತೀಕ: ಡಾ.ಸಂಗಮೇಶ ಮಾಟೊಳ್ಳಿ
ಹಿಂದು ಧರ್ಮ ಒಗ್ಗೂಡಿಸಿ ಗಟ್ಟಿಯಾಗಿಸಬೇಕು