ಕೊಪ್ಪಳದ ಸಾಹಿತಿಗಳು ಮತ್ತು ಸದಭಿರುಚಿಯ ಅನೇಕರು ಗೊಂದಲಿಗ್ಯಾ ಕೃತಿ ಬರೆಯಲು ಒತ್ತಾಸೆಯಾಗಿ ನಿಂತರು. ಕನಕಗಿರಿಯ ನನ್ನ ವೃತ್ತಿ ಬದುಕು ನನ್ನನ್ನು ಉತ್ತಮ ಶಿಕ್ಷಕನನ್ನಾಗಿ ಮತ್ತು ಅಧ್ಯಯನಶೀಲನನ್ನಾಗಿ ಮಾಡಿತು. ಎಲ್ಲರ ಪ್ರೇರಣೆ ಒತ್ತಾಸೆ ಮತ್ತು ಸಹಕಾರದಿಂದ ಸಾಹಿತ್ಯ ಸೇವೆ ಮಾಡಿದ್ದೇನೆ ಎಂದು ಸಾಹಿತಿ ಎ.ಎಂ. ಮದರಿ ಹೇಳಿದರು.
ಕೊಪ್ಪಳ:
ಬಡತನ ಮತ್ತು ವಿಳಾಸವಿಲ್ಲದ ಅಲೆಮಾರಿ ಬದುಕು ನನ್ನನ್ನು ವಿದ್ಯಾವಂತನನ್ನಾಗಿ, ಸಾಹಿತಿಯಾಗಿ ಬೆಳೆಯಲು ಪ್ರೇರೇಪಿಸಿತು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ಸಾಹಿತಿ ಎ.ಎಂ. ಮದರಿ ಹೇಳಿದರು.
ನಗರದಲ್ಲಿ ಮುಜುಮದಾರ ಫೌಂಡೇಶನ್ ವತಿಯಿಂದ ಜರುಗಿದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕೊಪ್ಪಳದ ಸಾಹಿತಿಗಳು ಮತ್ತು ಸದಭಿರುಚಿಯ ಅನೇಕರು ಗೊಂದಲಿಗ್ಯಾ ಕೃತಿ ಬರೆಯಲು ಒತ್ತಾಸೆಯಾಗಿ ನಿಂತರು. ಕನಕಗಿರಿಯ ನನ್ನ ವೃತ್ತಿ ಬದುಕು ನನ್ನನ್ನು ಉತ್ತಮ ಶಿಕ್ಷಕನನ್ನಾಗಿ ಮತ್ತು ಅಧ್ಯಯನಶೀಲನನ್ನಾಗಿ ಮಾಡಿತು. ಎಲ್ಲರ ಪ್ರೇರಣೆ ಒತ್ತಾಸೆ ಮತ್ತು ಸಹಕಾರದಿಂದ ಸಾಹಿತ್ಯ ಸೇವೆ ಮಾಡಿದ್ದೇನೆ ಎಂದರು.
ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಆಗಿ ಆಯ್ಕೆಯಾದ ಮಾಲಾ ಬಡಿಗೇರ ಮಾತನಾಡಿ, ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವ ನನಗೆ ಗಂಡನ ಸಹಕಾರದಿಂದ ಕೃತಿ ರಚನೆಯಲ್ಲಿ ತೊಡಗಿಸಿಕೊಳ್ಳುವಂತಾಯಿತು. ಕೊಪ್ಪಳದ ಸಾಹಿತಿಗಳು ನನ್ನನ್ನು ಬೆಳೆಸಿದ್ದಾರೆ. ಸರ್ವಾಧ್ಯಕ್ಷತೆ ನನಗೆ ಜವಾಬ್ದಾರಿ ಹೆಚ್ಚಿಸಿದೆ. ಎಲ್ಲ ಮಹಿಳೆಯರ ಪರವಾಗಿ ಇದನ್ನು ಒಪ್ಪಿಕೊಂಡಿರುವೆ ಎಂದು ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.