ಲಿಂಗದಹಳ್ಳಿಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆಪ್ರಕೃತಿ ವಿಜ್ಞಾನದ ಕಣಜವಾಗಿದ್ದು ಅದರಲ್ಲಿ ಅಡಗಿರುವುದನ್ನು ಹೊರತೆಗೆಯುವುದೇ ವಿಜ್ಞಾನಿಗಳ ಕಾರ್ಯವಾಗಿದೆ ಎಂದು ಲಿಂಗದಹಳ್ಳಿ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗೇಶ್ ಹೇಳಿದ್ದಾರೆ.
ಲಿಂಗದಹಳ್ಳಿಯಲ್ಲಿ ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲೆಯಿಂದ ಶಾಲೆ ಅವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಮಾತನಾಡುತ್ತಿದ್ದರು. ಗಣಿತ ಮತ್ತು ವಿಜ್ಞಾನದ ಆವಿಷ್ಕಾರಗಳನ್ನು ಭಾರತೀಯರು ಬಹಳ ಹಿಂದೆಯೇ ಅರಿತಿದ್ದರಿಂದಲೇ ಮನೆಗಳ ಮುಂದಿನ ಅಂಗಳಕ್ಕೆ ಹಸುವಿನ ಸಗಣಿ, ಗೋಮಯಗಳ ನೀರನ್ನು ಹಾಕುವುದು, ಬಾಗಿಲಿಗೆ ಮಾವಿನ ತೋರಣ ಮತ್ತು ಬಾಳೆ ಗಿಡಗಳನ್ನು ಕಟ್ಟುವುದು ಸೇರಿದಂತೆ ಅನೇಕ ಪ್ರಯೋಗ ಗಳನ್ನು ಮಾಡುವ ಮೂಲಕ ಕ್ರಿಮಿ ಕೀಟಗಳಿಂದ ರಕ್ಷಣೆ ಪಡೆಯುತ್ತಿದ್ದರು ಎಂದು ಹೇಳಿದರು.ನಮ್ಮ ಹಿರಿಯರು ಗ್ರಾಮಗಳ ವ್ಯಾಪ್ತಿಯಲ್ಲಿ ತುಳಸಿಗಿಡ, ಬೇವಿನಮರ, ಮಾವಿನಮರ, ಎಕ್ಕದ ಗಿಡಗಳನ್ನು ಬೆಳೆಸಿ ಅವುಗಳಿಂದ ಬರುವ ಶುದ್ಧ ಗಾಳಿಯನ್ನು ಪ್ರಕೃತಿಯಿಂದಲೇ ನೇರವಾಗಿ ಪಡೆದುಕೊಳ್ಳುತ್ತಿದ್ದರು ಎಂದರುಸಮಾಜಸೇವಕ ಗೋಪಾಲಕೃಷ್ಣ ಮಾತನಾಡಿ ವಿಶ್ವಕ್ಕೆ ಸೊನ್ನೆಯನ್ನು ಮೊದಲ ಅಕ್ಷರದ ಕೊಡುಗೆ ನೀಡಿದವರೂ ಬಾರತೀಯರೇ ಆಗಿದ್ದು ಪ್ರತಿಯೊಬ್ಬ ವಿದ್ಯಾರ್ಥಿಯೂ ಪರಿಸರವನ್ನು ಸೂಕ್ಷ್ಮವಾಗಿ ವೀಕ್ಷಿಸುವ ಕಾರ್ಯ ಮಾಡುವ ಹವ್ಯಾಸ ಬೆಳೆಸಿಕೊಂಡು ಪ್ರಕೃತಿಯಲ್ಲಿ ನಡೆಯುವ ವಿಸ್ಮಯಗಳನ್ನು ಕಾಣಬಹುದಾಗಿತ್ತು. ಪ್ರಕೃತಿಯಲ್ಲಿರುವ ಸಣ್ಣ ಹುಲ್ಲುಕಡ್ಡಿಯಿಂದ ಹಿಡಿದು ದೊಡ್ಡ ದೊಡ್ಡ ಮರಗಳಾಗಿ ಬೆಳೆಯುವುದೂ ಪ್ರಾಕೃತಿಕ ವಿಜ್ಞಾನ. ಪ್ರತೀ ವಿದ್ಯಾರ್ಥಿಯೂ ಇವುಗಳ ಅಧ್ಯಯನ ಮಾಡುವ ಮೂಲಕ ತಮ್ಮ ಜ್ಞಾನ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ನಿರ್ಮಾಣ ಮಾಡಿದ್ದ ವಿಜ್ಞಾನದ ವಸ್ತು ಪ್ರದರ್ಶನ, ಭದ್ರಾ ಆಣೆಕಟ್ಟೆಯ ವಿನ್ಯಾಸದ ನಿರ್ಮಾಣ, ಕೊಳವೆ ಬಾವಿ ಕೊರೆಯುವ ವಾಹನ ಮುಂತಾದವುಗಳು ನೋಡುಗರ ಗಮನ ಸೆಳೆದವು ವಿದ್ಯಾರ್ಥಿಗಳಿಂದ ವಿಜ್ಞಾನಕ್ಕೆ ಸಂಬಂದಿಸಿದ ವಸ್ತು ಪ್ರದರ್ಶನ ಬೀದಿ ನಾಟಕಗಳನ್ನು ಆಯೋಜಿಸಲಾಗಿತ್ತುಲಿಂಗದಹಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಇಂದ್ರಾ ಮಂಜುನಾಥ. ಸದಸ್ಯೆ ನಾಗರತ್ನ ಭದ್ರಾಚಾರ್, ಶಾಲಾ ಮುಖ್ಯ ಶಿಕ್ಷಕರಾದ ಜಯಣ್ಣ . ಅನಿಲ್, ಗಿರೀಶ್ ನಾಗರಾಜಪ್ಪ, ಕ ಬಿ ಸಿ ಚಂದ್ರಶೇಖರ್ ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಪೋಷಕ ವರ್ಗ ಮತ್ತಿತರರು ಭಾಗವಹಿಸಿದ್ದರು.1ಕೆಟಿಆರ್.ಕೆ.4ಃ
ತರೀಕೆರೆ ಸಮೀಪದ ಲಿಂಗದಹಳ್ಳಿ ಸರ್ಕಾರಿ ಹಿರಿಯ ಬಾಲಕಿಯರ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ವಿಜ್ಞಾನ ದಿನಾಚರಣೆ ಗ್ರಾಮ ಪಂಚಾಯಿತಿ ಉಪಾದ್ಯಕ್ಷೆ ಇಂದ್ರಾ ಮಂಜುನಾಥ್ ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗೇಶ್ ಸಮಾಜ ಸೇವಕ ಗೋಪಾಲಕೃಷ್ಣ, ಶಿಕ್ಷಕರಾದ ಜಯಣ್ಣ. ಗಿರೀಶ್ ಮತ್ತಿತರರು ಇದ್ದರು.