ಸ್ತ್ರೀ ಎಲ್ಲ ಕಾಲಘಟ್ಟಕ್ಕೂ ಸಂವೇದನಾಶೀಲಳು: ವೀಣಾ ಪಾಟೀಲ

KannadaprabhaNewsNetwork |  
Published : Dec 06, 2025, 02:30 AM IST

ಸಾರಾಂಶ

ಯಾವುದೇ ಜಾತಿ, ಮತ, ಪಂಥ, ಧರ್ಮ, ಲಿಂಗ ಭೇದವಿಲ್ಲದೆ ಸರ್ವ ಏಳಿಗೆಯನ್ನು ಬಯಸಿದ ಕಾಲ, 12ನೇ ಶತಮಾನದಲ್ಲಿ ಶರಣರಿಗೆ ಸಮಾನವಾದ ವ್ಯಕ್ತಿತ್ವವನ್ನು ಹಲವಾರು ಶಿವಶರಣೆಯರು ಸ್ತ್ರೀಯ ಗಟ್ಟಿತನದ ನಿಲುವನ್ನು ಸಾಬೀತುಪಡಿಸಿವೆ.

ಗದಗ: ಸ್ತ್ರೀ ಎಲ್ಲ ಕಾಲಘಟ್ಟಗಳಲ್ಲಿ ಸಂವೇದನಾಶೀಲಳಾಗಿದ್ದು, ಸಮಾಜ ಕಟ್ಟುವಲ್ಲಿ ಮಹತ್ತರವಾದ ಪಾತ್ರ ವಹಿಸಿದ್ದಾಳೆ ಎಂದು ಮುಂಡರಗಿ ಚೈತನ್ಯ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ವೀಣಾ ಪಾಟೀಲ ಹೇಳಿದರು.

ಜಿಲ್ಲಾ ಕದಳಿ ಮಹಿಳಾ ವೇದಿಕೆ ವತಿಯಿಂದ ವಿವೇಕಾನಂದ ನಗರದ ನಿರ್ಮಲಾ ಗುರುಲಿಂಗನಗೌಡ ಪಾಟೀಲ ಅವರ ಮಹಾಮನೆಯಲ್ಲಿ ದತ್ತಿ ಕಾರ್ಯಕ್ರಮದಲ್ಲಿ ಶರಣ ಸಂಸ್ಕೃತಿಯಲ್ಲಿ ಸ್ತ್ರೀ ಸಂವೇದನೆ ಎಂಬ ವಿಷಯ ಕುರಿತು ಅವರು ಮಾತನಾಡಿದರು. ಶರಣರ ಪರಂಪರೆ ಸಮಾನತೆಯನ್ನು ನೀಡಿದೆ. ಯಾವುದೇ ಜಾತಿ, ಮತ, ಪಂಥ, ಧರ್ಮ, ಲಿಂಗ ಭೇದವಿಲ್ಲದೆ ಸರ್ವ ಏಳಿಗೆಯನ್ನು ಬಯಸಿದ ಕಾಲ, 12ನೇ ಶತಮಾನದಲ್ಲಿ ಶರಣರಿಗೆ ಸಮಾನವಾದ ವ್ಯಕ್ತಿತ್ವವನ್ನು ಹಲವಾರು ಶಿವಶರಣೆಯರು ಸ್ತ್ರೀಯ ಗಟ್ಟಿತನದ ನಿಲುವನ್ನು ಸಾಬೀತುಪಡಿಸಿವೆ.

ಇಂದಿನ ಆಧುನಿಕ ಕಾಲಘಟ್ಟದಲ್ಲಿಯೂ ಸ್ತ್ರೀ ಸಂವೇದನೆಯ ಹಲವಾರು ಆಯಾಮಗಳನ್ನು ಕಾಣಲಾಗುತ್ತದೆ. ಹಿಂದಿನಿಂದಲೂ ಮಹಿಳೆಯನ್ನು ದ್ವಿತೀಯ ದರ್ಜೆ ಎಂದು ನೋಡುತ್ತಾ ಬಂದ ಕಾಲಘಟ್ಟದಿಂದ ಇಂದು ಎಲೆಮರೆಕಾಯಿಯಂತೆ ಅದೆಷ್ಟೋ ಸಂಕಿರಣತೆಗಳನ್ನು ಸ್ತ್ರೀ ತನ್ನಲ್ಲೆ ಒದಿಗಿಟ್ಟುಕೊಂಡಿರುವುದು ಕೂಡ ಅಷ್ಟೇ ಸತ್ಯ ಎಂದರು.

ನಿವೃತ್ತ ಪ್ರಾಧ್ಯಾಪಕ ಎಂ.ಎನ್. ಕಾಮನಹಳ್ಳಿ, ಮಕ್ಕಳ ಸಾಹಿತಿ ಡಾ. ರಾಜೇಂದ್ರ ಗಡಾದ ಮಾತನಾಡಿದರು. ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಸುಧಾ ಹುಚ್ಚಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ದತ್ತಿದಾನಿಗಳಾದ ರತ್ನಾ ಬದಿ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸುಲೋಚನಾ ಐಹೊಳೆ ವಿಷಯ ಮಂಡಿಸಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಧ್ಯಾಪಕ ಡಾ. ಎಂ.ಬಿ. ಗೌಡರ್, ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರಕಾಶ ಅಸುಂಡಿ ಆಗಮಿಸಿದ್ದರು. ವಚನ ಚಿಂತವನ್ನು ಅಶೋಕ ಬರಗುಂಡಿ ನಡೆಸಿದರು. ಎಸ್.ಎಂ. ಮರಿಗೌಡರ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಉಪನ್ಯಾಸಕ ಶಕುಂತಲಾ ಸಿಂಧೂರಿ ಪರಿಚಯಿಸಿದರು.

ಡಾ. ಗಿರಿಜಾ ಹಸಬಿ ಸ್ವಾಗತಿಸಿದರು. ಪುಷ್ಪಾ ಭಂಡಾರಿ ಹಾಗೂ ವಾರದ ಸಂಗಡಿಗರು ವಚನ ಗಾಯನ ನೆರವೇರಿಸಿದರು. ಅನ್ನಪೂರ್ಣಾ ವರವಿ, ಶಾಂತಾ ಮುಂದಿನಮನಿ, ಗೌರಕ್ಕ ಬಡಿಗಣ್ಣವರ, ಬೂದಪ್ಪ ಅಂಗಡಿ, ವಿ.ಕೆ. ಕರಿಗೌಡರ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

೩೬ನೇ ದಿನದ ಕಾರ್ಖಾನೆ ವಿರೋಧಿ ಹೋರಾಟ, ರಾಜ್ಯ ರೈತ ಸಂಘದಿಂದ ಮೆರವಣಿಗೆ
ಪ್ರತಿ ವಿಷಯದಲ್ಲೂ ವೈಜ್ಞಾನಿಕ ಅಧ್ಯಯನ ಮುಖ್ಯ: ಎಸ್.ವಿ. ಸಂಕನೂರ