ಮನೆಗೆ ಮಹಿಳೆಯೇ ಭೂಷಣ: ರೇಖಾಶಾಸ್ತ್ರಿ

KannadaprabhaNewsNetwork |  
Published : Feb 06, 2026, 01:15 AM IST
ಸಸ | Kannada Prabha

ಸಾರಾಂಶ

ಚಿಕ್ಕಮಗಳೂರುಮಹಿಳೆಯಿಲ್ಲದೇ ಮನೆಯಿಲ್ಲ. ಮನೆಗೆ ಮಹಿಳೆಯೇ ಭೂಷಣ ಮತ್ತು ಪ್ರತ್ಯಕ್ಷ ದೇವರಂತೆ. ಮಹಿಳೆ ಎಂದಾಕ್ಷಣ ಮೊದಲು ನೆನಪಾಗುವುದು ಜನ್ಮಕೊಟ್ಟ ತಾಯಿ ಎಂದು ಕವಯತ್ರಿ ಯು.ಎಂ.ರೇಖಾಶಾಸ್ತ್ರಿ ಅಭಿಪ್ರಾಯಪಟ್ಟರು.

ಭರತ ಹುಣ್ಣಿಮೆ ಕಾರ್ಯಕ್ರಮ ಉದ್ಘಾಟನೆಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಮಹಿಳೆಯಿಲ್ಲದೇ ಮನೆಯಿಲ್ಲ. ಮನೆಗೆ ಮಹಿಳೆಯೇ ಭೂಷಣ ಮತ್ತು ಪ್ರತ್ಯಕ್ಷ ದೇವರಂತೆ. ಮಹಿಳೆ ಎಂದಾಕ್ಷಣ ಮೊದಲು ನೆನಪಾಗುವುದು ಜನ್ಮಕೊಟ್ಟ ತಾಯಿ ಎಂದು ಕವಯತ್ರಿ ಯು.ಎಂ.ರೇಖಾಶಾಸ್ತ್ರಿ ಅಭಿಪ್ರಾಯಪಟ್ಟರು.

ನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಅಕ್ಕಮಹಾದೇವಿ ಮಹಿಳಾ ಸಂಘ ಹಾಗೂ ಕಾಳವ್ವೆ ತಂಡದಿಂದ ಆಯೋಜಿಸಿದ್ಧ ಭರತ ಹುಣ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹೆತ್ತು ಹೊತ್ತ ತಾಯಿ ಮಕ್ಕಳಿಗೆ ತುತ್ತು ನೀಡಿ, ಆಟ-ತುಂಟಾಟಗಳನ್ನು ಸಹಿಸಿ, ಧಾರ್ಮಿಕತೆ, ಗುರು ಪದ್ಧತಿ, ಮಠ, ಪೂಜೆ ಹಾಗೂ ಸಂಸ್ಕಾರ ಇತ್ಯಾದಿಗಳ ಬಗ್ಗೆ ಮನವರಿಕೆ ಮಾಡುವ ಕರುಣಾಮಯಿ ಮಹಿಳೆ ಮನೆಯಲ್ಲಿ ನಡೆದುಕೊಳ್ಳುವ ವಿಚಾರ ತಿಳಿಸುತ್ತಾಳೆ. ಅವಿಭಕ್ತ ಕುಟುಂಬದ ಸಾಮರಸ್ಯಕ್ಕೆ ಮಹಿಳೆಯೇ ಕಾರಣ ಎಂದರು.

ಪ್ರಸ್ತುತ ಸಮಾಜದಲ್ಲಿ ಮಹಿಳೆ ಇದ್ದಂತೆ ಮನೆ, ಮನೆಯಿದ್ದಂತೆ ಮಠ, ಮಠವಿದ್ದಂತೆ ಸಮಾಜದ ಸಬಲೀಕರಣ ಎನ್ನಬಹುದು. ಅಕ್ಕಮಹಾದೇವಿ ಸಾಂಸರಿಕ ಜೀವನ ತ್ಯಜಿಸಿ ವೈರಾಗ್ಯದತ್ತ ಹೋದವರು. ಸಾಮಾಜಿಕ ಬದಲಾವಣೆಗೆ ಸುಮಾರು 430ಕ್ಕೂ ಹೆಚ್ಚು ವಚನಗಳನ್ನು ರಚಿಸಿದ ಕೀರ್ತಿ ಅಕ್ಕಮಹಾದೇವಿಯದು ಎಂದು ತಿಳಿಸಿದರು.

12ನೆ ಶತಮಾನದಲ್ಲಿ ಸಾಹಿತ್ಯ ಪರಂಪರೆಗೆ ಅಮೋಘ ಕೊಡುಗೆ ಸಲ್ಲಿಸಿದ ಅಕ್ಕಮಹಾದೇವಿ ಸಮಕಾಲೀನರಾದ ಕಾಳವ್ವೆ ಮತ್ತು ಆಕೆ ಪತಿ ಉರಿಲಿಂಗಪೆದ್ದಿಯ ಕಾಯಕ ನಿಷ್ಟೆ, ವ್ಯವಸ್ಥೆ, ಸತ್ಯ ಶುದ್ಧತೆ, ಆಸೆ ಭವದ ಬೀಜ, ನಿರಾಸೆ ಸತ್ಯಮುಕ್ತಿ ಮುಂತಾದ ವಚನಗಳನ್ನು ಉದಾಹರಿಸಿದರು.

ಸಂಘದ ಅಧ್ಯಕ್ಷೆ ಆಶಾಮಲ್ಲೇಶ್ ಮಾತನಾಡಿ, ಸಂಘ ಸುಮಾರು ೧೭ ವರ್ಷಗಳಿಂದ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಸಂಘದ ನಿರ್ದೇಶಕಿ ರಮ್ಯ ಸೇರಿದಂತೆ ಯುವ ಉತ್ಸಾಹಿಗಳು, ಯುವಕವತ್ರಿಯರು ಹಾಗೂ ಬಹುಮುಖ ಪ್ರತಿಭಾವಂತರು ಒಟ್ಟುಗೂಡಿಸಿ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬಂದಿದೆ ಎಂದು ಹೇಳಿದರು.

ಇದೇ ವೇಳೆ ಕವಯತ್ರಿ ರೇಖಾ ಶಾಸ್ತ್ರಿ ಮತ್ತು ಗೌರಮ್ಮ ಬಸವೇಗೌಡರ ಕುಟುಂಬದ ಸುಚಿತ್ರ ಸುದರ್ಶನ್ ಅವರನ್ನು ಸಂಘದ ಮಾಜಿ ಉಪಾಧ್ಯಕ್ಷೆ ದಾಕ್ಷಾಯಣಿ ಸತೀಶ್ಚಂದ್ರ ಸನ್ಮಾನಿಸಿದರು. ಬಳಿಕ ವಿವಿಧ ಆಟೋಟ ಸ್ಫರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸಂಘದ ಉಪಾಧ್ಯಕ್ಷೆ ಕುಸುಮ ರಾಜಶೇಖರ್, ಕಾರ್ಯದರ್ಶಿ ಆಶಾ ಹೇಮಂತ್, ಖಜಾಂಚಿ ಪಾರ್ವತಿ ಬಸವರಾಜ್, ಸಹ ಕಾರ್ಯದರ್ಶಿ ಮಧು ಶಿವಕುಮಾರ್, ನಿರ್ದೇಶಕಿ ರಮ್ಯ, ಸದಸ್ಯರಾದ ರುಕ್ಮಿಣಿ, ದಾಕ್ಷಾಯಣಿ, ಸವಿತಾ ಉಪಸ್ಥಿತರಿದ್ದರು.--ಫೋಟೋ--

ಚಿಕ್ಕಮಗಳೂರಿನ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಅಕ್ಕಮಹಾದೇವಿ ಮಹಿಳಾ ಸಂಘ ಹಾಗೂ ಕಾಳವ್ವೆ ತಂಡದಿಂದ ಆಯೋಜಿಸಿದ್ಧ ಭರತ ಹುಣ್ಣಿಮೆ ಕಾರ್ಯಕ್ರಮವನ್ನು ಕವಯತ್ರಿ ಯು.ಎಂ.ರೇಖಾಶಾಸ್ತ್ರಿ ಉದ್ಘಾಟಿಸಿದರು. ರಮ್ಯಾ, ಕುಸಮಾ, ಆಶಾ, ಪಾರ್ವತಿ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಿಲ್ಲಿಯಲ್ಲಿ ಡಿಕೆಶಿ ರಾಜ್ಯ ನೀರಾವರಿ ಸಭೆ
ಗ್ಯಾಸ್ ಇಲ್ಲದೇ ಬೆಳಗಾವಿಯ 60 + ಕೈಗಾರಿಕೆ ಬಂದ್‌ ಹಂತಕ್ಕೆ