ಕನ್ನಡಪ್ರಭ ವಾರ್ತೆ ಕೊಪ್ಪಳ
ಕೊಪ್ಪಳದ ನಗರದ ಲೇಬರ್ ಸರ್ಕಲ್ನಲ್ಲಿ ಎಸ್ಯುಸಿಐ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿಯ ಆಟೋ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ದಿನನಿತ್ಯ ನೂರಾರು ಜನ ದಿನಗೂಲಿ ಕಾರ್ಮಿಕರು ಹೊಟ್ಟೆಪಾಡಿಗಾಗಿ ಬುತ್ತಿ ಕಟ್ಟಿ ಕೆಲಸಕ್ಕಾಗಿ ಕಾಯುತ್ತಿರುವ ಈ ಸ್ಥಳ ಲೇಬರ್ ಸರ್ಕಲ್ ಆಗಿ ಹೆಸರುವಾಸಿಯಾಗಿದೆ. ದುಡಿಯುವ ಜನಗಳ ರಕ್ತ ಕೆಂಪು, ನಮ್ಮ ಪಕ್ಷದ ಹೋರಾಟದ ಬಾವುಟ ಕೂಡ ಕೆಂಪಾಗಿದೆ. ದುಡಿಯುವ ವರ್ಗದವರದ್ದು ಒಂದು ಜಾತಿ, ದುಡಿಯುವ ವರ್ಗದ ಜನರನ್ನು ಶೋಷಣೆ ಮಾಡುತ್ತಿರುವವರು ಇನ್ನೊಂದು ಜಾತಿ. ಇವೆರಡೇ ಜಾತಿಗಳಿರುವುದು. ಹಾಗಾಗಿ, ದುಡಿಯುವ ವರ್ಗದ ಪಕ್ಷ ಎಸ್ಯುಸಿಐ ದೇಶ ವ್ಯಾಪಿ ಜನಗಳ ಜ್ವಲಂತ ಸಮಸ್ಯೆಗಳ ವಿರುದ್ಧ ಹೋರಾಟದ ನೇತೃತ್ವ ವಹಿಸಿದೆ. ಚುನಾವಣೆಯನ್ನು ಹೋರಾಟದ ಭಾಗವೆಂದು ಭಾವಿಸಿದೆ ಎಂದರು.ಎಸ್ಯುಸಿಐ ಪಕ್ಷದ ಅಭ್ಯರ್ಥಿ ಶರಣು ಗಡ್ಡಿ ಮಾತನಾಡಿ, ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಅಧಿಕಾರಕ್ಕೆ ಬಂದ ಜನಪ್ರತಿನಿಧಿಗಳು ಜನಗಳ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಿಲ್ಲ. ಮುಖ್ಯವಾಗಿ ತುಂಗಭದ್ರಾ ನದಿ ಪಕ್ಕದಲ್ಲಿದ್ದರೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿಲ್ಲ. ಕೃಷಿಗೆ ಅವಶ್ಯಕತೆ ಇರುವ ಕೆರೆಗಳಿಗೆ ನದಿಯಿಂದ ನೀರು ತುಂಬಿಸುವ ಭರವಸೆ ಸುಳ್ಳಾಗಿದೆ. ನೂರಾರು ಕೈಗಾರಿಕೆಗಳಿದ್ದರೂ ಯುವಕರಿಗೆ ಕೆಲಸವಿಲ್ಲ.
ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಶರಣು ಗಡ್ಡಿ ಪರವಾಗಿ ಕೊಪ್ಪಳ ನಗರದ ಲೇಬರ್ ಸರ್ಕಲ್ನಲ್ಲಿ ಪ್ರಚಾರ ನಡೆಯಿತು.