8.41 ಲಕ್ಷ ಮಂದಿ ಭೂ ಮಾಲೀಕರು, ಇನ್ನು 5.37 ಲಕ್ಷ ಆರ್ಟಿಸಿ ಜೋಡಣೆ ಬಾಕಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಬ್ಯಾಂಕ್ ಖಾತೆ ಜತೆಗೆ ಆಧಾರ ಕಾರ್ಡ್ ಜೋಡಣೆ ಕಾರ್ಯಕ್ಕೆ ಕೈ ಹಾಕಿ ಯಶಸ್ವಿಯಾಗಿರುವ ಸರ್ಕಾರ, ಈಗ ಪಹಣಿ (ಆರ್ಟಿಸಿ) ಯೊಂದಿಗೆ ಆಧಾರ್ ಜೋಡಣೆ ಕಾರ್ಯಕ್ಕೆ ಕೈ ಹಾಕಿದೆ. ಈ ಕೆಲಸ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿದೆ.ಬ್ಯಾಂಕ್ಗಳಲ್ಲಿ ಸಾಲ ಕೇಳಲು ಹೋದರೆ ಮೊದಲಿಗೆ ಕೇಳುವುದು ಆಧಾರ್ ನಂಬರ್. ಕಾರಣ, ಯಾವುದಾದರೂ ಬ್ಯಾಂಕಿನಲ್ಲಿ ಈ ಹಿಂದೆ ಸಾಲ ಪಡೆಯಲಾಗಿದೆಯಾ, ಅದು ಸಕಾಲದಲ್ಲಿ ಮರು ಪಾವತಿ ಆಗಿದೆಯಾ, ಸಿಬಿಲ್ ಸ್ಕೋರ್ ನೋಡಿ ನಂತರ ಸಾಲ ಕೊಡುವ ಬಗ್ಗೆ ತೀರ್ಮಾನಕ್ಕೆ ಬರಲಾಗುತ್ತದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ 8,41,080 ಮಂದಿ ತಮ್ಮ ಹೆಸರಿನಲ್ಲಿ ಜಮೀನು ಹೊಂದಿದ್ದಾರೆ. ಅವರ ಆರ್ಟಿಸಿಯೊಂದಿಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆ ಮುಂದುವರೆದಿದ್ದು ಈವರೆಗೆ 3,03,272 ಜನರ ಪಹಣಿಯೊಂದಿಗೆ ಆಧಾರ್ ಲಿಂಕ್ ಮಾಡಬೇಕಾಗಿದೆ. ಅಂದರೆ, ಈವರೆಗೆ ಶೇ.44.35 ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ. ಇಲ್ಲಿನ 9 ತಾಲೂಕುಗಳ ಪೈಕಿ ತರೀಕೆರೆ, ಕಡೂರು, ಚಿಕ್ಕಮಗಳೂರು ಹಾಗೂ ಕಳಸ ತಾಲೂಕುಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯಾಗಿಲ್ಲ. ಶೃಂಗೇರಿ, ಕೊಪ್ಪ ಹಾಗೂ ಎನ್.ಆರ್.ಪುರ ತಾಲೂಕುಗಳಲ್ಲಿ ಸರಾಸರಿ ಶೇ. 56 ರಷ್ಟು ಪ್ರಗತಿ ಸಾಧಿಸಲಾಗಿದೆ.ಭೂ ಪರಿವರ್ತನೆ
ಜಮೀನು ಹೊಂದಿರುವ 47,220 ಮಂದಿ ಮೃತಪಟ್ಟಿರುವುದು ಪರಿಶೀಲನೆ ಸಂದರ್ಭದಲ್ಲಿ ಗಮನಕ್ಕೆ ಬಂದಿದೆ. ಆ ಜಮೀನು ಅವರ ಕುಟುಂಬದವರಿಗೆ ಪೌತಿ ಆಗಬೇಕಾಗಿದೆ. ಆದರೆ, ಈ ಕೆಲಸ ನೆನಗುದಿಗೆ ಬಿದ್ದಿದೆ. ಹಲವು ಕುಟುಂಬ ದವರು ತಮ್ಮ ಹೆಸರಿನಲ್ಲಿ ಪೌತಿ ಮಾಡಿಕೊಳ್ಳಲು ಆಸಕ್ತಿ ತೋರುತ್ತಿಲ್ಲ, ಹಾಗಾಗಿ ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿ ಇಂದಿಗೂ ಪಹಣಿ ಚಾಲ್ತಿಯಲ್ಲಿದೆ.
---- ಬಾಕ್ಸ್ -----ತಾಲೂಕುಭೂ ಮಾಲೀಕರುಆಧಾರ್- ಆರ್ಟಿಸಿ ಜೋಡಣೆ
ಶೃಂಗೇರಿ31654 14548
ಕೊಪ್ಪ 56951 24778
ಎನ್.ಆರ್.ಪುರ3044614967
- - - - - - - - - - - - - - - - - - - -ತರೀಕೆರೆ8532131441
- - - - - - - - - - - - - - - - - - - -ಕಡೂರು26936790361
- - - - - - - - - - - - - - - - - - - -ಚಿಕ್ಕಮಗಳೂರು18824757427
- - - - - - - - - - - - - - - - - - - -ಮೂಡಿಗೆರೆ 7249528491
- - - - - - - - - - - - - - - - - - - -ಅಜ್ಜಂಪುರ9075235687
- - - - - - - - - - - - - - - - - - - -ಕಳಸ 15847 5572
- - - - - - - - - - - - - - - - - - - -ಒಟ್ಟು 841080 303272
- - - - - - - - - - - - - - - - - - - -