ಹೊಸಪೇಟೆ: ವಿಧಾನಪರಿಷತ್ನ ಈಶಾನ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಾರಾ ಪ್ರತಾಪ್ ರೆಡ್ಡಿ ಅವರಿಗೆ ಆಮ್ ಆದ್ಮಿ ಪಾರ್ಟಿ ಬೆಂಬಲ ನೀಡಲು ನಿರ್ಧರಿಸಿದೆ ಎಂದು ಆಪ್ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.
ಈಶಾನ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿ ನಾರಾ ಪ್ರತಾಪ್ ರೆಡ್ಡಿ ಮಾತನಾಡಿ, ಇದೇ ಮೊದಲ ಬಾರಿಗೆ ಪದವೀಧರರ ಕ್ಷೇತ್ರದಲ್ಲಿ ಅತಿಹೆಚ್ಚಿನ ಮತದಾರರು ನೋಂದಣಿ ಮಾಡಿಸಿದ್ದು, ಅಖಂಡ ಬಳ್ಳಾರಿಯಲ್ಲಿ 42 ಸಾವಿರ ನೋಂದಣಿ ಆಗಿದೆ. 18 ಸಾವಿರದಷ್ಟು ವಿಜಯನಗರದಲ್ಲಿ ನೋಂದಣಿಯಾಗಿದೆ. ನಾಮಪತ್ರ ಸಲ್ಲಿಸುವ ಕೊನೆಯ ದಿನದವರಿಗೂ ನೋಂದಣಿ ಮಾಡಿಸಬಹುದು ಎಂದರು.
ಏಳು ಜಿಲ್ಲೆಗಳಲ್ಲಿ ಪ್ರವಾಸ ಮಾಡಿರುವೆ. ಹಾಲಿ ಎಂಎಲ್ಸಿ ಚಂದ್ರಶೇಖರ್ ಅವರ ತಾಲೂಕು ಹುಮ್ನಾಬಾದ್ನಲ್ಲಿ ಒಂದು ಕಾಲೇಜಿಗೂ ಭೇಟಿ ನೀಡಿಲ್ಲ. ಅವರ ಸಂಪೂರ್ಣ ಅನುದಾನದ ಶೇ. 80ರಷ್ಟು ತಮ್ಮ ಜಿಲ್ಲೆಗೆ ಹಾಕಿಕೊಂಡಿದ್ದಾರೆ. ಕಾಲೇಜು, ಶಾಲೆ, ಆಧುನೀಕರಣ ಸೇರಿ ಯಾವುದೇ ಕೆಲಸ ಮಾಡಿಲ್ಲ. ಈ ಬಾರಿ ನನಗೆ ಅವಕಾಶ ಕೊಟ್ಟರೆ ಶಿಕ್ಷಣ ಸಂಸ್ಥೆಗಳ ಸುಧಾರಣೆಗೆ ಶ್ರಮಿಸಲಾಗುವುದು. ಈ ಭಾಗದವರು ಯಾರೂ ಚುನಾಯಿತರಾಗಿಲ್ಲ. ಈ ಬಾರಿ ಈ ಕೂಗು ಕೇಳಿಬರುತ್ತಿದೆ. ಉತ್ತಮ ಪ್ರತಿಕ್ರಿಯೆ ಇದೆ. ಈ ಬಾರಿ ಪಕ್ಷ, ಜಾತಿ ಯಾವುದೇ ತಾರತಮ್ಯ ಇಲ್ಲದೆ ಎಲ್ಲರೂ ಬೆಂಬಲಿಸುತ್ತಿದ್ದಾರೆ ಎಂದರು.ಮುಖಂಡರಾದ ರುದ್ರಯ್ಯ ನವಲಿಮಠ, ಮರಿಸ್ವಾಮಿ, ವಿಜಯಕುಮಾರ, ನಿಷ್ಠಿ ರುದ್ರಪ್ಪ ಮತ್ತಿತರರಿದ್ದರು.