ಖಾಜು ಸಿಂಗೆಗೋಳ
ಬರ, ನೀರಿನ ಕೊರತೆ ನಡುವೆಯೂ ತಾಲೂಕಿನ ಜೇವೂರ ನರ್ಸರಿ(ಸಾಲುಮರ ತಿಮ್ಮಕ್ಕ ಉದ್ಯಾನ) 30 ಸಾವಿರ ವಿವಿಧ ಜಾತಿ ಸಸಿಗಳನ್ನು ಬೆಳೆಸಲಾಗಿದೆ. ಈ ಮೂಲಕ ರೈತರಿಗೆ ನೀಡಿ, ವಿವಿಧೆಡೆ ಬೆಳೆಸಲು ಪ್ರಾದೇಶಿಕ ಅರಣ್ಯ ಇಲಾಖೆ ಸಜ್ಜಾಗಿದೆ.
ಭೀಕರ ಬರಕ್ಕೆ ಜಲಪಾತಗಳು ಬತ್ತಿವೆ, ನದಿ, ಹಳ್ಳಗಳು ಒಣಗಿವೆ. ನೀರಿಗಾಗಿ ಜೀವರಾಶಿ ಬಿಕ್ಕುತ್ತಿವೆ. ಬಿಸಿಲಿಗೆ ಬೆಂದು ಬೆಂಡಾಗಿರುವ ರೈತರ ಬೆಳೆಗಳು ಒಣಗಿವೆ. ಜನವಸತಿ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸುತ್ತಿರುವ ತಾಲೂಕು ಆಡಳಿತ. ಇಷ್ಟೇಲ್ಲ ಸಮಸ್ಯೆ ಇದ್ದರೂ ಮಳೆಯ ಕೊರತೆಯಿಂದ ಭೀಕರ ಬರಗಾಲಕ್ಕೆ ಹೆಸರುವಾಸಿಯಾಗಿರುವ ಗಡಿಭಾಗದ ಇಂಡಿ ತಾಲೂಕಿನ ಜೇವೂರ ಗ್ರಾಮದ ಬಳಿಯ ನರ್ಸರಿಯಲ್ಲಿ (ಸಸ್ಯಕ್ಷೇತ್ರ) ಅರಣ್ಯಪ್ರದೇಶಲ್ಲಿ ಅರಣ್ಯ ಇಲಾಖೆಯಿಂದ ಬರ ಅಳಿಸುವ ಕಾಳಜಿ ಸದ್ದಿಲ್ಲದೆ ನಡೆದಿದೆ.19 ಹೆಕ್ಟೇರ್ ಪ್ರದೇಶ:
ಕಡಿಮೆ ದರದಲ್ಲಿ ವಿತರಣೆ:
ಸರ್ಕಾರಿ ಜಾಗದಲ್ಲಿ, ರಸ್ತೆ ಬದಿಯಲ್ಲಿ ಇಲಾಖೆಯಿಂದ ಸಸಿಗಳನ್ನು ನೆಡಲು ಬೇವು, ಹೊಂಗೆ, ಬಸರಿ,ಆಲ,ಅರಳಿ ಹಾಗೂ ಸಂಕೇಶ್ವರ ಸಸಿಗಳನ್ನು ಬೆಳೆಸಲಾಗಿದೆ.
ಬಾಕ್ಸ್
ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನ ಎಂದು ಹೆಸರಿಸಿ, ಜೇವೂರ ನರ್ಸರಿಯಲ್ಲಿ ನಿರ್ಮಿಸಿದ ಉದ್ಯಾನವನದಲ್ಲಿ ಪ್ಯಾರಾಗೋಲ, ಮಕ್ಕಳ ಆಟಿಕೆಗಳು, ಪ್ರವಾಸಿಗರಿಗೆ ಕುಳಿತು ಭೋಜನ ಮಾಡಲು ಭೋಜನ ಕೋಣೆ, ವಾಟರ್ ಟ್ಯಾಂಕ್, ವಾಕಿಂಗ್ ಪಥ (ಹಿರಿಯ ನಾಗರಿಕರಿಗಾಗಿ ವಾಕಿಂಗ್ ರಸ್ತೆ) ಸೇರಿದಂತೆ ವಿವಿಧ ಕಾರ್ಯಗಳನ್ನು ಕೈಗೊಂಡು ಉದ್ಯಾನ ಅಭಿವೃದ್ಧಿ ಪಡಿಸಲಾಗಿದೆ.
ಸಸಿಗಳಿಗೆ ನೀರಿಗಾಗಿ ಎರಡು ಕೃಷಿ ಹೊಂಡ
---
ಸಸಿ ಬೇಕಾದಲ್ಲಿ ಇಲ್ಲಿಗೆ ಸಂಪರ್ಕಿಸಿತಾಲೂಕಿನ ಜೆವೂರ ನರ್ಸರಿಯಲ್ಲಿ ವಿವಿಧ ಜಾತಿಯ ಸಸಿಗಳು ಲಭ್ಯವಿದ್ದು, ಆಸಕ್ತರು ಆಧಾರ್ ಕಾರ್ಡ್, ಜಮೀನ ಉತಾರೆ ನೀಡಿ ಸಸಿಗಳನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಇಂಡಿ ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದು.
---ಮಳೆ ಇಲ್ಲದೇ ಬರಕ್ಕೆ ತತ್ತರಿಸಿದ ತಾಲೂಕಿನಲ್ಲಿ ಸಾವಿರ ಫ್ಯೂಟ್ ಆಳದಲ್ಲಿ ಬೋರ್ವೆಲ್ ಕೊರೆಯಿಸಿದರೂ ನೀರು ಬಾರದೇ ಇರುವ ದಿನಮಾನದಲ್ಲಿಯೂ ಕಡಿಮೆ ಅವಧಿಯಲ್ಲಿ ಜೇವೂರ ನರ್ಸರಿಯಲ್ಲಿ 30 ಸಾವಿರ ವಿವಿಧ ಜಾತಿಯ ಸಸಿ ಬೆಳೆಸಲಾಗಿದೆ. ಇಲಾಖೆಯ ಸಿಬ್ಬಂದಿ ಹಾಗೂ ದಿನಗೂಲಿಗಳ ಶ್ರಮ ಇದರಲ್ಲಿ ಅಡಗಿದೆ. ರಿಯಾಯಿತಿ ದರದಲ್ಲಿ ಸಸಿಗಳನ್ನು ವಿತರಿಸಲಾಗುವುದು.
-ಎ.ಎಸ್.ಪಾಕೆ, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ, ಇಂಡಿ.