ಕನ್ನಡಪ್ರಭ ವಾರ್ತೆ ಸಾವಳಗಿ
ಸಾವಳಗಿ ಗ್ರಾಮದ ಹಿಂದು ರುದ್ರಭೂಮಿಯಲ್ಲಿ ತಮ್ಮ ಹುಟ್ಟುಹಬ್ಬದ ನಿಮಿತ್ತ ಉಮೇಶ ಜಾಧವ ನೇತೃತ್ವ ತಂಡದ ಸಮ್ಮುಖದಲ್ಲಿ 30ಕ್ಕೂ ಅಧಿಕ ಸಸಿಗಳನ್ನು ನೆಟ್ಟು ನೀರುಣಿಸಿ ಮಾತನಾಡಿದರು.
ಪರಿಸರ ಬೆಳೆಸಿ ಪೋಷಣೆ ಮಾಡುವ ಕಾರ್ಯ ಅಷ್ಟೊಂದು ಸುಲಭವಲ್ಲ. ಪರಿಸರ ಸಂರಕ್ಷಿಸಲು ಹೃದಯವಂತಿಕೆ ಬೇಕು. ಪರಿಸರದಿಂದ ಆಮ್ಲಜನಕ ರಕ್ಷಣೆಯ ಮಹತ್ವ ತಿಳಿಸುವುದು ಅವಶ್ಯ. ಗಿಡ ಬೆಳೆಸಿ ಪೋಷಿಸುವ ಮೂಲಕ ನಮ್ಮ ಮುಂದಿನ ಪಿಳಿಗೆಗೆ ಉತ್ತಮ ವಾತಾವರಣ ನೀಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.ಉಪತಹಸೀಲ್ದಾರ್ ವೈ.ಎಚ್. ದ್ರಾಕ್ಷಿ, ಪಿಡಿಒ ಗಿರೀಶ ಕಡಕೋಳ, ಗ್ರಾಮ ಆಡಳಿತಾಧಿಕಾರಿ ಈಶ್ವರ ಹೊಸಲ್ಕರ, ರಾಮಣ್ಣ ಬಂಡಿವಡ್ಡರ, ಕಿರ್ತಕುಮಾರ ನಾಂದ್ರೇಕರ, ಸಿದ್ಧಾರ್ಥ ತಳಕೇರಿ, ಅಣ್ಣಪ್ಪ ಮೋಹಿತೆ, ನಂದಕುಮಾರ ಕನೇರಿ, ಮಹಾದೇವ ಮಾಳಿ ಸೇರಿದಂತೆ ಅನೇಕರು ಇದ್ದರು.