- ಚಿಕ್ಕಶಕುನ ಸ.ನಂ.30ರ 150 ಎಕರೆ ಅರಣ್ಯ ಪ್ರದೇಶದಲ್ಲಿರುವ ಬೃಹತ್ ಮರಗಳು । ಜಾನುವಾರುಗಳಿಗೆ ತೊಂದರೆ: ಗ್ರಾಮಸ್ಥರ- - -
ಮಳೆಗಾಲದಲ್ಲಿ ಸುಡುಬಿಸಿಲ ಧಗೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ವನ ಪ್ರದೇಶಗಳಲ್ಲಿ ಅಳಿದುಳಿದ ಕಾನನದಲ್ಲಿ ಬರಡಾಗುತ್ತಿದೆ. ಈ ಮಧ್ಯೆ ಅರಣ್ಯ ಇಲಾಖೆ ತಂಪೆರೆಯುತ್ತಿದ್ದ ಶೀಗೆಹಳ್ಳಿ ಗ್ರಾಮದ ಅಕೇಶಿಯಾ ಮರಗಳನ್ನು ಧರೆಗೆ ಉರುಳಿಸುತ್ತಿದೆ. ಇಲಾಖೆಯ ಈ ಕ್ರಮವೀಗ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಸೊರಬ ಪುರಸಭೆ ವ್ಯಾಪ್ತಿಗೆ ಒಳಪಡುವ ಚಿಕ್ಕಶಕುನ ಸರ್ವೆ ನಂ.30ರಲ್ಲಿರುವ ಸುಮಾರು 150 ಎಕರೆ ಅರಣ್ಯ ಪ್ರದೇಶದಲ್ಲಿ 2ರಿಂದ 3 ಸಾವಿರ ಅಕೇಷಿಯಾ ಮರಗಳು ಬೆಳೆದು ಹೆಮ್ಮರವಾಗಿವೆ. ಶಿಗೇಹಳ್ಳಿ, ಚಿಕ್ಕಶಕುನ, ಬಿಳಾಗಿ ಗ್ರಾಮಗಳ ರೈತರು ಗದ್ದೆಯಲ್ಲಿ ಬಿಸಿಲ ನಡುವೆ ಬಳಲಿ ಧಣಿವಾರಿಸಿಕೊಳ್ಳಲು ಇಂಥ ಬೃಹತ್ ಮರಗಳನ್ನೇ ಆಶ್ರಯಿಸುತ್ತಾರೆ. ಸದಾ ತಂಪೆರೆಯುವ ಈ ಮರಗಳ ಬುಡದಲ್ಲಿ ಹುಲ್ಲು ಹುಲುಸಾಗಿ ಬೆಳೆದು ದನ- ಕರುಗಳಿಗೆ ಮತ್ತು ಕಾಡು ಪ್ರಾಣಿಗಳ ಹಸಿವು ನೀಗಿಸುತ್ತಿವೆ. ಸದರಿ ಗ್ರಾಮಗಳ ಜಾನುವಾರುಗಳಿಗೆ ನೆರವಾಗಲೆಂದು ಪ್ಲಾಂಟೇಶನ್ ಪ್ರದೇಶದಲ್ಲಿ 2 ಗೋಕಟ್ಟೆಗಳನ್ನು ಸಹ ಅರಣ್ಯ ಇಲಾಖೆಯೇ ನಿರ್ಮಿಸಿ, ಪ್ರಾಣಿ- ಪಕ್ಷಿಗಳಿಗೆ ನೀರಿನ ಸೌಲಭ್ಯ ಒದಗಿಸಿದೆ. ಹೀಗಿದ್ದರೂ ಏಕಾಏಕಿ ಸರ್ಕಾರದ ಆದೇಶ ಇದೆ ಎಂದು ಇಲಾಖಾ ಅಧಿಕಾರಿಗಳು ಅಕೇಷಿಯಾ ಮರಗಳ ಕಟಾವು ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.ಅದೇ ಸರ್ವೆ ನಂ.ನಲ್ಲಿ ಶೀಗೆಹಳ್ಳಿ, ಚಿಕ್ಕಶಕುನ, ಬಿಳಾಗಿ ಗ್ರಾಮಗಳಿಗೆ ಸೇರಿದ 88.38 ಎಕರೆ ಗೋಮಾಳವಿದೆ. ಆದರೆ, ಮಳೆಯಿಲ್ಲದೇ ಒಣಗಿ ಬರಡಾಗಿರುವ ಗೋಮಾಳ ಭೂಮಿಯಲ್ಲಿ ಜಾನುವಾರುಗಳಿಗೆ ಆಹಾರವೂ ಇಲ್ಲ, ಗುಟುಕು ನೀರೂ ಸಿಗುತ್ತಿಲ್ಲ. ಈ ಕಾರಣದಿಂದ 2ರಿಂದ 3 ಸಾವಿರ ಅಕೇಷಿಯಾ ಮರಗಳನ್ನು ಹೊಂದಿ ಸದಾ ಹಸಿರಾಗಿ, ತಂಪೆರೆದು ಹರಿಧ್ವರ್ಣದ ಕಾನನದಂತೆ ಭಾಸವಾಗುವ ಪ್ಲಾಂಟೇಷನ್ನನ್ನು ಜಾನುವಾರುಗಳು ಆಶ್ರಯಿಸಿವೆ. ಈಗ ಈ ಮರಗಳನ್ನು ಕಡಿಯುದರಿಂದ ಇಡೀ ಪ್ರದೇಶವೇ ಬಯಲಾಗಿ ಜಾನುವಾರುಗಳಿಗೆ ಮಾರಕ ವಾತಾವರಣ ನಿರ್ಮಾಣವಾಗುತ್ತದೆ. ಕೂಡಲೇ ಮರಗಳ ಕಡಿತಲೆ ನಿಲ್ಲಿಸಬೇಕು ಎಂಬ ಕೂಗೆದ್ದಿದೆ.
ಕೋಟ್ಸ್
– ಕೆರಿಯಪ್ಪ ಶೀಗೆಹಳ್ಳಿ, ಅಧ್ಯಕ್ಷ, ಗ್ರಾಮ ಅಭಿವೃದ್ಧಿ ಸಮಿತಿ
– ಜಾವೇದ್ ಬಾಷಾ, ವಲಯ ಅರಣ್ಯಾಧಿಕಾರಿ, ಸೊರಬ
(ಸಾಂದರ್ಭಿಕ ಚಿತ್ರ)