ಕನ್ನಡಪ್ರಭ ವಾರ್ತೆ ಮಳವಳ್ಳಿ
ಬರಗಾಲದ ನಡುವೆಯೂ ಕಷ್ಟಪಟ್ಟು ಬೆಳೆದ ಕಬ್ಬು ಬೆಂಕಿಗೆ ನಾಶವಾಗಿದ್ದು. ಇದ್ದರಿಂದ ಎರಡು ಲಕ್ಷಕ್ಕೂ ಹೆಚ್ಚು ಹಣ ನಷ್ಟವಾಗಿದೆ. ಹಾಗಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು ಎಂದು ಚೈತ್ರಾ ನಂದೀಶ್ ಒತ್ತಾಯಿಸಿದರು.
ಬಿರುಗಾಳಿ ಮಳೆಗೆ ಬೆಳೆ ನಾಶ ಅಧಿಕಾರಿಗಳಿಂದ ಪರಿಶೀಲನೆಭಾರತೀನಗರ:ಕೊಕ್ಕರೆ ಬೆಳ್ಳೂರಿನಲ್ಲೂ ಕಳೆದ ಶುಕ್ರವಾರ ಬಿಸಿದ ಬಿರುಗಾಳಿ ಸಹಿತ ಮಳೆಗೆ ಸಿಲುಕಿದ ವಿಳ್ಯೆದೆಲೆ ಮತ್ತು ಬಾಳೆ ತೋಟಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ವೀಳ್ಯೆದೆಲೆ ತೋಟದ ರೇಣುಕಮ್ಮಕೆಂಪಯ್ಯ ಮತ್ತು ಬಾಳೆ ತೋಟದ ಗೌರಮ್ಮ ಸ್ಥಳಕ್ಕೆ ಭೇಟಿನೀಡಿದ ತಹಸೀಲ್ದಾರ್ ಸೋಮಶೇಖರ್ ಮತ್ತು ತೋಟಗಾರಿಕೆ ಇಲಾಖೆ ಸಹಾಯಕಿ ನಿರ್ದೇಶಕಿ ರೇಖಾ ಅವರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದರು.ಅಲ್ಲದೇ ಬಿರುಗಾಳಿ ಮಳೆಗೆ ಹಳ್ಳಿಕೆರೆ ಗ್ರಾಮದಲ್ಲಿ ರೈತ ಬೋರಯ್ಯ ತಮ್ಮ 2 ಎಕರೆಯಲ್ಲಿ ಬಾಳೆ ಮತ್ತು ಪರಂಗಿ ಬೆಳೆ ಬೆಳೆದಿದ್ದರು. ಬೆಳೆ ಸಂಪೂರ್ಣ ನಾಶಗೊಂಡು ಲಕ್ಷಾಂತರ ರು ನಷ್ಟ ಉಂಟಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಸ್ಥಳಕ್ಕೆ ಭೇಟಿನೀಡಿದ ತಹಸೀಲ್ದಾರ್ ಸೋಮಶೇಖರ್ ಅವರನ್ನು ಆಗ್ರಹಿಸಿದರು.