ಕನ್ನಡಪ್ರಭವಾರ್ತೆ ತರೀಕೆರೆ
ತರೀಕೆರೆ ಮತ್ತು ಅಜ್ಜಂಪುರ ತಾಲೂಕು ಶ್ರೀವೈಷ್ಣವ ಸಭಾ ಸಂಘ ವತಿಯಿಂದ ಪಟ್ಟಣದ ಶ್ರೀ ಸತ್ಯಪ್ರದ ಲಕ್ಷ್ಮೀವೆಂಕಟೇಶ್ವರ ದೇವಾಲಯದಲ್ಲಿ ಏರ್ಪಡಿಸಿದ್ದ ಜಗದ್ಗುರು ಶ್ರೀ ರಾಮಾನುಜಚಾರ್ಯರ 1008ನೇ ವಿಶ್ವ ಜಯಂತ್ಯುತ್ಸವ ಸುಸಂಪನ್ನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಭಗವದ್ಭಕ್ತರೆಲ್ಲರಿಗೂ ಮುಕ್ತ ಪಥ ತೋರಿದ ಅಧ್ವೈರ್ಯರು, ಭಕ್ತಿ ಮಾರ್ಗಕ್ಕೆ ಧ್ಯಾನ ಭಜನೆ, ಭಗವನ್ನಾಮ ಸಂಕೀರ್ತನೆಯ ಮೂಲಕ ಭಗವಂತನಲ್ಲಿ ನಾವು ಆತ್ಮ ನಿವೇದನೆ ಅರ್ಪಿಸುವ ಪ್ರಾರ್ಥನೆಯು ಸುಖ ಶಾಂತಿ ನೆಮ್ಮದಿಯನ್ನು ಪಡೆಯಬಹುದು. ಅಂತರಂಗದಲ್ಲಿ ಭಗವಂತನನ್ನು ಧಾರಣೆ ಮಾಡಿ ಬಹಿರಂಗದಲ್ಲಿ ದಾನ, ಧರ್ಮ, ನಿಸ್ವಾರ್ಥವನ್ನು ಅಳವಡಿಸಿಕೊಂಡಲ್ಲಿ ನಾವು ಭಗವಂತನ ಅಂಶವೇ ಅಗುತ್ತೇವೆ ಎಂದು ಹೇಳಿದರು.
ವೇದ ಉಪನಿಷತ್ತು ರಾಮಾಯಣ ಮಹಾಭಾರತ ಭಗವದ್ಗೀತೆಯ ಸಾರವನ್ನು ಪ್ರತಿ ಮನೆಯಲ್ಲೂ ಪ್ರತಿ ದಿನವು ಮನೆ ಮಂದಿ ಎಲ್ಲ ಕುಳಿತು ಕಲವು ಸಮಯವಾದರೂ ಜಪಿಸುವಂತಾದಾಗ ಮಾತ್ರ ಶ್ರೀ ಆಚಾರತ್ರಯರ ಬೋಧನೆ ಸಾರ್ಥಕವಾದೀತು ಎಂದರು.ಜಿ.ಎಚ್.ಶ್ರೀನಿವಾಸ್ ಜನಹಿತ ಸೇವಾ ಟ್ರಸ್ಟ್ ಅಧ್ಯಕ್ಷೆ ವಾಣಿ ಶ್ರೀನಿವಾಸ್ ಅವರು ಶ್ರೀ ರಾಮಾನುಜಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವುದರ ಮೂಲಕ ಬೆಳಗಿನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಮಹಾಪುರುಷರು ಲೋಕಕಲ್ಯಾಣಕ್ಕೆ ತೋರಿದ ಮಾರ್ಗ ಅನುಸರಿಸಿದರೆ ಶಾಂತಿ ನೆಮ್ಮದಿ ದೊರಕುತ್ತದೆ ಎಂದರು.
ಶ್ರೀಸತ್ಯಪ್ರದ ಶ್ರೀಲಕ್ಷ್ಮೀವೆಂಕಟೇಶ್ವರ ದೇವಾಲಯದಲ್ಲಿ ಶ್ರೀ ಲಕ್ಷ್ಮಿವೆಂಕಟೇಶ್ವರ ಸ್ವಾಮಿ ಮತ್ತು ಶ್ರೀ ರಾಮಾನುಜಚಾರ್ಯರಿಗೆ ಪಂಚರಾತ್ರ ಆಗಮ ವೈಕಾನಸ ಕ್ರಮದಂತೆ ತಿರುಮಂಜನ, ತಿರುವಾಯುಮುಡಿ ಪಾಷರಗಳ ಪಠಣದೊಂದಿಗೆ ಷೋಡೋಷೋಪಚಾರ ಪೂಜೆ ನೆರವೇರಿಸಲಾಯಿತು ಮತ್ತು ಪುಷ್ಪಾಲಂಕೃತ ಶೃಂಗಾರಗೊಂಡ ಪಲ್ಲಕ್ಕಿಯಲ್ಲಿ ಶ್ರೀಗಳು, ಹಾಗೂ ಪದ್ಮಾವತಿ ವೆಂಕಟೇಶ್ವರ ಉತ್ಸವ ಏರ್ಪಡಿಸಲಾಗಿತ್ತು. ಕಡೂರು, ಭದ್ರಾವತಿ ಮತ್ತು ಶಿವಮೊಗ್ಗ ಶ್ರೀವೈಷ್ಣವ ಸಭಾದ ಮುಖಂಡರನ್ನು ಗೌರವಿಸಿ ಸನ್ಮಾನಿಸಲಾಯಿತು. ಕೇಂಬ್ರಿಡ್ಜ್ ಶಾಲಾ ಮಕ್ಕಳು ಶ್ರೀ ಯತಿರಾಜ ಸ್ತುತಿಯನ್ನು ಸ್ತುತಿಸಿದರು.
ಕಾರ್ಯಾಧ್ಯಕ್ಷ ಶ್ರೀನಿವಾಸ್, ಎಚ್.ಸಿ.ಗೋಪಾಲಕೃಷ್ಣ, ಡಾ.ಬಿ.ಹೆಚ್.ಕುಮಾರಸ್ವಾಮಿ, ರಮೇಶ್, ಅರ್ಚಕರಾದ ತಿರುಮಲಸ್ವಾಮಿ, ಯತಿರಾಜ, ದೇವಸ್ಥಾನದ ಟ್ರಸ್ಟಿಗಳು, ಭಜನಾ ಮಂಡಳಿ ಮಾತೆಯರು ಭಾಗವಹಿಸಿದ್ದರು.