ವಿಷಯಗಳ ಅರಿಯುವ ಕುತೂಹಲ ಇದ್ದಲ್ಲಿ ಸಾಧನೆ ಸಾಧ್ಯ

KannadaprabhaNewsNetwork |  
Published : Oct 26, 2025, 02:00 AM IST
25ಕೆಡಿವಿಜಿ6, 7-ದಾವಣಗೆರೆಯಲ್ಲಿ ಶನಿವಾರ ಯುಗ ಪುರುಷ ಆಲ್ಬರ್ಟ್ ಐನ್‌ಸ್ಟೈನ್‌ ನಾಟಕ ಪ್ರದರ್ಶನ ಉದ್ಘಾಟಿಸಿದ ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಡಾ.ಕೆ.ಸಿದ್ದಪ್ಪ, ಡಾ.ಎಚ್.ಬಿ.ಅರವಿಂದ, ಪ್ರೊ.ವೈ.ವೃಷಭೇಂದ್ರಪ್ಪ ಇತರರು ಇದ್ದರು. .................25ಕೆಡಿವಿಜಿ8, 9, 10-ದಾವಣಗೆರೆಯಲ್ಲಿ ಶನಿವಾರ ಯುಗ ಪುರುಷ ಆಲ್ಬರ್ಟ್ ಐನ್‌ಸ್ಟೈನ್‌ ನಾಟಕ ಪ್ರದರ್ಶನದ ಒಂದು ದೃಶ್ಯ. | Kannada Prabha

ಸಾರಾಂಶ

ವಿಜ್ಞಾನ, ಪರಿಸರ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಅರಿಯುವ ಕುತೂಹಲ ಇದ್ದಾಗ ಮಾತ್ರ ಉತ್ತಮ ವಿದ್ಯಾರ್ಥಿಯಾಗಿ ಹೊರಹೊಮ್ಮಲು, ಸಾಧಕರಾಗಲು ಸಾಧ್ಯ ಎಂಬುದಕ್ಕೆ ನೋಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್‌ ಉತ್ತಮ ನಿದರ್ಶನವಾಗಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದ್ದಾರೆ.

- ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅಭಿಮತ । ಬಿಐಇಟಿ ಕಾಲೇಜಿನಲ್ಲಿ ಯುಗಪುರುಷ ಆಲ್ಬರ್ಟ್ ಐನ್‌ಸ್ಟೈನ್ ನಾಟಕ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ವಿಜ್ಞಾನ, ಪರಿಸರ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಅರಿಯುವ ಕುತೂಹಲ ಇದ್ದಾಗ ಮಾತ್ರ ಉತ್ತಮ ವಿದ್ಯಾರ್ಥಿಯಾಗಿ ಹೊರಹೊಮ್ಮಲು, ಸಾಧಕರಾಗಲು ಸಾಧ್ಯ ಎಂಬುದಕ್ಕೆ ನೋಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್‌ ಉತ್ತಮ ನಿದರ್ಶನವಾಗಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.

ನಗರದ ಬಿಐಇಟಿ ಕಾಲೇಜಿನ ಎಸ್‌.ಎಸ್‌. ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದಲ್ಲಿ ಶನಿವಾರ ಬಾಪೂಜಿ ವಿದ್ಯಾಸಂಸ್ಥೆ, ಬೆಂಗಳೂರಿನ ಪಿಇಎಸ್‌ ವಿಶ್ವವಿದ್ಯಾನಿಲಯದ ಪ್ರದರ್ಶಕ ಕಲೆಗಳ ವಿಭಾಗದಿಂದ ದಾವಣಗೆರೆ ಅನ್ವೇಷಕರು ಆರ್ಟ್ ಫೌಂಡೇಷನ್‌ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಯುಗಪುರುಷ ಆಲ್ಬರ್ಟ್ ಐನ್‌ಸ್ಟೈನ್‌ ನಾಟಕ ಪ್ರದರ್ಶನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಕ್ಕಳಲ್ಲಿ ವಿಜ್ಞಾನ, ಪರಿಸರ ಸೇರಿದಂತೆ ಯಾವುದೇ ವಿಷಯದ ಬಗ್ಗೆ ಕುತೂಹಲ ಬೆಳೆಸಬೇಕಾಗ ತುರ್ತು ಅವಶ್ಯಕತೆ ಇದೆ. ಅಧ್ಯಾತ್ಮಕ್ಕೂ, ವಿಜ್ಞಾನಕ್ಕೂ ಒಂದು ನಂಟಿದೆ. ಇದು ಐನ್ ಸ್ಟೈನ್‌ರಲ್ಲಿ ಬಾಲ್ಯದಲ್ಲೇ ಮೊಳಕೆಯೊಡೆದಿತ್ತು. ವಿದ್ಯಾರ್ಥಿಗಳಿಗೆ ಐನ್‌ಸ್ಟೈನ್‌ ಮಾದರಿಯಾಗಬೇಕು. ಸಾಧನೆ ವೇಳೆ ಯಾವುದೇ ಕಾರಣಕ್ಕೂ ತಲುಪಬೇಕಾದ ಗುರಿ ಕೈಬಿಡಬಾರದು. ಆಗ ಮಾತ್ರವೇ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ ಎಂದು ಹೇಳಿದರು.

ನಾಟಕ ಪ್ರದರ್ಶನ ಉದ್ಘಾಟಿಸಿದ ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನೋಡುಗರ ಅಭಿರುಚಿಗೆ ತಕ್ಕಂತಿರುವ ನಾಟಕಗಳು ಯಶಸ್ವಿಯಾಗುತ್ತವೆ. ಡಾ. ಕೆ.ಸಿದ್ದಪ್ಪ ಅವರು ತುಂಬಾ ಹಿಂದೆಯೇ ಈ ಕೃತಿಯ ಬಗ್ಗೆ ನಮ್ಮ ಗಮನಕ್ಕೆ ತಂದಿದ್ದರು. ಆಗ ನಾಟಕ ಮಾಡುವುದು ಕಷ್ಟ ಅಂದಿದ್ದೆವು. ಆದರೆ, ಇದಕ್ಕೊಂದು ಹೊಸ ರೂಪ ಕೊಟ್ಟು, ರಂಗ ಪ್ರಯೋಗಕ್ಕಿಳಿಸಿದ ಸುಷ್ಮಾ ಮತ್ತು ಕಲಾವಿದರು ಅಭಿನಂದನಾರ್ಹರು ಎಂದರು.

ಬೆಂಗಳೂರು ವಿ.ವಿ. ವಿಶ್ರಾಂತ ಕುಲಪತಿ, ಪರಮಾಣು ವಿಜ್ಞಾನಿ, ನಾಟಕ ರಚನೆಕಾರ ಡಾ. ಕೆ.ಸಿದ್ದಪ್ಪ ಮಾತನಾಡಿ, ಶಿಕ್ಷಕರು ಮಕ್ಕಳಲ್ಲಿ ಪ್ರಶ್ನೆ ಮಾಡುವ ಮನೋಭಾವವನ್ನು ಬೆಳೆಸಬೇಕು. ಇದರಿಂದ ವಿದ್ಯಾರ್ಥಿಗಳಿಗೆ ವಿಷಯಗಳಲ್ಲಿ ಆಸಕ್ತಿ ಮೂಡಿ, ಸಾಧನೆ ಮಾಡಲು ಪ್ರೇರಣೆ ಸಿಕ್ಕಂತಾಗುತ್ತದೆ. ಇದು ಆದರ್ಶ ಶಿಕ್ಷಕರಾಗಲು ಇರುವಂತಹ ಮಾರ್ಗವಾಗಿದೆ ಎಂದರು.

ಪಿಇಎಸ್ ವಿಶ್ವವಿದ್ಯಾಲಯದ ಪ್ರದರ್ಶಕ ಕಲೆಗಳ ವಿಭಾಗ ಮುಖ್ಯಸ್ಥೆ, ನಾಟಕದ ನಿರ್ದೇಶಕಿ ಡಾ. ಎಸ್.ವಿ. ಸುಷ್ಮಾ, ಪ್ರತಿಮಾ ಸಭಾ ಗೌರವಾಧ್ಯಕ್ಷ ಪ್ರೊ. ಎಸ್.ಹಾಲಪ್ಪ, ಬಿಐಇಟಿ ಕಾಲೇಜಿನ ನಿರ್ದೇಶಕ ಪ್ರೊ. ವೈ.ವೃಷಭೇಂದ್ರಪ್ಪ, ಪ್ರಾಚಾರ್ಯ ಡಾ. ಎಚ್.ಬಿ.ಅರವಿಂದ, ವಿದ್ಯಾರ್ಥಿನಿ ಪುಣ್ಯಶ್ರೀ ಇತರರು ಇದ್ದರು. ಡಾ. ಎಸ್.ವಿ.ಸುಷ್ಮಾ ನಿರ್ದೇಶನದಲ್ಲಿ ಡಾ. ಕೆ.ಸಿದ್ದಪ್ಪ ರಚಿಸಿರುವ ಯುಗಪುರುಷ ಆಲ್ಬರ್ಟ್ ಐನ್‌ಸ್ಟೈನ್ ನಾಟಕ ಪ್ರದರ್ಶನಗೊಂಡಿತು. ಸಂಜೆ ಪಿಯು ಕಾಲೇಜು ವಿದ್ಯಾರ್ಥಿಗಳಿಗಾಗಿ 2ನೇ ಪ್ರದರ್ಶನ ಜರುಗಿತು. ಅ.26ರ ಬೆಳಗ್ಗೆ 11 ಗಂಟೆಗೆ ಹಾಸ್ಟೆಲ್ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನಾಟಕ ಪ್ರದರ್ಶನವಿದೆ.

- - -

(ಕೋಟ್‌) ಸಾಣೇಹಳ್ಳಿಯಲ್ಲಿ ನ.2ರಿಂದ 7ರವರೆಗೆ ನಾಟಕೋತ್ಸವ ಏರ್ಪಡಿಸಲಾಗಿದ್ದು, ಅಲ್ಲಿ ಇಂತಹ ನಾಟಕಗಳು ಇರುವುದಿಲ್ಲ. ಧಾರ್ಮಿಕ, ವೈಚಾರಿಕ, ಸಾಮಾಜಿಕ ನಾಟಕಗಳನ್ನು ಅಲ್ಲಿ ಆಯೋಜಿಸಲಾಗಿರುತ್ತದೆ. ಅವಕಾಶ ಮಾಡಿಕೊಂಡು ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ಆಗಮಿಸಿ. - ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸಾಣೆಹಳ್ಳಿ ಮಠ.

- - -

-25ಕೆಡಿವಿಜಿ6, 7.ಜೆಪಿಜಿ:

ದಾವಣಗೆರೆಯಲ್ಲಿ ಶನಿವಾರ ಯುಗಪುರುಷ ಆಲ್ಬರ್ಟ್ ಐನ್‌ಸ್ಟೈನ್‌ ನಾಟಕ ಪ್ರದರ್ಶನವನ್ನು ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಡಾ. ಕೆ.ಸಿದ್ದಪ್ಪ, ಡಾ. ಎಚ್.ಬಿ.ಅರವಿಂದ, ಪ್ರೊ. ವೈ.ವೃಷಭೇಂದ್ರಪ್ಪ ಇತರರು ಇದ್ದರು. -25ಕೆಡಿವಿಜಿ8, 9, 10.ಜೆಪಿಜಿ:

ದಾವಣಗೆರೆಯಲ್ಲಿ ಶನಿವಾರ ಯುಗಪುರುಷ ಆಲ್ಬರ್ಟ್ ಐನ್‌ಸ್ಟೈನ್‌ ನಾಟಕ ಪ್ರದರ್ಶನದ ದೃಶ್ಯ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ