ಕೊಪ್ಪಳ: ನಿಸರ್ಗದತ್ತವಾದ ಹಕ್ಕುಗಳ ಜತೆಗೆ ಪ್ರತಿಯೊಬ್ಬರು ಸಂತೃಪ್ತ ಜೀವನ ನಡೆಸಲು ಕೆಲವು ಹಕ್ಕುಗಳನ್ನು ಸಂವಿಧಾನದಲ್ಲಿ ನೀಡಲಾಗಿದ್ದು, ಕಾನೂನಿನ ಮೂಲಕ ಅವುಗಳಿಗೆ ಯಾವುದೇ ಚ್ಯುತಿ ಬರದಂತೆ ನಾವೆಲ್ಲರೂ ನಡೆದುಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಯಲಬುರ್ಗಾ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ವಿಜಯಕುಮಾರ ಮ. ಕನ್ನೂರ ಹೇಳಿದರು.
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಪ್ರತಿಯೊಬ್ಬರು ಸಂವಿಧಾನ ಹಾಗೂ ಕಾನೂನು ಬಗ್ಗೆ ತಿಳಿವಳಿಕೆ ಪಡೆದುಕೊಳ್ಳುವುದು ಅತ್ಯವಶ್ಯ. ಹಾಗೆಯೇ ಪ್ರಸ್ತುತ ದಿನಗಳಲ್ಲಿ ಸೈಬರ್ ಕ್ರೈಮ ಎನ್ನುವುದು ಬಹಳ ನಡೆಯುತ್ತಿದ್ದು, ಪ್ರತಿಯೊಬ್ಬರೂ ಯಾವುದೇ ವೈಯಕ್ತಿಕ ದಾಖಲೆಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವಾಗ ಎಚ್ಚರ ವಹಿಸಬೇಕು. ನಿಸರ್ಗದತ್ತವಾದ ಹಕ್ಕುಗಳ ಜತೆಗೆ ಪ್ರತಿಯೊಬ್ಬರು ಸಂತೃಪ್ತ ಜೀವನ ನಡೆಸಲು ಕೆಲವು ಹಕ್ಕುಗಳನ್ನು ಸಂವಿಧಾನದಲ್ಲಿ ನೀಡಲಾಗಿದ್ದು, ಕಾನೂನಿನ ಮೂಲಕ ಅವುಗಳಿಗೆ ಯಾವುದೇ ಚ್ಯುತಿ ಬರದಂತೆ ನಾವೆಲ್ಲರೂ ನಡೆದುಕೊಳ್ಳಬೇಕು ಎಂದು ಹೇಳುತ್ತಾ ವಿದ್ಯಾರ್ಥಿಗಳಿಗೆ ಮಾನವ ಹಕ್ಕುಗಳು, ಮೂಲಭೂತ ಹಕ್ಕುಗಳು, ಮಕ್ಕಳ ಹಕ್ಕುಗಳ ನಡುವಿನ ವ್ಯತ್ಯಾಸ ಸ್ಪಷ್ಟಪಡಿಸಿದರು.
ಯಲಬುರ್ಗಾ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ವಿ. ಕೆ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಯಲಬುರ್ಗಾ ಸಹಾಯಕ ಸರ್ಕಾರಿ ಅಭಿಯೋಜಕ ರವಿ ಹುಣಸಿಮರದ, ಅಪರ ಸಕಾರಿ ವಕೀಲ ಶಂಕರಗೌಡ ಎ.ಎಂ, ಯಲಬುರ್ಗಾ ಕ್ಷೇತ್ರ ಶಿಕ್ಷಣಾಧಿಕಾರಿ ನಿಂಗಪ್ಪ ಕೆ.ಟಿ, ಚಿಕ್ಕಮ್ಯಾಗೇರಿಯ ವಕೀಲ ಯು.ಎಸ್.ಮೆಣಸಗೇರಿ , ಎ.ಎಂ. ಪಾಟೀಲ್ , ಚಿಕ್ಕಮ್ಯಾಗೇರಿ ಗ್ರಾಪಂ ಅಧ್ಯಕ್ಷ ಶರಣಪ್ಪ ಕುರಿ, ಉಪಾಧ್ಯಕ್ಷೆ ದ ಗಾಳೆಮ್ಮ ಮಾದರ, ಸದಸ್ಯರಾದ ಶರಣಯ್ಯ ಬಂಡಿಹಾಳ, ಶರಣಪ್ಪ ಕರಡದ, ಉಡಚಮ್ಮ ಉಪ್ಪಾರ, ಶಾಂತಮ್ಮ ಮುರಾರಿ, ಎಸ್.ಎನ್.ಎಸ್.ಡಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ವೇದಪಾಠ, ಎಚ್.ಪಿ.ಜೆ ಶಾಲೆಯ ಸಹಶಿಕ್ಷಕ ಮುಜಾವರ, ಸಮಾಜ ಕಲ್ಯಾಣ ಇಲಾಖೆಯ ರಾಚಣ್ಣ ಗದಗಿನ್, ವಾರ್ಡನ್ ಬಸವರಾಜ ಹಾಳಕೇರಿ, ಶರಣಪ್ಪ ಅಬ್ಬಿಗೇರಿ, ಕರಿಯಪ್ಪ, ರಾಮಚಂದ್ರ ಹಾಗೂ ಸಿಬ್ಬಂದಿ ವರ್ಗದವರು, ನಿಲಯದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.