ಕನ್ನಡಪ್ರಭ ವಾರ್ತೆ ಹನೂರು
ಗ್ರಾಮಕ್ಕೆ ಬೇಕಾಗಿರುವ ರಸ್ತೆ ಹಾಗೂ ನದಿಯಿಂದ ಶಾಶ್ವತ ನೀರು ಸರಬರಾಜು ಮಾಡಿ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಕಲ್ಪಿಸಬೇಕು. ದಪ್ಪಗುಳಿ ದೇವಸ್ಥಾನಕ್ಕೆ ಬೆಂಗಳೂರು ಹಾಗೂ ಅಂತರರಾಜ್ಯದಿಂದ ದಿನನಿತ್ಯ ಸಾವಿರಾರು ಭಕ್ತರು ಬರುತ್ತಿದ್ದಾರೆ. ಈ ಕ್ಷೇತ್ರಕ್ಕೆ ಸಮರ್ಪಕ ರಸ್ತೆ ಸಂಪರ್ಕ ಕಲ್ಪಿಸಲು ಶಾಸಕ ಮಂಜುನಾಥ್ಗೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಈಗಾಗಲೇ ಇದಕ್ಕೆ ಬೇಕಾಗಿರುವ ಎಲ್ಲಾ ರೀತಿಯ ಕೆಲಸಗಳು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ಶಾಶ್ವತ ಪರಿಹಾರ ನೀಡಲಾಗುವುದು. ಜೊತೆಗೆ ಮುಂದಿನ ದಿನಗಳಲ್ಲಿ ಸರ್ಕಾರದ ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ಜೊತೆಯಲ್ಲಿ ಮಾತನಾಡಿ ಸಂಪರ್ಕ ರಸ್ತೆ ಸುಗಮ ಸಂಚಾರಕ್ಕೆ ಹಾಗೂ ದೇವಾಲಯ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆಯನ್ನು ನೀಡಿದರು.ತಾಲೂಕಿನ ದಂಟಲ್ಲಿ ಗ್ರಾಮದ ರೈತರು ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಕಾಡುಪ್ರಾಣಿಗಳಿಂದ ರೈತ ಹಸು, ಮೇಕೆ, ಎಮ್ಮೆ ಮೃತಪಟ್ಟರೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಸೂಕ್ತ ನೀಡುತ್ತಿಲ್ಲ. ಪರಿಹಾರ ನೀಡಲು ಸ್ಥಳಕ್ಕೆ ಭೇಟಿ ನೀಡಿ ಅದರ ವರದಿಯ ತರಿಸಿಕೊಂಡು ನಿಯಮಾನುಸಾರವಾಗಿ ಕ್ರಮ ಕೈಗೊಳ್ಳಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಶಿವಣ್ಣ, ವೆಂಕಟಪ್ಪ, ಲಕ್ಷ್ಮಣ, ಶಿವು,ಮಹಾದೇವಪ್ಪ, ಹರೀಶ್, ನಾಗರಾಜು, ಚಿನ್ನವೆಂಕಟ, ಕೃಷ್ಣ, ರಂಗಶೆಟ್ಟಿ, ವಸಂತ, ಡಿಕೆ ರಾಜು, ತಂಗವೇಲು, ರಾಜು ಉಪಸ್ಥಿತರಿದ್ದರು.