ದಾಂಡೇಲಿ: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಯೋಜನೆಗಳು, ಅಭಿವೃದ್ದಿ ಕಾರ್ಯಕ್ರಮಗಳು ಜನಜನಿತವಾಗಿವೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಹಳಿಯಾಳ- ಜೋಯಿಡಾ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಸಹಕಾರಿ ಕ್ಷೇತ್ರದಲ್ಲಿಯೂ ಬಿಜೆಪಿ ಬೆಂಬಲಿತ ಅಭ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಗೆಲುವು ಸಾಧಿಸುವ ಮೂಲಕ ಕ್ಷೇತ್ರದಲ್ಲಿ ಪಕ್ಷ ಕ್ರಾಂತಿಯನ್ನು ಮಾಡಿದೆ. ಸುನಿಲ ಹೆಗಡೆ ಮತ್ತು ಎಸ್.ಎಲ್. ಘೋಟ್ನೇಕರ ಅವರು ಜೋಡೆತ್ತುಗಳಾಗಿ ಪಕ್ಷ ಬಲವರ್ಧನೆಗೆ ಶ್ರಮಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನಿಲ ಹೆಗಡೆ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಬುದವಂತ ಗೌಡಾ ಪಾಟೀಲ, ಪಕ್ಷದ ಪ್ರಧಾನ ಕಾರ್ಯದರ್ಶಿ ಮಿಥುನ ನಾಯ್ಕ, ಗಿರೀಶ ಟೋಸುರ, ಪಕ್ಷದ ಮಾಜಿ ಅಧ್ಯಕ್ಷ ಚಂದ್ರಕಾಂತ ಕ್ಷೀರಸಾಗರ, ಬಸವರಾಜ ಕಲಶೆಟ್ಟಿ, ರೋಷನ್ ನೇತ್ರಾವಳಿ, ಬಿಜೆಪಿ ಮಹಿಳಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೀತಾ ಶಿಕಾರಿಪುರ, ಅಂಬಿಕಾನಗರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೇಘಾ ಗೌಡ, ಮುಖಂಡರಾದ ಪ್ರಶಾಂತ ಬಸುತೆಕರ, ವಾಮ ಮಿರಾಶಿ ಮುಂತಾದವರು ಉಪಸ್ಥಿತರಿದ್ದರು.ಜೋಯಿಡಾದಲ್ಲಿ ಆಡಳಿತ ಸೌಧ ಉದ್ಘಾಟನೆಜೋಯಿಡಾ: ತಾಲೂಕಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಆಡಳಿತ ಸೌಧವನ್ನು ರಾಜ್ಯ ಆಡಳಿತ ಸುಧಾರಣಾ ಸಮಿತಿ ಅಧ್ಯಕ್ಷ, ಶಾಸಕ ಆರ್.ವಿ. ದೇಶಪಾಂಡೆ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸುಪಾ ತಾಲೂಕು ಮುಳುಗಡೆ ಆದ ನಂತರದಲ್ಲಿ ಹೊಸ ತಾಲೂಕಾದ ಜೋಯಿಡಾದ ಅಭಿವೃದ್ಧಿ ಹಂತ- ಹಂತವಾಗಿ ನಡೆದಿದೆ. ನಾನು ಈ ಕ್ಷೇತ್ರಕ್ಕೆ ಶಾಸಕನಾದ ಮೇಲೆ ಇಲ್ಲಿನ ಎಲ್ಲ ಬೇಡಿಕೆಗಳನ್ನು ಹೆಚ್ಚಿನ ಪ್ರಮಾಣ ಪೂರೈಸಿದ್ದೇನೆ. ಸುಂದರ ಆಡಳಿತ ಸೌಧ ನಿರ್ಮಾಣವಾಗಿದೆ ಎಂದರು.ಈ ಸೌಧದಲ್ಲಿ ಅಧಿಕಾರಿಗಳು ಜನರ ಸೇವೆ ಮಾಡಬೇಕು. ಅಧಿಕಾರ ಕ್ಷಣಿಕ, ಆದರೆ ದೇವರು ಕೊಟ್ಟ ಅಧಿಕಾರವನ್ನು ಎಲ್ಲರೂ ಸದುಪಯೋಗ ಪಡಿಸಿಕೊಂಡು ಬಡವರ ಸೇವೆ ಮಾಡಬೇಕು. ಕಚೇರಿಗೆ ಬಂದ ಜನರನ್ನು ಕೂರಿಸಿ ಅವರ ಜತೆ ಸಮಸ್ಯೆ ಕೇಳಬೇಕು. ಜನತೆಯನ್ನು ಗೌರವದಿಂದ ನೋಡಿದಾಗ ಮಾತ್ರ ನಮ್ಮ ಗೌರವವೂ ಹೆಚ್ಚಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಮಾತನಾಡಿದರು. ಲೋಕೋಪಯೋಗಿ ಇಲಾಖೆಯ ಎಇಇ ಶಿವಪ್ರಸಾದ ಎಸ್. ಸ್ವಾಗತಿಸಿ, ಕಟ್ಟಡದ ವಿವಿಧ ಹಂತದ ಮಾಹಿತಿ ನೀಡಿದರು. ಉಪವಿಭಾಗಾಧಿಕಾರಿ ಕನಿಷ್ಕ, ತಹಸೀಲ್ದಾರ್ ಮಂಜುನಾಥ ಮುನ್ನೊಲಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿ ಮಲ್ಲಿಕಾರ್ಜುನ, ಇಒ ಎನ್. ಭಾರತಿ ಇತರ ಗಣ್ಯರು ಉಪಸ್ಥಿತರಿದ್ದರು.