ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಸಾಮಾನ್ಯ ಕ್ಷೇತ್ರದಿಂದ ಬಸವರಾಜ ಚಿಂಚೋಳಿ, ಶಿವಪ್ಪ ಮಡಿಕೇಶ್ವರ, ಹೊನ್ನಪ್ಪ ಗೊಳಸಂಗಿ, ಸಂಗಣ್ಣ ಹುನಗುಂದ, ನಿಂಗೇಶ ಕಾಳಗಿ, ಬಾಷಾಸಾಬ ಮನಗೂಳಿ, ಅಮರೇಶ ನಾಡಗೌಡ, ಮಹಿಳಾ ಕ್ಷೇತ್ರದಿಂದ ಶಂಕ್ರಮ್ಮ ಕವಿಶೆಟ್ಟಿ, ಪಾರ್ವತೆವ್ವ ಹೊಸಮಠ, ಹಿಂದುಳಿದ ಅ ವರ್ಗ ಕ್ಷೇತ್ರದಿಂದ ಮಹೇಶ ಪೂಜಾರಿ, ಹಿಂದುಳಿದ ಬ ವರ್ಗ ಕ್ಷೇತ್ರದಿಂದ ಸುರೇಶ ಹುರಕಡ್ಲಿ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಕೃಷ್ಣಾ ರಜಪೂತ, ಮಲ್ಲಿಕಾರ್ಜನ ರಾಜನಾಳ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ಎಂ.ಹಂಗರಗಿ ಘೋಷಿಸಿದರು.ವಿಜಯೋತ್ಸವದಲ್ಲಿ ಆದರ್ಶ ವೇದಿಕೆಯ ಜಿಲ್ಲಾಧ್ಯಕ್ಷ ಉಮೇಶ ಕೌಲಗಿ, ಎಚ್.ಬಿ.ಬಾರಿಕಾಯಿ, ಎಂ.ಎನ್.ಯಾಳವಾರ, ಎಂ.ಎಸ್.ಅವಟಿ, ಸಲೀಂ ದಡೇದ, ಎಂ.ಎಸ್.ಮೂಕರ್ತಿಹಾಳ, ಅಶೋಕ ಗಿಡ್ಡಪ್ಪಗೋಳ, ಎಂ.ಎಂ.ಮುಲ್ಲಾ, ಗೋಪಾಲ ಲಮಾಣಿ, ಸಿದ್ದಪ್ಪ ಅವಜಿ, ಬಿ.ಪಿ.ನಾಗಾವಿ, ಎಂ.ವ್ಹಿ.ಗಬ್ಬೂರ, ಎಸ್.ಬಿ.ಮುತ್ತಗಿ, ಕೊಟ್ರೇಶ ಹೆಗ್ಡಾಳ, ಬಿ.ವ್ಹಿ.ಚಕ್ರಮನಿ, ಎಂ.ಆರ್.ಮಕಾನದಾರ, ಜಗದೀಶ ಚಿಕ್ಕಮಠ, ಎಸ್.ಎಸ್.ಕಮತ, ಸಂಗಮೇಶ ದುದಗಿ, ಆನಂದ ಪವಾರ, ಡಾ.ಮಹಾದೇವ ಗುಡಿ, ನಾಗು ಅರಳಚಂಡಿ, ಶ್ರೀಕಾಂತ ಬಡಿಗೇರ, ಜೆ.ಡಿ.ಪಾಟೀಲ, ಸಿ.ಎಂ.ಹೊರ್ತಿ, ವಿಜೇತ ಅಭ್ಯರ್ಥಿಗಳು ಸೇರಿದಂತೆ ಇತರರು ಭಾಗವಹಿಸಿದ್ದರು.
ಕೋಟ್ಚುನಾವಣೆಯಲ್ಲಿ ನಮ್ಮ ಪೆನಲ್ ಅಭ್ಯರ್ಥಿಗಳು ಹೆಚ್ಚು ಆಯ್ಕೆಯಾಗಿದ್ದರೂ ಇದು ಅಖಂಡ ಬಸವನಬಾಗೇವಾಡಿ ತಾಲೂಕಿನ ಶಿಕ್ಷಕ ಬಾಂಧವರ ಗೆಲುವು. ಈ ಗೆಲವು ಎಲ್ಲ ಶಿಕ್ಷಕರ ಬಾಂಧವರ ಶ್ರಮದ ಫಲ. ಎಲ್ಲ ಶಿಕ್ಷಕ ಬಾಂಧವರು ಒಂದಾಗಿ ಎಲ್ಲರ ಸಹಾಯ-ಸಹಕಾರೊಂದಿಗೆ ಅಖಂಡ ತಾಲೂಕಿನ ಈ ಸೊಸೈಟಿಯನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗಲಾಗುವುದು. ನಮ್ಮ ಸಂಘ ಸರ್ವಜನಾಂಗದ ಶಾಂತಿಯ ತೋಟದಂತಿದೆ.
ಉಮೇಶ ಕೌಲಗಿ,ಆದರ್ಶ ಶಿಕ್ಷಕರ ವೇದಿಕೆಯ ಜಿಲ್ಲಾಧ್ಯಕ್ಷ