ರಾಷ್ಟ್ರಮಟ್ಟದ ಬೋಧಕರ ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ

KannadaprabhaNewsNetwork |  
Published : Jun 25, 2024, 12:33 AM IST
24 | Kannada Prabha

ಸಾರಾಂಶ

ದೇಶದ ಇತರೆ ರಾಜ್ಯಗಳಲ್ಲಿ ಸ್ಥಳೀಯ ಪರಿಸರಕ್ಕೆ ಅನುಗುಣವಾಗಿ ಪ್ರೇರಣಾ ಅಂಶಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಗ್ರಾಮೀಣ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಸಾಧಿಸಬಹುದೆಂದು

ಕನ್ನಡಪ್ರಭ ವಾರ್ತೆ ಮೈಸೂರು

ಭಾರತ ಸರ್ಕಾರದ ಪಂಚಾಯತ್ ರಾಜ್ ಮಂತ್ರಾಲಯ ಮತ್ತು ಕರ್ನಾಟಕ ಸರ್ಕಾರ, ಅಬ್ದುಲ್ ನಜೀರ್ ಸಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಮತ್ತು ಟ್ರಾನ್ಸ್ ಫಾರ್ಮ್ ರೂರಲ್ ಇಂಡಿಯಾ ಫೌಂಡೇಶನ್ ಸಹಯೋಗದೊಂದಿಗೆ ಬೋಧಕರ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ದೇಶದಲ್ಲಿ 2ನೇ ಎಸ್.ಐಆರ್.ಡಿ ರಾಷ್ಟ್ರಮಟ್ಟದ ಬೋಧಕರ ಅಭಿವೃದ್ಧಿ ಕಾರ್ಯಕ್ರಮ ಆಯೋಜಿಸಿದೆ.

ನಗರದ ಲಲಿತ ಮಹಲ್ ರಸ್ತೆಯಲ್ಲಿರುವ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಂಸ್ಥೆಯಲ್ಲಿ ಭಾರತ ಸರ್ಕಾರದ ಪಂಚಾಯತ್ ರಾಜ್ ಮಂತ್ರಾಲಯ ಹಾಗೂ ಟ್ರಾನ್ಸಾಫಾರ್ಮ್ ರೂರಲ್ ಇಂಡಿಯಾ ಫೌಂಡೇಷನ್ (TRIF)ಸಹಯೋಗದಲ್ಲಿ ಸೋಮವಾರ ಆರಂಭವಾದ ಐದು ದಿನಗಳ ರಾಷ್ಟ್ರ ಮಟ್ಟದ ಬೋಧಕರ ಅಭಿವೃದ್ಧಿ ಕಾರ್ಯಕ್ರಮಕ್ಕೆ ರಾಜ್ಯದ ಆರ್.ಡಿ.ಪಿ.ಆರ್. ಇಲಾಖೆಯ ಪಂಚಾಯತ್ ರಾಜ್ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಅವರು ಚಾಲನೆ ನೀಡಿ ಮಾತನಾಡಿದರು.

ಕರ್ನಾಟಕದ ಆರ್.ಡಿ.ಪಿ.ಆರ್.ಇಲಾಖೆಯು ಗ್ರಾಮೀಣ ಪ್ರದೇಶಗಳಲ್ಲಿ ಅನುಷ್ಟಾನಗೊಳಿಸಿರುವ ವಿವಿಧ ಅಭಿವೃದ್ಧಿ ಮಾದರಿಗಳು, ಉಪ ಕ್ರಮಗಳು ಹಾಗೂ ಉತ್ತಮ ಅಭ್ಯಾಸಗಳು ಇತರರಿಗೆ ಅತ್ಯಂತ ಪ್ರೇರಣಾದಾಯಕವಾಗಿವೆ. ದೇಶದ ಇತರೆ ರಾಜ್ಯಗಳಲ್ಲಿ ಸ್ಥಳೀಯ ಪರಿಸರಕ್ಕೆ ಅನುಗುಣವಾಗಿ ಪ್ರೇರಣಾ ಅಂಶಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಗ್ರಾಮೀಣ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಸಾಧಿಸಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಎಎನ್ಎಸ್ಎಸ್ಐಆರ್ಡಿಪಿಆರ್ ನಿರ್ದೇಶಕ ಕೆ. ಲಕ್ಷ್ಮೀಪ್ರಿಯಾ ಬೋಧಕರ ಕಾರ್ಯಕ್ಷಮತೆ ಉತ್ತಮಪಡಿಸಿಕೊಳ್ಳಲು ಈ ತರಬೇತಿ ಸಹಕಾರಿಯಾಗುವುದೆಂದು ತಿಳಿಸಿದರು.

ಸೋಮವಾರ ಆರಂಭವಾಗಿರುವ ಬೋಧಕರ ಅಭಿವೃದ್ಧಿ ತರಬೇತಿಯು ಜೂ. 28ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ, ತರಬೇತಿಯ ಪರಿಕಲ್ಪನೆ, ವ್ಯಾಖ್ಯಾನ, ಗುಣ ವಿಶೇಷಗಳು, ತರಬೇತುದಾರ ಮತ್ತು

ಪ್ರಶಿಕ್ಷಣಾರ್ಥಿ ನಡುವಿನ ಕೊರತೆಯನ್ನು ಅರ್ಥೈಸಿಕೊಂಡು ಪ್ರಸ್ತುತ ಅಗತ್ಯತೆಗೆ ತಕ್ಕಂತೆ ನಡವಳಿಕೆಗಳಂತೆ ಮುಂದುವರಿಯುವುದು, ತರಬೇತುದಾರನ ಪಾತ್ರ, ತರಬೇತಿಯ ಚೌಕಟ್ಟುಗಳು ಮತ್ತು ಬಳಕೆಗಳನ್ನು ವಿವರಿಸುವುದು, ವ್ಯಕ್ತಿತ್ತ್ವಗಳನ್ನು ಅರ್ಥಮಾಡಿಕೊಳ್ಳುವುದು, ಸಂವಹನ ಕೌಶಲ್ಯಗಳು ಹಾಗೂ ಪೂರಕ ಕಾರ್ಯಕ್ಷೇತ್ರ ಭೇಟಿ ಅಂಶಗಳನ್ನು ಅಳವಡಿಸಿದೆ.

ಪಂಚಾಯತ್ ರಾಜ್ ಮಂತ್ರಾಲಯದ ಅಧಿಕಾರಿ ರುಚಿ, ಸಲಹೆಗಾರರಾದ ಮೊಹ್ಮದ್ ತೌಕೀರ್ ಖಾನ್, ಟಿಆರ್ಐಎಫ್ ಸಂಸ್ಥೆಯ ಪ್ರತಿನಿಧಿಗಳಾದ ಪಂಕಜ್ ಪಾಂಡೆ, ಜಿತೇಂದ್ರ, ಅಮ್ಜದ್ ಖಾನ್ ಭಾಗವಹಿಸಿದ್ದಾರೆ. ಎಸ್ಐಆರ್ಡಿ ಸಂಸ್ಥೆಯ ವತಿಯಿಂದ ಉಪ ನಿರ್ದೇಶಕರಾದ ನಯಿದಾ ಅಂಜುಂ, ಕೆ.ಎಸ್.ಮನೋಜ್ ಕುಮಾರ್, ಡಾ.ಬಿ.ಎಂ. ಶಿವಪ್ರಸಾದ್, ಡಾ.ಡಿ.ಜೆ. ಶಶಿಕುಮಾರ್, ಡಾ. ಚೈತ್ರಾ, ಜ್ಯೋತಿ ಪ್ರಿಯದರ್ಶಿನಿ ಭಾಗಿಯಾಗಿದ್ದಾರೆ.

ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಗುಜರಾತ್, ಡಯುಡಾಮನ್, ಜಮ್ಮು-ಕಾಶ್ಮೀರ್, ಲಡಾಕ್, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಸಿಕ್ಕಿಂ, ತೆಲಂಗಾಣ, ತ್ರಿಪುರ ಮತ್ತು ಕರ್ನಾಟಕದ ಒಟ್ಟು 40 ಬೋಧಕರುಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ