ಅದ್ಧೂರಿ ಬನಶಂಕರಿ ದೇವಿ ಜಾತ್ರೆ ಪಲ್ಲಕ್ಕಿ ಉತ್ಸವ

KannadaprabhaNewsNetwork |  
Published : Jan 26, 2024, 01:47 AM IST
25ಡಿಡಬ್ಲೂಡಿ2ಬನದ ಹುಣ್ಣಿಮೆ ನಿಮಿತ್ತವಾಗಿ ಗುರುವಾರ ಬನಶಂಕರಿ ದೇವಿ ಜಾತ್ರಾ ಮಹೋತ್ಸವ ಪಲ್ಲಕ್ಕಿ ಉತ್ಸವವು ಧಾರವಾಡದ ಕಾಮನಕಟ್ಟಿ ಚರಂತಿಮಠ ಗಾರ್ಡನದಲ್ಲಿರುವ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಜರುಗಿತು. | Kannada Prabha

ಸಾರಾಂಶ

ದೇವಸ್ಥಾನದ ಆವರಣದಿಂದ ಹೊರಟ ವಾದ್ಯ ಹಾಗೂ ಕಲಾ ಮೇಳದೊಂದಿಗೆ ದೇವಿ ವಿಗ್ರಹ ಹಾಗೂ ಗ್ರಂಥಗಳ ಮೆರವಣಿಗೆಯನ್ನು ಬಸಂತಿ ಹಪ್ಪಳದ ಉದ್ಘಾಟಿಸಿದರು. ಹೆಬ್ಬಳ್ಳಿ ಅಗಸಿ ರಸ್ತೆಯಲ್ಲಿರುವ ಜ್ಯೋತಿಬಾ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ವಿವಿಧ ಬಡಾವಣೆಯ ಮುಖ್ಯ ರಸ್ತೆ ಮೂಲಕ ಸಂಚರಿಸಿ ಮರಳಿ ಬನಶಂಕರಿ ದೇವಸ್ಥಾನ ತಲುಪಿತು

ಧಾರವಾಡ: ಬನದ ಹುಣ್ಣಿಮೆ ನಿಮಿತ್ತ ಗುರುವಾರ ಬನಶಂಕರಿ ದೇವಿ ಜಾತ್ರಾಮಹೋತ್ಸವ ಪಲ್ಲಕ್ಕಿ ಉತ್ಸವವು ಶಹರದ ಕಾಮನಕಟ್ಟಿ ಚರಂತಿಮಠ ಗಾರ್ಡನದಲ್ಲಿರುವ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಜರುಗಿತು.

ಬೆಳಗ್ಗೆ ಕಾಕಡಾರತಿ, ಅಭಿಷೇಕ, ಕುಂಕುಮಾರ್ಚನೆ, ಹೋಮ, ಹವನ ದೇವಿಗೆ ವಿಶೇಷ ಪೂಜೆ ಹಾಗೂ ಮಂತ್ರ ಪಠಣ ನಡೆಯಿತು. ಪಲ್ಲಕ್ಕಿ ಉತ್ಸವದ ಪೂಜೆಯನ್ನು ವನಸ್ಪತಿ ಆಯುರ್ವೇದ ತಜ್ಞ ರಮೇಶ ಜಾನಕ್ಕಿ ನೆರವೇರಿಸಿದರು. ಧಾರ್ಮಿಕ ವಿಧಿ ವಿಧಾನ ಕಾರ್ಯಕ್ರಮಕ್ಕೆ ಸುಧಾ ಕಬ್ಬೂರ ಹಾಗೂ ಕುಂಭಮೇಳ ಪಂಜಿನ ಪ್ರದಕ್ಷಿಣಿಗೆ ವಾಣಿಶ್ರೀ ಮೋಟೆಕರ ಚಾಲನೆ ನೀಡಿದರು.

ದೇವಸ್ಥಾನದ ಆವರಣದಿಂದ ಹೊರಟ ವಾದ್ಯ ಹಾಗೂ ಕಲಾ ಮೇಳದೊಂದಿಗೆ ದೇವಿ ವಿಗ್ರಹ ಹಾಗೂ ಗ್ರಂಥಗಳ ಮೆರವಣಿಗೆಯನ್ನು ಬಸಂತಿ ಹಪ್ಪಳದ ಉದ್ಘಾಟಿಸಿದರು. ಹೆಬ್ಬಳ್ಳಿ ಅಗಸಿ ರಸ್ತೆಯಲ್ಲಿರುವ ಜ್ಯೋತಿಬಾ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ವಿವಿಧ ಬಡಾವಣೆಯ ಮುಖ್ಯ ರಸ್ತೆ ಮೂಲಕ ಸಂಚರಿಸಿ ಮರಳಿ ಬನಶಂಕರಿ ದೇವಸ್ಥಾನ ತಲುಪಿತು.ನಂತರ ಲತಾ ಮಂಟಾ ಹಾಗೂ ಸುಮನ್ ಭೂಸನೂರಮಠ ಸುಮಂಗಲೆಯರಿಂದ ವಚನ ಪಠಣ ಪೂಜೆ ಜರುಗಿತು.

ಜಾತ್ರಾಮಹೋತ್ಸವ ಕಮೀಟಿ ಅಧ್ಯಕ್ಷ ಶಿವಾನಂದ ಲೋಲೆನವರ ಮಹಾಪ್ರಸಾದಕ್ಕೆ ಚಾಲನೆ ನೀಡಿದರು.ದೇವಸ್ಥಾನ ಆಡಳಿತ ಮಂಡಳಿಯ ಅಶೋಕ ದೇವಾಂಗ, ವಿಮಲಾ ಲೌಲಿ, ಗೌರಮ್ಮ ಬಲೋಗಿ, ಶಂಕರ ಜೀರಗೋಡ, ಗಣಪತಿ ಟೇಟಂಬಿ, ನಾಗರತ್ನಾ ಸುಲಾಕೆ, ಮಲ್ಲವ್ವ ಕಾಮಕರ, ಮಹಾದೇವಿ ಬಸರಿ, ಲತಾ ದೇವಾಂಗ, ಮಂಜುನಾಥ, ಸುಮಾ ಲೋಲೆನವರ, ಅರವಿಂದ ದೇವಾಂಗ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲ್ಲೆ ಖಂಡಿಸಿ ಜಿಲ್ಲಾಸ್ಪತ್ರೆ ಸ್ಪಾಫ್ ನರ್ಸ್‌ ಪ್ರತಿಭಟನೆ
ಜಯಂತಿಗಳ ಆಚರಣೆಗೆ ಅಗತ್ಯ ಸಿದ್ಧತೆ ಇರಲಿ: ಎಡಿಸಿ ಹೊನಕೇರಿ