ಯಕ್ಷ ಶ್ರೀ ಬ್ರಹ್ಮದೇವ ದಿಗಂಬರ ಜೈನ ಮಂದಿರದಲ್ಲಿ ಶ್ರೀ ಅಡಿಕೆ ಬ್ರಹ್ಮರಾಯ ಹಾಗೂ ಮಹಾಮಾತೆ ಪದ್ಮಾವತಿ ಅಮ್ಮನವರ ಪಲ್ಲಕ್ಕಿ ಉತ್ಸವ ಶುಕ್ರವಾರ ಸಡಗರ ಸಂಭ್ರಮದಿಂದ ಜರುಗಿತು.
ಜೇವರ್ಗಿ: ಪಟ್ಟಣದಲ್ಲಿರುವ ಜೈನ್ ಸಮುದಾಯದ ಆರಾಧ್ಯ ದೈವ ಶ್ರೀ 1008ಭಗವಾನ ಶಾಂತಿನಾಥ ತೀರ್ಥಂಕರ ಹಾಗೂ ಯಕ್ಷ ಶ್ರೀ ಬ್ರಹ್ಮದೇವ ದಿಗಂಬರ ಜೈನ ಮಂದಿರದಲ್ಲಿ ಶ್ರೀ ಅಡಿಕೆ ಬ್ರಹ್ಮರಾಯ ಹಾಗೂ ಮಹಾಮಾತೆ ಪದ್ಮಾವತಿ ಅಮ್ಮನವರ ಪಲ್ಲಕ್ಕಿ ಉತ್ಸವ ಶುಕ್ರವಾರ ಸಡಗರ ಸಂಭ್ರಮದಿಂದ ಜರುಗಿತು.
ಬೆಳಗ್ಗೆ ದೇವರಿಗೆ ವಿಶೇಷ ಪೂಜೆ, ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಧಿವತ್ತಾಗಿ ನಡೆದವು. ಅರ್ಚಕ ಬ್ರಹ್ಮಸೂರಿ ಪಂಡಿತ್ ವಿಶೇಷ ಪೂಜೆ ನೆರವೇರಿಸಿದರು. 9 ಗಂಟೆಗೆ ಧ್ವಜಾರೋಹಣ, 10ಗಂಟೆಗೆ ಪಲ್ಲಕ್ಕಿ ಮಹೋತ್ಸವ, 11ಗಂಟೆಗೆ ಅಭಿಷೇಕ, ಚಡಾವೆಗಳು, ವಿಶ್ವಶಾಂತಿಗಾಗಿ ಮಹಾಮಂತ್ರ ಪಠಣ, ಧಾರ್ಮಿಕ ಸಭೆ ನಡೆದವು. ಪಲ್ಲಕ್ಕಿ ಉತ್ಸವದಲ್ಲಿ ಮಹಿಳೆಯರು ಕುಂಬ ಕಳಸದೊಂದಿಗೆ ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಬಂದ ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ದೇವಸ್ಥಾನ ಸಮಿತಿಯಿಂದ ಕಲ್ಪಿಸಲಾಗಿತ್ತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.