ಡಾ. ಕಲಾಂ ತತ್ವಾದರ್ಶ ಅಳವಡಿಸಿಕೊಳ್ಳಿ: ಗಂಗಪ್ಪ ಎಂ.

KannadaprabhaNewsNetwork |  
Published : Oct 17, 2025, 01:01 AM IST

ಸಾರಾಂಶ

ಗದಗ ಅನ್ನದಾನೀಶ್ವರ ಸಭಾಭವನದಲ್ಲಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಯುಥ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜನ್ಮ 94ನೇ ಜನ್ಮ ದಿನಾಚರಣೆ ನಡೆಯಿತು.

ಗದಗ: ಬಡ ಕುಟುಂಬದಲ್ಲಿ ಜನಿಸಿ ಹಲವಾರು ಕಷ್ಟ-ನಷ್ಟಗಳನ್ನು ಅನುಭವಿಸಿ ವಿಜ್ಞಾನದಲ್ಲಿ ಅದ್ವಿತೀಯ ಸಾಧನೆ ಮಾಡಿ ಈ ದೇಶಕ್ಕೆ ಅಮೋಘ ಸೇವೆ ಸಲ್ಲಿಸಿದ ಮಾಜಿ ರಾಷ್ಟ್ರಪತಿ, ವಿಜ್ಞಾನಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ತತ್ವಾದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಗದಗ ಉಪವಿಭಾಗಾಧಿಕಾರಿ ಗಂಗಪ್ಪ ಎಂ. ಹೇಳಿದರು.

ಇಲ್ಲಿಯ ಅನ್ನದಾನೀಶ್ವರ ಸಭಾಭವನದಲ್ಲಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಯುಥ್ ಫೆಡರೇಶನ್ ಆಫ್ ಇಂಡಿಯಾ ಹಮ್ಮಿಕೊಂಡಿದ್ದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜನ್ಮ 94ನೇ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಲಾಂ ಅವರು ನಮ್ಮೊಂದಿಗೆ ಈಗ ಇಲ್ಲವಾದರೂ ಅವರ ಮಾಡಿದ ಸಾಧನೆಗಳು, ಅವರ ಜೀವನದ ತತ್ವದಾರ್ಶಗಳು ಜೀವಂತವಾಗಿವೆ. ಅವು ನಮಗೆ ಮಾರ್ಗದರ್ಶಕವಾಗಿವೆ ಎಂದು ಹೇಳಿದರು.

ಕಲಾಂ ಯುಥ್ ಫೆಡರೇಶನ್ ಸಂಸ್ಥಾಪಕ ಅಮೃತ ಮಂಟೂರು ಮಾತನಾಡಿ, ವಿಶ್ವ ಕಂಡ ಅಪ್ರತಿಮ ನಾಯಕರಾಗಿದ್ದ ಕಲಾಂ ಅವರ ಶೈಕ್ಷಣಿಕ, ಬೌದ್ಧಿಕ ಮತ್ತು ಧಾರ್ಮಿಕ ತತ್ವ-ಸಿದ್ಧಾಂತಗಳು ಇಂದಿನ ಯುವಕರಿಗೆ ಆದರ್ಶಗಳಾಗಿವೆ. ಅವರು ಬಾಲ್ಯದಲ್ಲಿ ದಿನಪತ್ರಿಕೆ ಮನೆ ಮನೆಗೆ ವಿತರಿಸಿದ ಶ್ರಮಜೀವಿಗಳಾಗಿದ್ದರು. ತ್ಯಾಗ ಮನೋಭಾವನೆಯುಳ್ಳ ಅವರು ಎಂದೆಂದಿಗೂ ಚಿರಸ್ಮರಣಿಯವಾಗಿದೆ ಎಂದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಯ್ಯ ಕೊರವನರ ಮಾತನಾಡಿದರು. ಎಸ್.ಎಸ್.ಎಲ್.ಸಿ.ಯಲ್ಲಿ ಶೇ. ೯೮ ಅಂಕ ಗಳಿಸಿದ ಪ್ರಕಾಶ ಪಾಪನಾಶಿ ಅವರನ್ನು ಸನ್ಮಾನಿಸಲಾಯಿತು. ೧೪ ಅಂಗನವಾಡಿ ಕಾರ್ಯಕರ್ತರನ್ನು ಸನ್ಮಾನಿಸಿ, ಅಂಗನವಾಡಿ ಮಕ್ಕಳಿಗೆ ಪಾಟಿ, ಕಲಾಂ ಅವರ ಜೀವನ ಚರಿತ್ರೆ ಪುಸ್ತಕಗಳನ್ನು ನೀಡಲಾಯಿತು. ಜಿಪಂ ಮಾಜಿ ಸದಸ್ಯ ಎಸ್.ಬಿ. ಕಲಕೇರಿ, ಗ್ರಾಪಂ ಸದಸ್ಯರಾದ ಪೀರಸಾಬ ನದಾಫ, ಫಕ್ಕೀರಮ್ಮ ಬೇಲೇರಿ, ರಾಚಪ್ಪ ನಾಲ್ವಡದ, ಮರಿಯಪ್ಪ ವಡ್ಡರ, ಅಂದಾನಯ್ಯ ಮುನವಳ್ಳಿಮಠ, ಹುಸೇನಸಾಬ ಕದಾಂಪುರ, ಬಸವರಾಜ ಪಾಪನಾಶಿ ಉಪಸ್ಥಿತರಿದ್ದರು. ಪಿಡಿಒ ಅಮೀರನಾಯಕ ಸ್ವಾಗತಿಸಿದರು. ನಮಿತಾ ವಿನೋದ ಕಲಾಲ ಕಾರ್ಯಕ್ರಮ ನಿರೂಪಿಸಿದರು. ಮಲ್ಲಮ್ಮ ಯಲಿಶಿರುಂದ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಕೆಶಿ ಸಿಎಂ ಆದರೆ ನನಗೆ ಸಚಿವ ಸ್ಥಾನವೇ ಬೇಡ : ರಾಜಣ್ಣ
ದರ್ಶನ್‌ ಜೈಲಿಂದ ಹೊರಬರಲು ನಿತ್ಯ ಪ್ರಾರ್ಥಿನೆ: ನಟ ಜೈದ್‌