ಧಾರವಾಡ:
ಈ ಸೌಲಭ್ಯವು ಸುಧಾರಿತ ವಸ್ತುಗಳ ಗುಣಲಕ್ಷಣ, ವೈಫಲ್ಯ ವಿಶ್ಲೇಷಣೆ, ಉತ್ಪಾದನಾ ವಿಧಾನದ ಪ್ರತ್ಯನುಕರಣೆ (ಸಿಮ್ಯುಲೇಶನ್) ಮತ್ತು ಕಾರ್ಯ ಸಾಧು ಪರಿಣಾಮಕಾರಿತ್ವ (ಆಪ್ಟಿಮೈಸೇಷನ್) ಬೆಂಬಲಿಸಲು ಸಜ್ಜುಗೊಂಡಿದೆ. ಇದು ನಿಖರತೆ-ಚಾಲಿತ ಉತ್ಪಾದನಾ ಕ್ಷೇತ್ರಗಳಲ್ಲಿ ಆಳವಾದ ಉದ್ಯಮ-ಶೈಕ್ಷಣಿಕ ಸಹಭಾಗಿತ್ವವನ್ನು ಸಕ್ರಿಯಗೊಳಿಸುತ್ತದೆ.
ಈ ಉಪಕ್ರಮವು ಮುಂಬರುವ ದಿನಗಳಲ್ಲಿ ಅನ್ವಯಿಕ ಸಂಶೋಧನೆ ಹೆಚ್ಚಿಸಲು, ನಾವೀನ್ಯತೆ ಬೆಳೆಸಲು ಮತ್ತು ಪ್ರಯೋಗಾಲಯ ವಿಜ್ಞಾನ ಮತ್ತು ಕೈಗಾರಿಕಾ ಅನ್ವಯಿಕೆಗಳ ನಡುವಿನ ಅಂತರ ಕಡಿಮೆ ಮಾಡಲು ಸಮರ್ಪಿತವಾದ "ಐಐಟಿ ಧಾರವಾಡ-ಏಕಸ್ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಕ್ಕೆ ಭದ್ರ ಬುನಾದಿ ಹಾಕುತ್ತದೆ.ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿದ ಏಕಸ್ ಲಿಮಿಟೆಡ್ ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ಸಿಇಒ ಅರವಿಂದ್ ಮೆಲ್ಲಿಗೇರಿ, ಈ ಪಾಲುದಾರಿಕೆಯು ಸಂಶೋಧನೆ, ನಾವೀನ್ಯತೆ ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ನಿರಂತರ ಹೂಡಿಕೆಗಳ ಮೂಲಕ ಭಾರತದ ಮುಂದುವರಿದ ಉತ್ಪಾದನಾ ಪರಿಸರ ವ್ಯವಸ್ಥೆ ಬಲಪಡಿಸುವ ಏಕಸ್ನ ದೀರ್ಘಕಾಲೀನ ಬದ್ಧತೆ ಪ್ರತಿ ಬಿಂಬಿಸುತ್ತಿದೆ. ಈ ಸಹಭಾಗಿತ್ವವು ಐಐಟಿ-ಧಾರವಾಡದ ಅನ್ವಯಿಕ ಸಂಶೋಧನಾ ಸಾಮರ್ಥ್ಯ ಮತ್ತು ಉದ್ಯಮದ ತೊಡಗಿಸಿಕೊಳ್ಳುವಿಕೆ ಹೆಚ್ಚಿಸುತ್ತದೆ, ಜತೆಗೆ ಏಕಸ್ ತನ್ನ ಗ್ರಾಹಕರಿಗೆ ಅತ್ಯಾಧುನಿಕ ಉತ್ಪನ್ನ ತಲುಪಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು.
ಈ ವೇಳೆ ಏಕಸ್ನ ಶೀತಲ್ ಜಾಧವ, ಮೋಹನ್ ಪಿ, ಐಐಟಿಯ ಡಾ. ವೆಂಕಪ್ಪಯ್ಯ ದೇಸಾಯಿ, ಡಾ. ಕೋಟೇಶ್ವರರಾವ್ ಕೊಂಡೆಪು, ಡಾ. ಸತ್ಯಪ್ರಿಯಾ ಗುಪ್ತಾ , ಡಾ. ರಾಕೇಶ್ ಲಿಂಗಂ, ಡಾ. ಸೋಮಶೇಖರ, ಚೇತನ್, ಚೇತನ್ ತೋಟದ ಇದ್ದರು.