-ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶ । ಕೆಮಿಕಲ್ ಕಂಪನಿಗಳಿಗೆ ಎಸಿ ಕಮೀಟಿ ಸಲಹೆ । ಕೈಗಾರಿಕೆಗಳಿಂದ ದುರ್ವಾಸನೆ ಹರಡದಂತೆ ಕ್ರಮ
ಆನಂದ್ ಎಂ. ಸೌದಿ
ಕನ್ನಡಪ್ರಭ ವಾರ್ತೆ ಯಾದಗಿರಿಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಕೆಮಿಕಲ್ ತ್ಯಾಜ್ಯ ಕಂಪನಿಗಳಿಂದ ಹೊರಹೊಮ್ಮುತ್ತಿರುವ ದುರ್ನಾತ ತಡೆಗಟ್ಟಲು ಪ್ರತಿಯೊಂದು ಕಾರ್ಖಾನೆಗಳು ಸುಗಂಧ ದ್ರವ್ಯ ಸಿಂಪರಣೆ ಮಾಡಲು ಕ್ರಮವಹಿಸುವಂತೆ ಸೂಚಿಸಲಾಗಿದೆ.
ಸಹಾಯಕ ಆಯುಕ್ತರ ನೇತೃತ್ವದ ಕಮಿಟಿಯಲ್ಲಿನ ವರದಿಯಂತೆ, ಕೆಮಿಕಲ್ ಕಂಪನಿಗಳಿಗೆ ಹಾಗೂ ಸುತ್ತಮುತ್ತಲಿನ ಪರಿಸರ ಕಾಪಾಡುವಲ್ಲಿ ಶಿಫಾರಸು- ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅನೇಕ ಬಾರಿ ಸೂಚನೆ ನೀಡಿದ್ದರೂ, ಪಾಲಿಸದೇ ಇರುವುದು ಕಂಪನಿಗಳು ಮುಂದುವರೆದ ಉದ್ಧಟನಕ್ಕೆ ಸಾಕ್ಷಿಯಂತಿದೆ.
ಆದರೆ, ಕೆರೆಯಂಗಳದಷ್ಟು ವಿಶಾಲವಾದ ಪ್ರದೇಶದಲ್ಲಿ ಈ ಕೆಮಿಕಲ್ ತ್ಯಾಜ್ಯವನ್ನು ಮಳೆ ಬಂದ ವೇಳೆ ಚರಂಡಿಗಳ ಮೂಲಕ ಹಳ್ಳಕೊಳ್ಳಕ್ಕೆ ಬಿಡುವುದು ನಿಂತಿಲ್ಲ.
ಕಾರ್ಖಾನೆಯವರು ಸಿ.ಎಸ್.ಆರ್ ಅಡಿಯಲ್ಲಿ ಸುತ್ತಲಿನ ಗ್ರಾಮಗಳಲ್ಲಿ ಕುಡಿವ ನೀರಿನ ಸೌಲಭ್ಯ, ರಸ್ತೆ ದುರಸ್ತಿ, ಬಸ್ ನಿಲ್ದಾಣ, ಆಸ್ಪತ್ರೆ ನಿರ್ಮಾಣ ಮಾಡುವುದು ಎಂಬ ಶಿಫಾರಸು ಕೇವಲ ಕಾಗದದಲ್ಲೇ ಎಂಬಂತಾಗಿದೆ. ದಶಕಗಳಿಂದ ಇದು ಪಾಲನೆಯಾಗದಿರುವುದು ವಿಚಿತ್ರ.
ಆದರೆ, ಸಿಸಿಟಿವಿ ಅಳವಡಿಸಿದರೆ ಕೃತ್ಯಗಳು ಬಯಲಾಗುತ್ತವೆ ಎಂಬ ಕಾರಣದಿಂದ ಸಿಸಿಟಿವಿ ಇಲ್ಲಿ ಕಾಣುವುದೇ ಇಲ್ಲ.
-
ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ರಾಸಾಯನಿಕ ಕಂಪನಿಗಳು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿವೆ. ಈ ಕಂಪನಿಗಳು ಗಾಳಿ ಮತ್ತು ಮಳೆಯ ನೀರಿನ ಜೊತೆಗೆ ತಮ್ಮ ರಾಸಾಯನಿಕ ತ್ಯಾಜ್ಯ ರಾಜಾರೋಷ ಹೊರಬಿಡುತ್ತಿದ್ದಾರೆ. ಈ ಬಗ್ಗೆ ಪರಿಸರ ಅಧಿಕಾರಿಗಳಿಗೆ ತಿಳಿದರೂ ಪ್ರಭಾವಕ್ಕೆ ಮಣಿದು ಪೂರಕ ವರದಿ ನೀಡಿದ್ದಾರೆ. ಈ ವಿಷಯ ಗಮನಿಸಿದರೆ ಜನಕ್ಕೆ ಆರೋಗ್ಯ ಸಮಸ್ಯೆ ಬಂದು ಸತ್ತರೂ ಪರವಾಗಿಲ್ಲ, ಜಲಚರಗಳ ಮಾರಣಹೋಮ ನಡೆದರೂ ಪರವಾಗಿಲ್ಲ, ಉದ್ಯಮಿಗಳ ಜೇಬು ತುಂಬಿಸುವ ಕಾರ್ಯ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ. ಇವುಗಳ ವಿರುದ್ಧ ದೊಡ್ಡ ಮಟ್ಟದ ಜನ ಆಂದೋಲವನ್ನು ಸಂಘಟಿಸುವುದು ಅವಶ್ಯಕವಾಗಿದೆ.
-ರಾಘವೇಂದ್ರ ಮಡಿವಾಳ್, ಕಿಲ್ಲನಕೇರಾ. (23ವೈಡಿಆರ್7)-
ಕೋಟ್- 2ನಮ್ಮ ಭಾಗದಲ್ಲಿ ಸ್ಥಾಪಿಸಿದ ಬಹುತೇಕ ಕೈಗಾರಿಕೆಗಳಿಂದ ಇಲ್ಲಿನ ಜನ ಜಾನುವಾರುಗಳಿಗೆ ತೊಂದರೆಯಾಗುತ್ತಿದೆ. ಹೀಗೆ ಮುಂದೆ ಸಾಗಿದರೆ, ನಮ್ಮ ಹಳ್ಳಿಗಳಿಲ್ಲಿ ಜನರ ಇರುವುದು ಕಷ್ಟ ಸಾಧ್ಯ. ಅದಕ್ಕಾಗಿ ಪ್ರಜ್ಞಾವಂತರು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಮಠಾಧೀಶರು ಈ ಭಾಗದ ಪ್ರತಿ ಗ್ರಾಮಗಳ ಗ್ರಾಮಸ್ಥರನ್ನು ಬೇಟಿ ಮಾಡಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಬೇಕಾಗಿದೆ.
-ದೇವಿಂದ್ರಪ್ಪ ಮಕ್ತಲ, ಬಾಡಿಯಾಳ. (23ವೈಡಿಆರ್8)--
23ವೈಡಿಆರ್6 : ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ನೋಟ.