ಜಾಗ ಒತ್ತುವರಿ ಬಳಿಕ ಹಿರೀಕಾಟೀಲಿ ಅಕ್ರಮ ಗಣಿಗಾರಿಕೆ

KannadaprabhaNewsNetwork |  
Published : Aug 05, 2026, 01:30 AM IST
ಒಣಗುತ್ತಿರುವ ಬೆಳೆಗೆ ಚರಂಡಿ ನೀರು ಹರಿಸುತ್ತಿರುವುದು. | Kannada Prabha

ಸಾರಾಂಶ

ಇತ್ತೀಚೆಗೆ ಸರ್ಕಾರಿ ಜಾಗ ಒತ್ತುವರಿಯಿಂದ ಭಾರಿ ಸುದ್ದಿಯಾಗಿದ್ದ ಗುಂಡ್ಲುಪೇಟೆ ತಾಲೂಕಿನ ಹಿರೀಕಾಟಿಯಲ್ಲಿ ಈಗ ಅಕ್ರಮ ಗಣಿಗಾರಿಕೆ ಬಗ್ಗೆ ದೂರು ದಾಖಲಾಗಿದೆ.

ಅಕ್ರಮ ಬ್ಲಾಸ್ಟಿಂಗ್, ಹಣ ವಸೂಲಿ: ಪರಿಶಿಷ್ಟರ ಆರೋಪ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಇತ್ತೀಚೆಗೆ ಸರ್ಕಾರಿ ಜಾಗ ಒತ್ತುವರಿಯಿಂದ ಭಾರಿ ಸುದ್ದಿಯಾಗಿದ್ದ ಗುಂಡ್ಲುಪೇಟೆ ತಾಲೂಕಿನ ಹಿರೀಕಾಟಿಯಲ್ಲಿ ಈಗ ಅಕ್ರಮ ಗಣಿಗಾರಿಕೆ ಬಗ್ಗೆ ದೂರು ದಾಖಲಾಗಿದೆ.

ಹಿರೀಕಾಟಿ ಗ್ರಾಮದ ಹರಿಜನ, ಗಿರಿಜನ ಮತ್ತು ಇತರೆ ಅರೆಬಂಡ ಕೆಲಸಗಾರರ ಸಂಘದ ಪದಾಧಿಕಾರಿಗಳು ಗ್ರಾಮದ ಸ.ನಂ.೧೦೮ ರ ಕ್ವಾರಿ ಜಾಗದಲ್ಲಿ ಅಕ್ರಮವಾಗಿ ಬ್ಲಾಸ್ಟಿಂಗ್ ಮಾಡಿ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಗ್ರಾಮದ ಪರಿಶಿಷ್ಟರು ಇಲ್ಲಿನ ತಹಶೀಲ್ದಾರ್‌ಗೆ ಲಿಖಿತ ದೂರು ಸಲ್ಲಿಸಿದ್ದಾರೆ.

ಹಿರೇಕಾಟಿ ಗ್ರಾಮದ ಪರಿಶಿಷ್ಟ ಜನಾಂಗದ ಗ್ರಾಮಸ್ಥರು ನೀಡಿದ ದೂರಿನ ಪ್ರಕಾರ ಹರಿಜನ, ಗಿರಿಜನ ಮತ್ತು ಇತರೆ ಅರೆ ಬಂಡೆ ಕೆಲಸಗಾರರ ಸಂಘ ಸ.ನಂ.೧೦೮ರಲ್ಲಿ ೨.೧೬ ಎಕರೆ ಜಾಗ ಗುತ್ತಿಗೆಗೆ ಪಡೆದುಕೊಂಡಿದ್ದಾರೆ. ಆದರೆ ಗುತ್ತಿಗೆ ಪಡೆದ ಜಾಗಕ್ಕಿಂತಲೂ ಹೆಚ್ಚುವರಿಯಾಗಿ ಅಕ್ರಮವಾಗಿ ಬ್ಲಾಸ್ಟಿಂಗ್ ಮಾಡುತ್ತ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಸಂಘದ ಹೆಸರಿನಲ್ಲಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ, ಕಲ್ಲು ಸಾಗಿಸುವ ಟಿಪ್ಪರ್‌ ಹಾಗೂ ಲಾರಿಗಳಿಂದ ಹಣ ವಸೂಲಿ ಮಾಡಿ ಸರ್ಕಾರಕ್ಕೆ ವಂಚಿಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.೨೦೧೯-೨೦ರ ಸಾಲಿನಿಂದ ಇಂದಿನ ತನಕ ಸಂಘದ ಆದಾಯ-ಖರ್ಚಿನ ಲೆಕ್ಕ ಪರಿಶೋಧನೆ ಮಾಡಿಲ್ಲ. ನಕಲಿ ಲೆಕ್ಕ ಬರೆದು ಗ್ರಾಮಸ್ಥರು ಹಾಗೂ ಸಂಘದ ಸದಸ್ಯರಿಗೆ ಮೋಸ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಂಘದ ಕಾರ್ಯದರ್ಶಿಯೇ ಸಂಘದ ಸಭೆಯೊಂದರಲ್ಲಿ ಹೇಳಿದ ಮಾತಿನಂತೆ ನಾವು ಮಾಡುವುದು ಶೇ.೯೦ರಷ್ಟು ಅಕ್ರಮ ಗಣಿಗಾರಿಕೆಯೇ ಎಂದು ಬಹಿರಂಗವಾಗಿ ಹೇಳಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ನಡೆದ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ ಹೊಸ ಆಡಳಿತ ಮಂಡಳಿಯೂ ಇದೇ ಅಕ್ರಮದಲ್ಲಿ ತೊಡಗಿದೆ ಎಂದು ದೂರಲಾಗಿದೆ. ಈ ಹಿಂದೆಯೇ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಸಂಘವು ಅಕ್ರಮ ಗಣಿಗಾರಿಕೆ ಮತ್ತು ಕಲ್ಲು ಸಾಗಾಣಿಕೆಗಾಗಿ ಸಂಘಕ್ಕೆ 75 ಕೋಟಿ ದಂಡ ವಿಧಿಸಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ೭೫ ಕೋಟಿ ದಂಡ ಕಟ್ಟಬೇಕಿದ್ದು ಗಣಿಗಾರಿಕೆ ಮಾತ್ರ ನಿಲ್ಲಿಸಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸಂಘದ ಅಕ್ರಮದ ಬಗ್ಗೆ ಸಹಕಾರ ಇಲಾಖೆ ಮತ್ತು ಗಣಿ ಇಲಾಖೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಕ್ರಮ ಗಣಿಗಾರಿಕೆಯನ್ನು ತಕ್ಷಣ ನಿಲ್ಲಿಸಿ, ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಮನವಿ ಗ್ರಾಮದ ಪರಿಶಿಷ್ಟರು ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾತಂತ್ರ್ಯ ದಿನಾಚರಣೆ ಆಚರಣೆ ಕುರಿತು ಪೂರ್ವಭಾವಿ ಸಭೆ
ಸರ್ಕಾರಿ ಜಾಗ ಒತ್ತುವರಿ ತೆರವಿಗೆ ಆಗ್ರಹಿಸಿ ಕೆಆರ್‌ಎಸ್‌ ಪ್ರತಿಭಟನೆ