ಅಜ್ಜಂಪುರ: ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷ ಎಂ. ಜೆ.ಕುಮಾರ್ ನೇತೃತ್ವದಲ್ಲಿ ನಡೆದು ವಾರ್ಷಿಕ ವರದಿ, ಅಂಕಿ ಅಂಶಗಳ ಪ್ರಗತಿ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಯಿತು.
ಅಜ್ಜಂಪುರ: ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷ ಎಂ. ಜೆ.ಕುಮಾರ್ ನೇತೃತ್ವದಲ್ಲಿ ನಡೆದು ವಾರ್ಷಿಕ ವರದಿ, ಅಂಕಿ ಅಂಶಗಳ ಪ್ರಗತಿ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಂ. ಜೆ.ಕುಮಾರ್ 23, 649 ಆಹಾರ ಪಡಿತರದಾರರಿಗೆ ನವೆಂಬರ್ ನಲ್ಲಿ 5 ಕೆಜಿ ಅಕ್ಕಿ, 3 ಕೆ.ಜಿ ರಾಗಿಯಂತೆ ಒಟ್ಟು ₹97, 76,190 ನಗದು ಹಣ ವರ್ಗಾವಣೆ ಮಾಡುತ್ತಿದೆ. ಪಂಚ ಗ್ಯಾರಂಟಿಗಳ ಒಟ್ಟು ಹಣ ₹18.20 ಕೋಟಿ ಗೃಹಲಕ್ಷ್ಮಿ ಯೋಜನೆಯಡಿ ನೇರ ಹಣ ವರ್ಗಾವಣೆ ಮಾಡಲಾಗುತ್ತದೆ. ಗೃಹಜ್ಯೋತಿಗೆ ಸಂಬಂಧಿಸಿದಂತೆ 75,000 ಫಲಾನುಭವಿಗಳಿಗೆ ಶೇ.90 ರಷ್ಟು ಸಬ್ಸಿಡಿ ಒಟ್ಟು ₹18.97 ಲಕ್ಷ ಮೆಸ್ಕಾಂ ಇಲಾಖೆಗೆ ಸಂದಾಯವಾಗಿದೆ. ಯುವನಿಧಿ ಯೋಜನೆಯನ್ನು ಜೂನ್-ಜುಲೈನಲ್ಲಿ 342 ಫಲಾನುಭವಿಗಳಿಗೆ ನೀಡಲಾಗಿರುವ ಭತ್ಯೆ ₹71,21,000 ಎಂದು ಸಭೆಯಲ್ಲಿ ತಿಳಿಸಿದರು.
ಸಿದ್ದರಾಮಯ್ಯ ಸರ್ಕಾರದ ಕಾರ್ಯದಲ್ಲಿ ಅತಿ ಹೆಚ್ಚು ಸಕ್ರಿಯವಾಗಿ ತಾಲೂಕಿನ ಅಭಿವೃದ್ಧಿ ಕಾರ್ಯ ಮಾಡಿದ ಶಾಸಕ ಜಿ. ಎಚ್. ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಸರ್ವ ಸದಸ್ಯರು ಹಾಗೂ ಸಾರ್ವಜನಿಕರು ಮನವಿ ಮಾಡಿದರು. ಈ ಸಭೆಯಲ್ಲಿ ಸದಸ್ಯರಾದ ಕಿರಣ್, ಮದನ್ ಕೆ ಆರ್, ಲತಾ, ಹೇಮಂತ್ ಬಿ.ಪಿ , ಲೋಹಿತ್ ಹಾಗೂ ಎಮ್. ಕೆ. ವಿಜಯ್ ಕುಮಾರ್, ಇ.ಒ ನೀವು ಸರ್ವ ಸದಸ್ಯರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.