ಶಿಕ್ಷಣದಿಂದ ದೇಶದ ಸರ್ವಾಂಗೀಣ ಅಭಿವೃದ್ಧಿ

KannadaprabhaNewsNetwork |  
Published : Sep 20, 2024, 01:44 AM IST
(19ಎನ್.ಆರ್.ಡಿ4 ಶ್ರೀಮಠದಿಂದ ಶಿಕ್ಷಕರು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಗೆ ಶಾಂತಲಿಂಗ ಶ್ರೀಗಳು ಸನ್ಮಾನ ಮಾಡುತ್ತಿದ್ದಾರೆ.)  | Kannada Prabha

ಸಾರಾಂಶ

ಡೀ ಪ್ರಪಂಚದಲ್ಲಿಯೇ ಸಂಸ್ಕೃತಿ ಮತ್ತು ಸಂಸ್ಕಾರದ ತವರೂರು ಭಾರತ, ಅಂತಹ ಪುಣ್ಯಭೂಮಿಯಲ್ಲಿ ಆಧುನೀಕರಣದ ಸೆಲೆಗೆ ಸಿಲುಕಿದ ಇವತ್ತಿನ ಮಕ್ಕಳು ಮತ್ತು ಯುವ ಜನತೆಯಲ್ಲಿ ಅದು ಮಾಯವಾಗುತ್ತಿದೆ

ನರಗುಂದ: ಶಿಕ್ಷಣದಿಂದ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಕುಟುಂಬ, ದೇಶದ ಅಭಿವೃದ್ಧಿ ವರ್ಗದ ಕೋಣೆಯಲ್ಲಿ ನಿರ್ಮಾಣವಾಗುತ್ತದೆ. ಅಲ್ಲಿ ನೀಡುವ ಪಠ್ಯಾನುಭ ಮನುಷ್ಯರನ್ನು ಮಹಾಮಾನವರನ್ನಾಗಿಸುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಗುರುನಾಥ ಹೂಗಾರ ಹೇಳಿದರು.

ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಶ್ರೀಗುರು ಬ್ರಹ್ಮಾನಂದ ಶಿವಾನುಭವ ಧರ್ಮ ಸಂಸ್ಥೆ ಹಾಗೂ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 362ನೇ ಮಾಸಿಕ ಶಿವಾನುಭವ ಹಾಗೂ ಶಿಕ್ಷಕಕರ ದಿನಾಚರಣೆ ನಿಮಿತ್ತ ಸಾಧಕ ಶಿಕ್ಷಕರಿಗೆ ಸತ್ಕಾರ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಶಿಕ್ಷಕರಿಲ್ಲದ ಜಗತ್ತು ಶೂನ್ಯಮಯ ಶಿಕ್ಷಕರಾದವರು ಅತ್ಯಂತ ಪ್ರಾಮಾಣಿವಾಗಿ ಹಾಗೂ ಇತರರಿಗೆ ಮಾದರಿಯಾಗಿರಬೇಕು. ವಿದ್ಯಾರ್ಥಿಗಳ ಆಸಕ್ತಿ ಗುರುತಿಸಿ ಅವರಿಗೆ ಪ್ರೀಯವಾದ ಕ್ಷೇತ್ರದಲ್ಲಿ ಅತ್ಯಂತ ಆಳಕ್ಕೆ ಹೋಗುವ ಪ್ರವೃತ್ತಿ ತನ್ನ ಶಿಷ್ಯರಲ್ಲಿ ಬೆಳೆಸುತ್ತಾರೋ ಅವರು ನಿಜವಾದ ಸಮರ್ಥ ಶಿಕ್ಷಕರು ಎಂದು ಹೇಳಿದರು.

ಪ್ರಥಮ ದರ್ಜೆ ಗುತ್ತಿಗೆದಾರ ಬಸವರಾಜ ಬಿಂಗಿ ಮಾತನಾಡಿ, ಇಡೀ ಪ್ರಪಂಚದಲ್ಲಿಯೇ ಸಂಸ್ಕೃತಿ ಮತ್ತು ಸಂಸ್ಕಾರದ ತವರೂರು ಭಾರತ, ಅಂತಹ ಪುಣ್ಯಭೂಮಿಯಲ್ಲಿ ಆಧುನೀಕರಣದ ಸೆಲೆಗೆ ಸಿಲುಕಿದ ಇವತ್ತಿನ ಮಕ್ಕಳು ಮತ್ತು ಯುವ ಜನತೆಯಲ್ಲಿ ಅದು ಮಾಯವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಿಗೆ, ಜಿಲ್ಲಾ ಉತ್ತಮ ಶಿಕ್ಷಕರಿಗೆ ಹಾಗೂ 2024ನೇ ಸಾಲಿನ ಶ್ರೇಷ್ಠ ವರ್ತಕ ಪ್ರಶಸ್ತಿಗೆ ಭಾಜನರಾದ ಸಲೀಮ ಮೇಗಲಮನಿ ಅವರನ್ನು ಶ್ರೀಮಠದಿಂದ ಸತ್ಕರಿಸಲಾಯಿತು.

ಶಾಂತಲಿಂಗ ಶ್ರೀಗಳು, ಶಿರೋಳದ ಜಗದ್ಗುರು ಯಚ್ಚರೇಶ್ವರ ಮಠದ ಅಭಿನವ ಯಚ್ಚರಸ್ವಾಮಿಗಳು, ಡಾ. ಗುರುಬಸವ ದೇವರು, ಸಂಪನ್ಮೂಲ ವ್ಯಕ್ತಿ ಎಸ್.ಬಿ.ಶಿವಳ್ಳಿ, ನಿವೃತ್ತ ಶಿಕ್ಷಕ ಎಸ್.ಬಿ. ದಂಡಿನ, ಎಸ್.ಬಿ. ಪಾಟೀಲ, ಪ್ರಾಚಾರ್ಯ ಬಿ.ಎಸ್. ಸಾಲೀಮಠ, ಮುಖ್ಯಶಿಕ್ಷಕ ಈರಣ್ಣ ಸೋನಾರ, ಪಾಂಡುರಂಗ ಬಡಿಗೇರ, ಶಿವಪ್ಪ ಬೋಳಶೆಟ್ಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಮಹಾಂತೇಶ ಹಿರೇಮಠ ಸ್ವಾಗತಿಸಿದರು, ಪ್ರೊ.ಆರ್.ಬಿ. ಚಿನಿವಾಲರ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ