ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಅರಣ್ಯ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಜಲ ರಕ್ಷಣೆ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರು ಗಿಡ ನೆಟ್ಟು ಪರಿಸರ ಉಳಿಸಲು ಘೋಷಣೆ ಮಾಡುವ ಮೂಲಕ ಮನುಷ್ಯ ವಾಸಿಸಲು ಒಳ್ಳೆಯ ವಾತಾವರಣಬೇಕು. ಉಸಿರಾಡಲು ಒಳ್ಳೆಯ ಗಾಳಿ, ಕುಡಿಯಲು ನೀರು, ತಿನ್ನಲು ಆಹಾರ ನಮ್ಮ ಸುತ್ತಲ ಪರಿಸರವನ್ನು ಸ್ವಚ್ಛಯಾಗಿಟ್ಟುಕೊಳ್ಳಬೇಕು ಎಂದರು.ಗಿಡಗಳನ್ನು ನಾವು ಬೆಳಸುವುದರಿಂದ ಮಳೆ, ಗಾಳಿ ಚನ್ನಾಗಿರುತ್ತದೆ. ಅದರಂತೆ ಕಾಡುಗಳು ಬೆಳೆದರೆ ಪ್ರಾಣಿ ಪಕ್ಷಿಗಳು ಉಳಿಯುತ್ತವೆ. ಜರಿಗಳಲ್ಲಿ ನೀರು ಕುಡಿದು ಜಲಚರಗಳ ತಿಂದು ಪ್ರಾಣಿಗಳಿಗೆ ಅಹಾರ, ನೀರು ಸಿಗುತ್ತದೆ. ಆದರೆ, ಮನುಷ್ಯ ಇವತ್ತಿನ ದಿನದಲ್ಲಿ ಅತಿಯಾದ ಆಸೆಯಿಂದ ವಿನಾಶದ ಅಂಚಿನಲ್ಲಿದ್ದಾನೆ ಎಂದು ವಿಷಾದಿಸಿದರು.
ನಂತರ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಂ.ಹರೀಶ್ ಕುಮಾರ್ ಮಾತನಾಡಿ, ಇಂದಿನಿಂದಲೆ ಜಲರಕ್ಷಣೆ ಮಾಡಬೇಕು. ಪರಿಸರ ಉಳಿಸಲು ಪಣ ತೊಟ್ಟು ಎಲ್ಲರಲ್ಲೂ ಪರಸರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡೋಣ ಎಂದರು.
ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಸತ್ಯನಾರಾಯಣ, ಕಾರ್ಯದರ್ಶಿ ಪವನ್ಗೌಡ, ವಲಯ ಅರಣ್ಯಾಧಿಕಾರಿ ವಿನೋದ್ ಗೌಡ, ಉಪಸ್ಥಿತಿಯಲ್ಲಿ ವಕೀಲ ಸಿ.ಕೆ. ಸೋಮು ಸೇರಿದಂತೆ ಇತರರು ಇದ್ದರು.