ಶೋಷಿತರಿಗೆ ಗೌರವಯುತ ಬದುಕು ಕಲ್ಪಿಸಿದ ಅಂಬೇಡ್ಕರ್

KannadaprabhaNewsNetwork |  
Published : Dec 07, 2024, 12:30 AM IST
6ಕೆಆರ್ ಎಂಎನ್ 6.ಜೆಪಿಜಿರಾಮನಗರದ ಚೈತನ್ಯ ಭವನದಲ್ಲಿ ಶುಕ್ರವಾರ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ನೇತೃತ್ವದಲ್ಲಿ  ನಡೆದ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ 68ನೇ ವರ್ಷದ ಮಹಾ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು ಪಾಲ್ಗೊಂಡಿರುವುದು. | Kannada Prabha

ಸಾರಾಂಶ

ರಾಮನಗರ: ದೇಶಕ್ಕೆ ಅದ್ವಿತೀಯ ಸಂವಿಧಾನವನ್ನು ರಚಿಸಿಕೊಡುವ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ನಮ್ಮೆಲ್ಲರ ಸ್ವಾಭಿಮಾನ ಸ್ವಾವಲಂಬನೆ ಮತ್ತು ಗೌರವಯುತ ಬದುಕಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಅನ್ನದಾನಪ್ಪ ಹೇಳಿದರು.

ರಾಮನಗರ: ದೇಶಕ್ಕೆ ಅದ್ವಿತೀಯ ಸಂವಿಧಾನವನ್ನು ರಚಿಸಿಕೊಡುವ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ನಮ್ಮೆಲ್ಲರ ಸ್ವಾಭಿಮಾನ ಸ್ವಾವಲಂಬನೆ ಮತ್ತು ಗೌರವಯುತ ಬದುಕಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಅನ್ನದಾನಪ್ಪ ಹೇಳಿದರು.

ನಗರದ ಚೈತನ್ಯ ಭವನದಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ನೇತೃತ್ವದಲ್ಲಿ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ 68ನೇ ವರ್ಷದ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಡಾ. ಅಂಬೇಡ್ಕರ್ ಈ ದೇಶದ ಬಹು ದೊಡ್ಡ ಆಸ್ತಿ. ಪ್ರಪಂಚವೇ ಅವರನ್ನು ಪೂಜ್ಯ ಭಾವನೆಯಿಂದ ನೋಡುತ್ತಿದೆ. ಅಂಬೇಡ್ಕರ್ ಬರೆದ ಸಂವಿಧಾನದಿಂದ ಇಂದು ಜನರು ಉತ್ತಮ ಜೀವನ ಕಾಣಲು ಸಾಧ್ಯ. ಭಗವಾನ್ ಬುದ್ಧನ ತತ್ವಗಳಿಂದ ಪ್ರಭಾವಿತರಾಗಿದ್ದ ಅಂಬೇಡ್ಕರ್ ಅಪ್ಪಟ ರಾಷ್ಟ್ರ ಪ್ರೇಮಿ. ದೇಶದ ಮಹಾಜನತೆ ನಿರಂತರವಾಗಿ ಮಹಾಪುರುಷನ ನೆನಪು ಮಾಡಿಕೊಳ್ಳಬೇಕಾಗಿದೆ. ಇಂದಿನ ಯುವಕರು ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದು ಹೇಳಿದರು.

ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಮುಖಂಡ ಮೈಸೂರು ಉಸ್ತುವಾರಿ ಎಂ.ನಾಗೇಶ್ ಮಾತನಾಡಿ, ಸಾಮಾಜಿಕ, ಶೈಕ್ಷಣಿಕವಾಗಿ ಜನರು ಸಂವಿಧಾನ ರಚನೆಗೂ ಮುನ್ನ ಸಾಕಷ್ಟು ನೊಂದಿದ್ದರು. ಅಂತಹ ಜನತೆಗೆ ಸಂವಿಧಾನದ ಮೂಲಕ ಸುಖ ಜೀವನಕ್ಕೆ ಮಾರ್ಗ ತೋರಿದವರು. ಡಾ. ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ಪ್ರಪಂಚವೇ ಕೊಂಡಾಡುತ್ತಿದೆ ಎಂದು ತಿಳಿಸಿದರು.

ಡಾ. ಅಂಬೇಡ್ಕರ್ ಅವರು ನಮ್ಮನ್ನಗಲಿ 68 ವರ್ಷವಾಗಿವೆ. ಅಂಬೇಡ್ಕರ್ ಅವರು ಒಬ್ಬ ತತ್ವಜ್ಞಾನಿ, ವಿದ್ವಾಂಸರು, ಸಕಲ ಪಾಂಡಿತ್ಯ ಹೊಂದಿದ್ದರು. ಅವರ ವಿಚಾರಧಾರೆಗಳು ಇಂದು ಪ್ರಪಂಚದಲ್ಲಿ ಪ್ರಚಲಿತವಾಗಿವೆ. ಸಂವಿಧಾನ ನಮಗೆ ಕೊಟ್ಟ ನಂತರ ಅನೇಕ ಕ್ರಾಂತಿಕಾರಿ ಬದಲಾವಣೆಗಳು ದೇಶದಲ್ಲಿ ಆಗಿವೆ ಎನ್ನುವುದಕ್ಕೆ ಹಲವಾರು ಸಾಕ್ಷಿಗಳು ಸಿಗುತ್ತವೆ. ಅಂತಹ ಮಹಾ ವ್ಯಕ್ತಿಯನ್ನು ಗೌರವಿಸುವ ಮೂಲಕ ಸದಾ ಸ್ಮರಿಸುತ್ತಾ ಮುನ್ನಡೆಯಬೇಕು ಎಂದರು.

ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಕಾರ್ಯದರ್ಶಿ ಗೌರಮ್ಮ ಶಿವಲಿಂಗೇಗೌಡ, ಜಿಲ್ಲಾಧ್ಯಕ್ಷ ವೆಂಕಟಾಚಲ, ಪ್ರಧಾನ ಕಾರ್ಯದರ್ಶಿ ಮುರುಗೇಶ್, ಜಿಲ್ಲಾ ಸಂಯೋಜಕ ಮಹದೇವ್, ಜಿಲ್ಲಾ ಉಪಾಧ್ಯಕ್ಷರಾದ ಬಳಗೆರೆ ಬೈರಾಜು, ವಿ. ಸ್ವಾಮಿ, ಶ್ರೀನಿವಾಸ್ ರಾವ್ , ಜಿಲ್ಲಾ ಕಾರ್ಯದರ್ಶಿಗಳಾದ ಕೃಷ್ಣಮೂರ್ತಿ, ದೊಡ್ಡಾಲಹಳ್ಳಿ ರಮೇಶ್, ಮುಖಂಡರಾದ ಮೆಳೇಕೋಟೆ ಶಿವಣ್ಣ, ಮಲ್ಲಂಗೆರೆ ಕೃಷ್ಣಪ್ಪ, ಶೋಭಾ, ನಾರಾಯಣಪ್ಪ, ಆಲ್ಬರ್ಟ್, ಜಯಂತ್, ಕೆ. ಗಿರೀಶ್, ಶರತ್ ಉಪಸ್ಥಿತರಿದ್ದರು.

6ಕೆಆರ್ ಎಂಎನ್ 6.ಜೆಪಿಜಿ

ರಾಮನಗರದ ಚೈತನ್ಯ ಭವನದಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಹಮ್ಮಿಕೊಂಡಿದ್ದ ಭಾರತರತ್ನ ಡಾ. ಅಂಬೇಡ್ಕರ್ ಅವರ 68ನೇ ವರ್ಷದ ಮಹಾ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು ಪಾಲ್ಗೊಂಡಿರುವುದು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ