ಅಮಿನಗಡ ವೀರಭಧ್ರೇಶ್ವರ ರಥೋತ್ಸವ ಸಂಭ್ರಮ

KannadaprabhaNewsNetwork |  
Published : Feb 15, 2024, 01:33 AM IST
ವಿಜೃಂಭಣೆಯಿಂದ ಜರುಗಿದ ಅಮೀನಗಡ ಶ್ರೀ ವೀರಭಧ್ರೇಶ್ವರ ರಥೋತ್ಸವ. | Kannada Prabha

ಸಾರಾಂಶ

ಅಮೀನಗಡ: ಪಟ್ಟಣದಲ್ಲಿ ಶ್ರೀ ವೀರಭಧ್ರೇಶ್ವರ ದೇವರ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು. ಪ್ರಾರಂಭದಲ್ಲಿ ಪಟ್ಟಣದ ಹಿರಿಯ ಪುರವಂತರಾದ ಚಂದ್ರಲಿಂಗಪ್ಪ ಬಸರಕೋಡ ಅವರ ಮನೆಯಿಂದ ತೇರಿನ ಕಳಸವನ್ನು ಮಂಗಳವಾದ್ಯಗಳೊಂದಿಗೆ ವಿಜೃಂಣೆಯಿಂದ ತರಲಾಯಿತು.

ಕನ್ನಡಪ್ರಭವಾರ್ತೆ ಅಮೀನಗಡ

ಪಟ್ಟಣದಲ್ಲಿ ಶ್ರೀ ವೀರಭಧ್ರೇಶ್ವರ ದೇವರ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು. ಪ್ರಾರಂಭದಲ್ಲಿ ಪಟ್ಟಣದ ಹಿರಿಯ ಪುರವಂತರಾದ ಚಂದ್ರಲಿಂಗಪ್ಪ ಬಸರಕೋಡ ಅವರ ಮನೆಯಿಂದ ತೇರಿನ ಕಳಸವನ್ನು ಮಂಗಳವಾದ್ಯಗಳೊಂದಿಗೆ ವಿಜೃಂಣೆಯಿಂದ ತರಲಾಯಿತು. ನಂತರ ಪಟ್ಟಣದ ಕುರುಹಿನಶೆಟ್ಟಿ ಸಮಾಜ, ಹಾಲುಮತ ಸಮಾಜ, ಶಿವಾಚಾರ ದೇವಾಂಗ ಸಮಾಜ, ಶಿವಸಿಂಪಿ ಸಮಾಜ, ವಿಶ್ವಕರ್ಮ ಸಮಾಜ, ಬಂಡಿವಡ್ಡರ ಸಮಾಜ, ವಿವಿಧ ಗಣ್ಯರಿಂದ ಹಾಗೂ ರಕ್ಕಸಗಿ ಗ್ರಾಮಸ್ಥರಿಂದ ತೇರಿಗೆ ವಿವಿಧ ರೀತಿಯ ಬಾಬತ್ತು ಸಲ್ಲಿಸುವ ಮೂಲಕ ಸಂಜೆ ಶ್ರೀ ವೀರಭಧ್ರೇಶ್ವರ ರಥೋತ್ಸವ ವಿಜೃಂಭಣೆಯಿಂದ ಜರುಗಿತು.

ಅಮೀನಗಡ, ರಕ್ಕಸಗಿ, ಸೂಳೇಬಾವಿ, ಗಂಗೂರ, ಚಿತ್ತರಗಿ, ಹುಲಗಿನಾಳ, ಕಲ್ಲಗೋನಾಳ ಮುಂತಾದ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಉತ್ತತ್ತಿ, ಲಿಂಬೆಹಣ್ಣು ಎಸೆಯುವುದರ ಮೂಲಕ ಭಕ್ತಿ ಸಮರ್ಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಯಕತ್ವ ಗೊಂದಲ ಮಧ್ಯೆ 13 ಕೈ ಶಾಸಕರು ವಿದೇಶಕ್ಕೆ :
ವಿದ್ಯಾರ್ಥಿಗಳ ಗೋಳು, ಕೇಳೋರು ಯಾರು?