ಪಟ್ಟಣದ ಗಾಂಧೀ ಕುಟೀರದಲ್ಲಿ ಸೋಮವಾರ ನಡೆದ ೪ನೇ ದಿನದ ಸಂಕಲ್ಪ ಉತ್ಸವದಲ್ಲಿ ಅಮ್ಮ ನಾಟಕ ಅತ್ಯಂತ ಮನಮೋಹಕವಾಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಕನ್ನಡಪ್ರಭ ವಾರ್ತೆ ಯಲ್ಲಾಪುರ
ಪಟ್ಟಣದ ಗಾಂಧೀ ಕುಟೀರದಲ್ಲಿ ಸೋಮವಾರ ನಡೆದ ೪ನೇ ದಿನದ ಸಂಕಲ್ಪ ಉತ್ಸವದಲ್ಲಿ ಅಮ್ಮ ನಾಟಕ ಅತ್ಯಂತ ಮನಮೋಹಕವಾಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ರಂಗಸಹ್ಯಾದಿ ಅಧ್ಯಕ್ಷ ಡಿ.ಎನ್. ಗಾಂಯ್ಕರ ಅವರ ಕಥೆ ಮತ್ತು ನಿರ್ದೇಶನದಲ್ಲಿ ಯಶಸ್ ಭಾಗ್ಯತ, ಆಶಾ ರವೀಂದ್ರ ಭಗನಗದ್ದೆ (ಕುಮಾರ), ಸರೋಜಾ ಪ್ರಶಾಂತ್ ಹೆಗಡೆ (ತಾಯಿ), ರಚನಾ ರವೀಂದ್ರ ಹೆಗಡೆ (ಯಂಕ), ಸಂಧ್ಯಾ ಶಾಂತಾರಾಮ ಹೆಗಡೆ (ಪರಿಮಳ), ಮಮತಾ ಪ್ರಕಾಶ ಭಟ್ಟ, ಸುಮಂಗಲಾ ಶ್ರೀಪಾದ ಭಟ್ಟ (ಗೆಳತಿಯರು), ಆಶಾ ಕೃಷ್ಣ ಪಟೇಲ್ (ಡಾಕ್ಟರ್), ಶ್ರೇಯಸ್ ಭಟ್ಟ, ಅಭಿರಾಮ ಹೆಗಡೆ, ಸಾಕೇತ್ ಭಟ್ಟ, ಆರ್ಯನ್ ಇನಾಮದಾರ, ಪುಣತಿ ಹೆಗಡೆ, ಆದ್ಯಾ ಪಟೇಲ, ಸುಮೇಧ ಭಟ್ಟ, ಅಪೇಕ್ಷ ಭಟ್ಟ, ಪುಗತಿ ನಾಯಕ, ವೈಷ್ಣವಿ ಕಲ್ಬುರ್ಗಿ, ಗಹನ ಪರಂಗಿ ಮಕ್ಕಳ ಪಾತ್ರಧಾರಿಗಳಾಗಿ ಅಭಿನಯಿಸಿದರು.
ಪ್ರವೀಣ ಇನಾಮದಾರ (ರಿದಂ ಪ್ಯಾಡ್), ಗಂಗಾ ಎಸ್. ಭಟ್ಟ, ಸಾನ್ನಿ ಇನಾಮದಾರ (ಹಿನ್ನೆಲೆ ಗಾಯನ), ಜಿ.ವಿ ಭಟ್ಟ, ಸಣ್ಣಪ್ಪ ಭಾಗ್ಯತ, ಗಾಯತ್ರಿ ಬೋಳಗುಡ್ಡೆ ಸಹಕರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.