ಸಿಕ್ಕ ಹಣ ವಾಪಸ್‌ ನೀಡಿ ಪ್ರಾಮಾಣಿಕತೆ ಮೆರೆದ ವಿದ್ಯಾರ್ಥಿ

KannadaprabhaNewsNetwork |  
Published : May 04, 2024, 01:37 AM ISTUpdated : May 04, 2024, 11:38 AM IST
ಹಣ | Kannada Prabha

ಸಾರಾಂಶ

ರಸ್ತೆಯಲ್ಲಿ ಸಿಕ್ಕ ಹಣವನ್ನು ಮಾಲೀಕರಿಗೆ ಹಿಂದಿರುಗಿಸುವ ಮೂಲಕ ವಿದ್ಯಾರ್ಥಿಯೊಬ್ಬ ಪ್ರಾಮಾಣಿಕತೆ ಮೆರದಿದ್ದಾನೆ.

ಸಂಕೇಶ್ವರ: ರಸ್ತೆಯಲ್ಲಿ ಸಿಕ್ಕ ಹಣವನ್ನು ಮಾಲೀಕರಿಗೆ ಹಿಂದಿರುಗಿಸುವ ಮೂಲಕ ವಿದ್ಯಾರ್ಥಿಯೊಬ್ಬ ಪ್ರಾಮಾಣಿಕತೆ ಮೆರದಿದ್ದಾನೆ. ಮಹಾರಾಷ್ಟ್ರದ ಆಜರಾ ತಾಲೂಕಿನ ದೇವಕಾನಗಾವ್ ಗ್ರಾಮದ ಯುವಕ ಅಜಿಂಕ್ಯಾ ದೇಸಾಯಿ ಪ್ರಾಮಾಣಿಕತೆ ಮೆರೆದ ವಿದ್ಯಾರ್ಥಿ.

 ಸಂಕೇಶ್ವರ ಪಟ್ಟಣದ ಮಹಾತ್ಮ ಗಾಂಧಿ ಕಾನೂನು ಕಾಲೇಜುನಲ್ಲಿ ಓದುತ್ತಿರುವ ಈತ ಪಟ್ಟಣದ ರಾಣಿ ಚನ್ನಮ್ಮ ಸರ್ಕಲ್‌ನಲ್ಲಿ ತೆರಳುತ್ತಿದ್ದಾಗ ₹16,900 ಹಣ ಸಿಕ್ಕಿದೆ. 

ನಂತರ ಹಣದ ಮಾಲೀಕರು ಯಾರೆಂದು ವಿಚಾರಿಸಿದ್ದು. ಬಳಿಕ ಅವರು ಸಿಕ್ಕ ನಂತರ ಅವರಿಗೆ ಹಣವನ್ನು ವಾಪಸ್‌ ನೀಡಿದ್ದಾನೆ. ಕೇಸ್ತಿ ಗ್ರಾಮದ ಮಹಿಳೆ ಹಣ ಕಳೆದುಕೊಂಡ ಮಹಿಳೆ. ನಡೆದುಕೊಂಡು ಹೋಗುವಾಗ ಹಣವನ್ನು ಕಳೆದುಕೊಂಡು ಆ ಮಹಿಳೆ ಕಂಗಾಲಾಗಿದಳು. ಅವಳಿಗೆ ತಮ್ಮ ಹಣವನ್ನು ಮರಳಿಸಿದಕ್ಕೆಅಜಿಂಕ್ಯಾ ದೇಸಾಯಿ ಹಾಗೂ ಆತನ ಸ್ನೇಹಿತ ಸಾಮ್ರಾಟ್ ಟಿಕೆ ಅವರ ಪ್ರಾಮಾಣಿಕತೆಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಮರಳಿ ಸಿಕ್ಕ ಹಣವನ್ನು ಪಡೆದ ಮಹಿಳೆ ಧನ್ಯವಾದ ಹೇಳಿದ್ದಾಳೆ.02ಎಸ್ ಎನ್ ಕೆ01

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ