ಹೊಸಪೇಟೆ: ಮಾಜಿ ಸಚಿವ ಆನಂದ ಸಿಂಗ್ ಅವರ ಜನ್ಮದಿನವನ್ನು ನಗರ ಸೇರಿದಂತೆ ಹಂಪಿ, ಕಮಲಾಪುರ ಹೋಬಳಿ ಪ್ರದೇಶದಲ್ಲಿ ಅವರ ಅಭಿಮಾನಿಗಳು, ಬಿಜೆಪಿ ಮುಖಂಡರು, ಕಾರ್ಯಕರ್ತರು ಆಚರಿಸಿದರು.ನಗರದ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಣೆ ಮಾಡಲಾಯಿತು. ಇನ್ನು ನಗರಸಭೆ ಎದುರು ಅನ್ನ ಸಂತರ್ಪಣೆ ಕೂಡ ನಡೆಸಲಾಯಿತು.
ಅನ್ನಸಂತರ್ಪಣೆ:ನಗರದ ನಗರಸಭೆ ಎದುರು ಆನಂದ ಸಿಂಗ್ ಅವರ ಅಭಿಮಾನಿಗಳು ಹಾಗೂ ನಗರಸಭೆ ಉಪಾಧ್ಯಕ್ಷ ರಮೇಶ್ ಗುಪ್ತ ಅವರ ನೇತೃತ್ವದಲ್ಲಿ ಅನ್ನಸಂತರ್ಪಣೆ ನಡೆಸಲಾಯಿತು. ನಗರಸಭೆ ಸದಸ್ಯ ತಾರಿಹಳ್ಳಿ ಜಂಬುನಾಥ ಸೇರಿದಂತೆ ಮತ್ತಿತರರಿದ್ದರು.
ಬಿಜೆಪಿ ಕಚೇರಿಯಲ್ಲಿ ಆಚರಣೆ:ಮಾಜಿ ಸಚಿವ ಆನಂದ ಸಿಂಗ್ರ ಜನ್ಮದಿನ ನಿಮಿತ್ತ ಬಿಜೆಪಿ ಕಚೇರಿಯಲ್ಲಿ ಕೇಕ್ ಕತ್ತರಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಲಾಯಿತು. ಬಳಿಕ ನಗರದ ನೂರು ಹಾಸಿಗೆ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಶಂಕರ್ ಮೇಟಿ, ಮುಖಂಡರಾದ ಅಯ್ಯಾಳಿ ತಿಮ್ಮಪ್ಪ, ಅಶೋಕ್ ಜೀರೆ, ಸಾಲಿಸಿದ್ಧಯ್ಯಸ್ವಾಮಿ, ನಗರಸಭೆ ಸದಸ್ಯರಾದ ಎಲ್.ಎಸ್.ಆನಂದ, ಜೀವರತ್ನಂ, ಮುಖಂಡರಾದ ನಾಗೇಂದ್ರ, ಮಧುರಚನ್ನ ಶಾಸ್ತ್ರಿ, ಆರ್. ನಾಗರಾಜ್, ಉಮಾ, ಪೂರ್ಣಿಮಾ, ರೇಣುಕಮ್ಮ, ವಿ.ಸಂಧ್ಯಾ, ಹೊಸರಮ್ಮ ಮತ್ತಿತರರಿದ್ದರು.ಹೋಮ, ವಿಶೇಷ ಪೂಜೆ:
ಆನಂದ್ ಸಿಂಗ್ ಜನ್ಮದಿನದ ನಿಮಿತ್ತ ಸಿದ್ದಾರ್ಥ್ ಸಿಂಗ್ ಹಾಗೂ ಆನಂದ ಸಿಂಗ್ ಅಭಿಮಾನಿಗಳ ವತಿಯಿಂದ ನಗರದ ಶ್ರೀ ಭಟ್ರಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹೋಮ ಹಾಗೂ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಯಲ್ಲಿ ಹಣ್ಣು, ಬ್ರೆಡ್ ವಿತರಿಸಲಾಯಿತು. ತಾಯಪ್ಪ ದೊಡ್ಡಮನಿ, ನಾಗರಾಜ, ಆ್ಯಂಟನಿ ದಾಸ್ ಮತ್ತಿತರರಿದ್ದರು.ಶ್ರೀವಿರೂಪಾಕ್ಷೇಶ್ವರನಿಗೆ ವಿಶೇಷ ಪೂಜೆ:
ಮಾಜಿ ಸಚಿವ ಆನಂದ ಸಿಂಗ್ ಜನ್ಮ ದಿನದ ನಿಮಿತ್ತ ಹಂಪಿಯಲ್ಲಿ ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಒಕ್ಕೂಟದಿಂದ ಶ್ರೀ ವಿರೂಪಾಕ್ಷನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಒಕ್ಕೂಟದಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.ಒಕ್ಕೂಟದ ಅಧ್ಯಕ್ಷ ಡಾ. ವಿಶ್ವನಾಥ ಮಾಳಗಿ, ಗೋಪಾಲ್, ರಾಮಕೃಷ್ಣ , ಶಿವಕುಮಾರ್, ಈರಣ್ಣ ಪೂಜಾರಿ, ಸೋಮೇಶ್, ಪರಶುರಾಮ್, ಸುರೇಶ್, ರಘು, ನಾಗರಾಜ್, ಮಂಜುನಾಥ್, ರಾಜಾಹುಲಿ, ಶರೀಫ್ ಮತ್ತಿತರರಿದ್ದರು.