ಜವರಿಕೊಪ್ಪಲು ಮಕ್ಕಳಿಗೆ ಕೊಟ್ಟಿಗೆಯೇ ಅಂಗನವಾಡಿ

KannadaprabhaNewsNetwork |  
Published : May 26, 2025, 12:33 AM ISTUpdated : May 26, 2025, 12:34 AM IST
ಉದ್ಘಾಟನೆಗೊಳ್ಳದ ಜವರಿಕೊಪ್ಪಲು ಅಂಗನವಾಡಿ | Kannada Prabha

ಸಾರಾಂಶ

ಹೊಳೆನರಸೀಪುರ ತಾಲೂಕಿನ ಜವರಿಕೊಪ್ಪಲು ಗ್ರಾಮದಲ್ಲಿ ಕಳೆದ ಏಳೆಂಟು ವರ್ಷಗಳಿಂದ ಕುಂಟುತ್ತಾ ಸಾಗುತ್ತಿರುವ ಅಂಗನವಾಡಿ ಕಟ್ಟಡವು ಬಣ್ಣದಿಂದ ಕಂಗೊಳಿಸುತ್ತಿದ್ದರೂ, ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸದ ಹಿನ್ನೆಲೆಯಲ್ಲಿ ಉದ್ಘಾಟನೆಯ ಭಾಗ್ಯ ಕಾಣದೇ, ಪುಟ್ಟಮಕ್ಕಳ ಕಲಿಕೆಗೆ ಕೊಟ್ಟಿಗೆ ಭಾಗ್ಯವೇ ಗತಿಯಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಕಲಿಯುವ ತವಕದ ಪುಟ್ಟಮಕ್ಕಳ ಕೊಟ್ಟಿಗೆ ಭಾಗ್ಯಕ್ಕೆ ಮುಕ್ತಿ ಕಾಣಿಸಲು ಹಿರಿಯ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕಿದೆ.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ತಾಲೂಕಿನ ಜವರಿಕೊಪ್ಪಲು ಗ್ರಾಮದಲ್ಲಿ ಕಳೆದ ಏಳೆಂಟು ವರ್ಷಗಳಿಂದ ಕುಂಟುತ್ತಾ ಸಾಗುತ್ತಿರುವ ಅಂಗನವಾಡಿ ಕಟ್ಟಡವು ಬಣ್ಣದಿಂದ ಕಂಗೊಳಿಸುತ್ತಿದ್ದರೂ, ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸದ ಹಿನ್ನೆಲೆಯಲ್ಲಿ ಉದ್ಘಾಟನೆಯ ಭಾಗ್ಯ ಕಾಣದೇ, ಪುಟ್ಟಮಕ್ಕಳ ಕಲಿಕೆಗೆ ಕೊಟ್ಟಿಗೆ ಭಾಗ್ಯವೇ ಗತಿಯಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಹಳ್ಳಿಮೈಸೂರು ಹೋಬಳಿಯ ಜವರಿಕೊಪ್ಪಲಿನಲ್ಲಿ ಕುರುಬ ಸಮುದಾಯದ ೧೦೦ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿದ್ದು, ಕೃಷಿ ಹಾಗೂ ಮೇಕೆ ಸಾಕಾಣಿಕೆ ಇವರುಗಳ ವೃತ್ತಿಯಾಗಿದೆ ಹಾಗೂ ೨೦ಕ್ಕೂ ಹೆಚ್ಚು ಪುಟ್ಟ ಮಕ್ಕಳು ಅಂಗನವಾಡಿಯಲ್ಲಿ ಕಲಿಯುತ್ತಿದ್ದಾರೆ. ಶಾಶ್ವತ ಕಟ್ಟಡವಿಲ್ಲದೇ ಲಭ್ಯವಿದ್ದ ಒಂದು ಕೊಟ್ಟಿಗೆಯಲ್ಲಿ ಅಂಗನವಾಡಿ ನಡೆಸಲಾಗುತ್ತಿದ್ದು, ಆ ಕೊಠಡಿ ಪುಟ್ಟಮಕ್ಕಳ ಕಲಿಕೆಗೆ ಪೂರಕ ವಾತಾವರಣ ಉಂಟು ಮಾಡದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಸತತ ಪ್ರಯತ್ನದ ಫಲವಾಗಿ ಏಳೆಂಟು ವರ್ಷಗಳ ಹಿಂದೆ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ಮಾಡಲಾಗಿತ್ತು. ಇತ್ತೀಚೆಗೆ ಕಟ್ಟಡದ ನಿರ್ಮಾಣ ಕಾರ್ಯ ಪೂರ್ಣವಾಗಿದ್ದರೂ, ಮೂಲಭೂತ ಸೌಲಭ್ಯಗಳಲ್ಲಿ ಅಗತ್ಯವಾದ ಶೌಚಾಲಯವಿದ್ದರೂ ಶೌಚಗುಂಡಿ ವ್ಯವಸ್ಥೆ ಮಾಡಿಲ್ಲ ಹಾಗೂ ವಿದ್ಯುತ್ ವೈರಿಂಗ್ ಮಾಡದ ಹಿನ್ನೆಲೆಯಲ್ಲಿ ಉದ್ಘಾಟನೆ ಭಾಗ್ಯ ಕಾಣದೇ ಕಲಿಯುವ ತವಕದ ಪುಟ್ಟಮಕ್ಕಳ ಕೊಟ್ಟಿಗೆ ಭಾಗ್ಯಕ್ಕೆ ಮುಕ್ತಿ ಕಾಣಿಸಲು ಹಿರಿಯ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ